Sunday, November 20, 2011

ಕನ್ನಡದಲ್ಲಿ ಚಾರ್ಮಿ ಮೋಹಕತೆ...

ಚಾರ್ಮಿ ಕೌರ್..ಮತ್ತೆ ಕನ್ನಡೆ ಬಂದಿದ್ದಾರೆ. ಆಗ ಓಂ ಸಾಯಿ ಪ್ರಕಾಶ್ ಈ ಪಂಜಾಬ್ ಬೆಡಗಿಯನ್ನ ಕನ್ನಡಕ್ಕೆ ತಂದಿದ್ರು. ೨೦೦೭ ರಲ್ಲಿ ತೆರೆ ಕಂಡ `ಲವ ಕುಶ' ಚಿತ್ರದಲ್ಲಿ ಚಾರ್ಮಿ ಕೌರ್ ಮುದ್ದು..ಮುದ್ದಾಗಿ ಕಂಡು ಕನ್ನಡಿಗರ ಕಣ್ಣುಗಳನ್ನ ಸೆಳೆದಿದ್ದರು. ಬಳಿಕ ಕೌರ್ ಎಂಬ ಈ ಗುಂಡು..ಗುಂಡಾದ ಹುಡುಗಿ ಕನ್ನಡಕ್ಕೆ ಬರಲೇ ಇಲ್ಲ...ಆದರೆ ದೇವ್ ಸನ್ ಆಫ್ ಮುದ್ದೇಗೌಡ ಚಿತ್ರದಲ್ಲಿ ಚಾರ್ಮಿ ಕಾಣಿಸಿಕೋಳ್ಳುತ್ತಿದ್ದಾರೆ....




ಹೌದು...! ಚಾರ್ಮಿಯನ್ನ ಕನ್ನಡಕ್ಕೆ ತರೊ ಕೆಲಸವನ್ನ ನಿರ್ದೇಶಕ ಇಂದ್ರಜೀತ್ ಮಾಡಿದ್ದಾರೆ. ಹಿಂದೆಂದೂ ನಿರ್ವಹಿಸದೇ ಇರೋ ಪಾತ್ರವನ್ನೇ ಇಲ್ಲಿ ಕೊಟ್ಟಿದ್ದಾರೆ. ಆ ಬಗ್ಗೆ ಮಾತನಾಡೋ ಚಾರ್ಮಿ ಮೊನ್ನೆ ಚಿತ್ರೀಕರಣದ ಜಾಗದಲ್ಲಿ ಸಿಕ್ಕಿದ್ರು. ಬೆಂಗಳೂರಿನಲ್ಲಿರೊ ಕರಿಷ್ಮಾ ಹಿಲ್ಸ್ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಡುವಿನ ವೇಳೆ ಚಾರ್ಮಿ ಮಾತು ಶುರುವಾದವು....


ಚಾರ್ಮಿಗೆ
ಇಲ್ಲಿ ಹೊಸ ಥರದ ಪಾತ್ರವೇ ಸಿಕ್ಕಿದೆ. ನಾವು-ನೀವೂ ನೋಡಿರೋ ಹಾಗೆ ಚಾರ್ಮಿಯಿಲ್ಲಿ ನೃತ್ಯನಿರ್ದೇಶಕಿ. ಅದು ಚಲನಚಿತ್ರದ ನೃತ್ಯ ನಿರ್ದೇಶಕಿ. ತಾರೆಯರಿಗೇನೆ ನೃತ್ಯ ಹೇಳಿಕೊಡುವ ತಾರೆ...ಒಂಚೂರು ಜೋರು..ಇನ್ನೊಂಚೂರು ಗಟ್ಟಿಗಿತ್ತಿ....ಎಲ್ಲವನ್ನೂ ತೋರಬೇಕು. ಅಂತಹ ಪಾತ್ರವೇ ಸಿಕ್ಕಿರೊದ್ರಿಂದ ಈಗ ಖುಷಿ..ಖುಷಿಯಾಗಿ ಕೆಲಸ ಮಾಡ್ತಿದ್ದಾರೆ...

ಆದ್ರೂ, ಇಲ್ಲಿ ಬರಲಿಕ್ಕೆ ಒಂದು ಕಾರಣವೂ ಇದೆ. ಅದುವೇ ಸೌಂದರ್ಯ. ನಿರ್ದೇಶಕ ಇಂದ್ರಜೀತ್ ತಮ್ಮನ್ನ ತೆರೆ ಮೇಲೆ ಇನ್ನೂ ಚೆನ್ನಾಗಿ ತೋರುವ ಭರವಸೆ ಕೊಟ್ಟಿದ್ದಾರೆ. ಅದೇ ಒಂದು ದಟ್ಟ ಉತ್ಸಾಹದಲ್ಲಿಯೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ....

ದೇವ್ ಸನ್ ಆಫ್ ಮುದ್ದೇಗೌಡ ಅಂತೀರಾ...ನಾಯಕ-ನಾಯಕಿ ಎರಡೂ ಚಾರ್ಮಿನಾ ಅನ್ನೋ ಅನುಮಾನ ನಿಮ್ಮಲ್ಲಿ ಈಗಲೇ ಬಂದಿರಬೇಕು. ಆದರೆ, ಅದಲ್ಲ ಬಿಡಿ. ಚಾರ್ಮಿಗೆ ಇಲ್ಲೊಬ್ಬ ನಾಯಕ ಇದ್ದಾನೆ. ಅದುವೇ ಕುಳಿಕೆನ್ನೆ ಹುಡುಗ ದಿಗಂತ್. ಹಿಂದಿನ ಚಿತ್ರಕ್ಕಿಂತಲೂ ಇಲ್ಲಿ ಮೋಹ...ಮನಮೋಹಕವಾಗಿದ್ದಾರೆ...ತೆಲೆಗೂದಲ ಬಣ್ಣವನ್ನ ಬದಲಿಸಿಕೊಂಡು ಕೊಂಚ ಜಾಸ್ತಿನೇ ಆರ್ಕಷಕವಾಗಿದ್ದಾರೆ.ಚಿತ್ರವೂ ಅದನ್ನೇ ಬಯಸೋದ್ರಿಂದ ದಿಗಂತ್ ಹೆಚ್ಚೇ ಗ್ಲಾಮರಸ್ ಆಗಿದ್ದಾರೆ...

ಇಂದ್ರಜೀತ್ ಲಂಕೇಶ್ ರುಚಿನೂ ಹಾಗೇ ಇದೇ ಅಲ್ಲವೇ. ಆ ಆಸೆಗಳಿಗೆ ಒಂದು ಕಡೆ ಚಾರ್ಮಿ. ಇನ್ನೊಂದು ಕಡೆ ದಿಗಂತ್ ಇದ್ದಾರೆ. ಇನ್ನು ಅನೇಕ ಕಲಾವಿದರೂ ಚಿತ್ರದಲ್ಲಿದ್ದಾರೆ. ಆದರೆ, ಸದ್ಯಕ್ಕೆ ಚಾರ್ಮಿ ಮತ್ತು ದಿಗಂತ್ ಅಭಿನಯದ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಇಂದ್ರಜೀತ್ ಹೇಳೊವಂತೆ ಚಿತ್ರ ತೆರೆಗೆ ಬಂದ ಮೇಲೆ ಭಾರೀ ಸುದ್ದಿಯನ್ನೂ ಮಾಡಲಿದೆ. ವಿವಾದಕ್ಕೂ ಸಿಲುಕುವ ಸಾಧ್ಯತೆನೂ ಇದೆ. ಆದ್ರೆ, ಅದ್ಯಾವ ವಿಷ್ಯವನ್ನ ತೆಗೆದುಕೊಂಡು ಇಂದ್ರಜೀತ್ ಸಿನಿಮಾ ಮಾಡ್ತಿದ್ದಾರೆಂಬ ರಹಸ್ಯವನ್ನಂತೂ ಬಿಟ್ಟುಕೊಟ್ಟಿಲ್ಲ..


-ರೇವನ್ ಪಿ.ಜೇವೂರ್

No comments:

Post a Comment