Tuesday, June 15, 2010

ಹೇಳದೆ ಕಾರಣ ಹೋದೆಯಾ...


ಮತ್ತೆ ಮುಂಗಾರು...ಕನ್ನಡದ ಹೊಸಬರ ಚಿತ್ರವಿದು. ಮುಂಗಾರು ಮಳೆಯಂತಹ ಚಿತ್ರಕೊಟ್ಟ ಅದೇ ಇ.ಕೃಷ್ಣಪ್ಪ ಕನ್ನಡಿಗರಿಗೆ ಮುಂಗಾರು ಮಳೆಯ ಸಿಂಚನ ಕೊಡಲಿದ್ದಾರೆ. ಆದ್ರೆ, ಈ ಚಿತ್ರದಲ್ಲಿಯ ಮಳೆ ಎಲ್ಲಿ ಬೇಕೊ ಅಲ್ಲಿ ಮಾತ್ರವಿರುತ್ತದೆ.ಆರಂಭದಿಂದ ಹಿಡಿದು ಅಂತ್ಯದವರೆಗೂ ಮಳೆಯ ತಣ್ಣನೆಯ ಅನುಭವ ಆಗ್ತಾನೆ ಇರುತ್ತದೆ. ಆದ್ರೂ, ಮಳೆ ಸಬ್ಜೆಕ್ಟ್ನ ಈ ಚಿತ್ರದಲ್ಲಿ ಕೆಲವು ಗಂಭರವ ವಿಷಯಗಳೂ ಇವೆ.ಅವುಗಳೇನು ಅನ್ನೊದು ಇನ್ನಷ್ಟೆ ಗೊತ್ತಾಗಬೇಕಿದೆ.

ವಿಷಯ ಸದ್ಯ ಇದಲ್ಲ.ಚಿತ್ರದ ಹಾಡಿನದು.ಸುಮಾರು ಆರು ಹಾಡುಗಳ ಮತ್ತೆ ಮುಂಗಾರು ಚಿತ್ರದಲ್ಲಿ ಒಂದು ಪ್ಯಾತೋ ಸಾಂಗ್ ಇದೆ. ಹಿಂದಿಯ ಗಾಯಕಿ ಆಶಾ ಭೋಸ್ಲೆ ಇದಕ್ಕೆ ಧ್ವನಿಯಾಗಿದ್ದಾರೆ. ಕನ್ನಡವೇ ಬರದಿರುವ ಆಶಾ ದ್ವಾರ್ಕಿ ರಾಘವ್ ಬರೆದ ಹಾಡಿಗೆ ಭಾವ ತುಂಬಿದ್ದಾರೆ. ಮಳೆಯ ಜೊತೆ..ಜೊತೆಗೆ ಈ ಹಾಡು ಮನದಲ್ಲಿ ವಿರಹದ ನೋವು ಬಿಡುತ್ತದೆ.ಮಳೆ ಬಂದು ಹೋದ ಮೇಲೂ ಹಾಡು ಆಗಾಗ ಕಾಡುವಂತಿದೆ. ಹೀಗಂತ ಚಿತ್ರ ತಂಡವೇ ಸಿದ್ಧಗೊಳಿಸಿದ 20 ನಿಮಿಷದ ಪ್ರಮೋಷ್ ನಲ್ಲಿ ದೃಶ್ಯಗಳು ಮತ್ತೆ ಮುಂಗಾರು ಚಿತ್ರದ ಪುಟ್ಟ ಸೆಳೆತವನ್ನ ಕಟ್ಟಿಕೊಡುತ್ತವೆ.ಇಲ್ಲಿ ತೋರಿದ ಆಶಾ ಹಾಡು ಮತ್ತೆ..ಮತ್ತೆ ಕಾಡುತ್ತದೆ ಬಿಟ್ಟು ಹೋದ ಕಾರಣವ ಕೇಳುತ್ತದೆ...

ಹೇಳದೆ ಕಾರಣ ಹೋದೆಯಾ...ಬಹು ದೂರ....


ಈ ರೀತಿಯ ಪಲ್ಲವಿಯ ಹಾಡು ರವಿಬೆಳೆಗೆರೆ ಬರೆದ "ಹೇಳಿ ಹೋಗು ಕಾರಣ' ಕಾದಂಬರಿಯನ್ನ ನೆನಪಿಸುತ್ತದೆ. ಬಿ.ಆರ್.ಲಕ್ಷ್ಮಣ ರಾವ್ ರಚಿಸಿದ ಹೇಳಿ ಹೋಗು ಕಾರಣ ಕವಿತೆಯನ್ನ ನೆನಪಿಸುತ್ತದೆ.ಇದೇ ಗೀತೆಗೆನೇ ಸಂಗೀತ ನೀಡಿ ತಾವೇ ಹಾಡಿದ್ದ ಸಿ.ಅಶ್ವಥ್ ಅವರ ಧ್ವನಿಯೂ ಕಿವಿಯಲ್ಲಿ ಗುಂಗುಟ್ಟುತ್ತದೆ..

ಹೇಳಿ ಹೋಗು ಕಾರಣ ಹೋಗುವಾ ಮೊದಲು
ನನ್ನ ಬಾಳಿನಿಂದ ದೂರವಾಗುವ ಮೊದಲು..

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ..

ಇನ್ನಷ್ಟು ಸಾಲುಗಳು ಈ ರಚನೆಯಲ್ಲಿವೆ. ಆದ್ರೆ, ಡೈರೆಕ್ಟರ್ ರಾಘವ್ ಮೊದಲ ಸಾಲಿಗೆ ಯಾರ ಬರಹ ಪ್ರೇರಣೆಯಾಗಿದೆಯೋ.ಇದಂತು ಗೊತ್ತಿಲ್ಲ. ಮತ್ತೆ ಮುಂಗಾರು ಚಿತ್ರದ ಗೀತೆಗಳು ಬಹುತೇಕ ಕೇಳುವಂತಿವೆ.ಚಿತ್ರದ ಆಡಿಯೋಗಳು ಇನ್ನು ರಿಲೀಜ್ ಆಗಿಲ್ಲ. ಆದರೆ,ಈಗಾಗಲೇ ನಮಗೆ ತೋರಿದ ಹಾಡಿನ ತುಣುಕುಗಳ ಆಧಾರಿಸಿ ಚೆನ್ನಾಗಿವೆ ಹಾಡುಗಳು ಅಂತ ಹೇಳಬಹುದು. ಕೇವಲ ಆಶಾ ಬೋಂಸ್ಲೆ ಅಲ್ಲ, ಹರಿಹರನ್, ಶ್ರೇಯಾ ಘೋಷಾಲ್, ಕನ್ನಡದ ವಿಜಯ್ ಪ್ರಕಾಶ್ ಸಹ ಮತ್ತೆ ಮುಂಗಾರು ಚಿತ್ರದಲ್ಲಿ ಗೀತೆಗೆ ಧ್ವನಿಯಾಗಿದ್ದಾರೆ. ಇವುಗಳಲ್ಲಿ ಡಾಕ್ಟರ್ ನಾಗೇಂದ್ರ ಪ್ರಸಾದ್ ಬರೆದ ಗೀತೆ ತುಂಬಾನೆ ಚೆನ್ನಾಗಿದೆ.ಬದಲಾಯಿತು..ಬದಲಾಯಿತು ಅಂತ ಆರಂಭವಾಗುವ ಈ ಗೀತೆ ಹರಿಹನ್ ಕಂಠದಲ್ಲಿ ಕೇಳುಗರ ಮೂಡ ನಿಜಕ್ಕೂ ಬದಲಿಸುತ್ತದೆ.

ಹೇಳದೆ ಕಾರಣ ಹೋಗುವ ಹಾಡುಗಳ ಸೆಳೆತ ಒಂದು ಮತ್ತೊಂದು ಗೀತೆ ಬರುವವರೆಗೆ ಇರುತ್ತದೆ. ಇನ್ನಾವುದೋ ಹಾಡು ಎದೆ ತಾಕಿದಾಗ ಹಳೆ ನೆನಪು ತಾಜಾ ಆಗುತ್ತವೆ.


ರೇವನ್ ಪಿ.ಜೇವೂರ್

No comments:

Post a Comment