Sunday, November 20, 2011

ಕನ್ನಡದಲ್ಲಿ ಚಾರ್ಮಿ ಮೋಹಕತೆ...

ಚಾರ್ಮಿ ಕೌರ್..ಮತ್ತೆ ಕನ್ನಡೆ ಬಂದಿದ್ದಾರೆ. ಆಗ ಓಂ ಸಾಯಿ ಪ್ರಕಾಶ್ ಈ ಪಂಜಾಬ್ ಬೆಡಗಿಯನ್ನ ಕನ್ನಡಕ್ಕೆ ತಂದಿದ್ರು. ೨೦೦೭ ರಲ್ಲಿ ತೆರೆ ಕಂಡ `ಲವ ಕುಶ' ಚಿತ್ರದಲ್ಲಿ ಚಾರ್ಮಿ ಕೌರ್ ಮುದ್ದು..ಮುದ್ದಾಗಿ ಕಂಡು ಕನ್ನಡಿಗರ ಕಣ್ಣುಗಳನ್ನ ಸೆಳೆದಿದ್ದರು. ಬಳಿಕ ಕೌರ್ ಎಂಬ ಈ ಗುಂಡು..ಗುಂಡಾದ ಹುಡುಗಿ ಕನ್ನಡಕ್ಕೆ ಬರಲೇ ಇಲ್ಲ...ಆದರೆ ದೇವ್ ಸನ್ ಆಫ್ ಮುದ್ದೇಗೌಡ ಚಿತ್ರದಲ್ಲಿ ಚಾರ್ಮಿ ಕಾಣಿಸಿಕೋಳ್ಳುತ್ತಿದ್ದಾರೆ....




ಹೌದು...! ಚಾರ್ಮಿಯನ್ನ ಕನ್ನಡಕ್ಕೆ ತರೊ ಕೆಲಸವನ್ನ ನಿರ್ದೇಶಕ ಇಂದ್ರಜೀತ್ ಮಾಡಿದ್ದಾರೆ. ಹಿಂದೆಂದೂ ನಿರ್ವಹಿಸದೇ ಇರೋ ಪಾತ್ರವನ್ನೇ ಇಲ್ಲಿ ಕೊಟ್ಟಿದ್ದಾರೆ. ಆ ಬಗ್ಗೆ ಮಾತನಾಡೋ ಚಾರ್ಮಿ ಮೊನ್ನೆ ಚಿತ್ರೀಕರಣದ ಜಾಗದಲ್ಲಿ ಸಿಕ್ಕಿದ್ರು. ಬೆಂಗಳೂರಿನಲ್ಲಿರೊ ಕರಿಷ್ಮಾ ಹಿಲ್ಸ್ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಡುವಿನ ವೇಳೆ ಚಾರ್ಮಿ ಮಾತು ಶುರುವಾದವು....


ಚಾರ್ಮಿಗೆ
ಇಲ್ಲಿ ಹೊಸ ಥರದ ಪಾತ್ರವೇ ಸಿಕ್ಕಿದೆ. ನಾವು-ನೀವೂ ನೋಡಿರೋ ಹಾಗೆ ಚಾರ್ಮಿಯಿಲ್ಲಿ ನೃತ್ಯನಿರ್ದೇಶಕಿ. ಅದು ಚಲನಚಿತ್ರದ ನೃತ್ಯ ನಿರ್ದೇಶಕಿ. ತಾರೆಯರಿಗೇನೆ ನೃತ್ಯ ಹೇಳಿಕೊಡುವ ತಾರೆ...ಒಂಚೂರು ಜೋರು..ಇನ್ನೊಂಚೂರು ಗಟ್ಟಿಗಿತ್ತಿ....ಎಲ್ಲವನ್ನೂ ತೋರಬೇಕು. ಅಂತಹ ಪಾತ್ರವೇ ಸಿಕ್ಕಿರೊದ್ರಿಂದ ಈಗ ಖುಷಿ..ಖುಷಿಯಾಗಿ ಕೆಲಸ ಮಾಡ್ತಿದ್ದಾರೆ...

ಆದ್ರೂ, ಇಲ್ಲಿ ಬರಲಿಕ್ಕೆ ಒಂದು ಕಾರಣವೂ ಇದೆ. ಅದುವೇ ಸೌಂದರ್ಯ. ನಿರ್ದೇಶಕ ಇಂದ್ರಜೀತ್ ತಮ್ಮನ್ನ ತೆರೆ ಮೇಲೆ ಇನ್ನೂ ಚೆನ್ನಾಗಿ ತೋರುವ ಭರವಸೆ ಕೊಟ್ಟಿದ್ದಾರೆ. ಅದೇ ಒಂದು ದಟ್ಟ ಉತ್ಸಾಹದಲ್ಲಿಯೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ....

ದೇವ್ ಸನ್ ಆಫ್ ಮುದ್ದೇಗೌಡ ಅಂತೀರಾ...ನಾಯಕ-ನಾಯಕಿ ಎರಡೂ ಚಾರ್ಮಿನಾ ಅನ್ನೋ ಅನುಮಾನ ನಿಮ್ಮಲ್ಲಿ ಈಗಲೇ ಬಂದಿರಬೇಕು. ಆದರೆ, ಅದಲ್ಲ ಬಿಡಿ. ಚಾರ್ಮಿಗೆ ಇಲ್ಲೊಬ್ಬ ನಾಯಕ ಇದ್ದಾನೆ. ಅದುವೇ ಕುಳಿಕೆನ್ನೆ ಹುಡುಗ ದಿಗಂತ್. ಹಿಂದಿನ ಚಿತ್ರಕ್ಕಿಂತಲೂ ಇಲ್ಲಿ ಮೋಹ...ಮನಮೋಹಕವಾಗಿದ್ದಾರೆ...ತೆಲೆಗೂದಲ ಬಣ್ಣವನ್ನ ಬದಲಿಸಿಕೊಂಡು ಕೊಂಚ ಜಾಸ್ತಿನೇ ಆರ್ಕಷಕವಾಗಿದ್ದಾರೆ.ಚಿತ್ರವೂ ಅದನ್ನೇ ಬಯಸೋದ್ರಿಂದ ದಿಗಂತ್ ಹೆಚ್ಚೇ ಗ್ಲಾಮರಸ್ ಆಗಿದ್ದಾರೆ...

ಇಂದ್ರಜೀತ್ ಲಂಕೇಶ್ ರುಚಿನೂ ಹಾಗೇ ಇದೇ ಅಲ್ಲವೇ. ಆ ಆಸೆಗಳಿಗೆ ಒಂದು ಕಡೆ ಚಾರ್ಮಿ. ಇನ್ನೊಂದು ಕಡೆ ದಿಗಂತ್ ಇದ್ದಾರೆ. ಇನ್ನು ಅನೇಕ ಕಲಾವಿದರೂ ಚಿತ್ರದಲ್ಲಿದ್ದಾರೆ. ಆದರೆ, ಸದ್ಯಕ್ಕೆ ಚಾರ್ಮಿ ಮತ್ತು ದಿಗಂತ್ ಅಭಿನಯದ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಇಂದ್ರಜೀತ್ ಹೇಳೊವಂತೆ ಚಿತ್ರ ತೆರೆಗೆ ಬಂದ ಮೇಲೆ ಭಾರೀ ಸುದ್ದಿಯನ್ನೂ ಮಾಡಲಿದೆ. ವಿವಾದಕ್ಕೂ ಸಿಲುಕುವ ಸಾಧ್ಯತೆನೂ ಇದೆ. ಆದ್ರೆ, ಅದ್ಯಾವ ವಿಷ್ಯವನ್ನ ತೆಗೆದುಕೊಂಡು ಇಂದ್ರಜೀತ್ ಸಿನಿಮಾ ಮಾಡ್ತಿದ್ದಾರೆಂಬ ರಹಸ್ಯವನ್ನಂತೂ ಬಿಟ್ಟುಕೊಟ್ಟಿಲ್ಲ..


-ರೇವನ್ ಪಿ.ಜೇವೂರ್

Friday, November 18, 2011

ವಿಜೈಹೋ ಪ್ರಕಾಶ್...

ಮನೆಯೇ ಮೊದಲ ಸಂಗೀತ ಶಾಲೆ...
ಎಲ್ಲಿ ನೋಡಿದ್ರೂ ಸಂಗೀತದ ನಾದದ್ದೇ ಅಲೆ. ಅಮ್ಮ ಹಾಡುಗಾರ್ತಿ. ಅಪ್ಪ ದೊಡ್ಡ ಗಾಯಕ. ಅಜ್ಜ ಏನೂ ಕಮ್ಮಿಯಿರಲಿಲ್ಲ. ಶಾಸ್ತ್ರೋಕ್ತವಾಗಿ ಅಜ್ಜನೂ ಶಾಸ್ತ್ರೀಯ ಸಂಗೀತ ಕಲೆತಿದ್ರು. ಅಷ್ಟೆ. ಇನ್ನೇನು ಬೇಕು. ಮನೆಯಲ್ಲಿ ಸಂಗೀತದ್ದೇ ವಾತಾವರಣ.. ಬಾಲ್ಯದಲ್ಲಿಯೇ ಸಂಗೀತ ಸ್ವರಗಳ ಅಭ್ಯಾಸ ಶುರುವಾಗಿತ್ತು. ಹಾಗೆ ಸಂಗೀತ ಅಭ್ಯಾಸ ಮಾಡಿದವ್ರು ಅದು ಬೇರೆ ಯಾರು ಅಲ್ಲ..
ಜೈ ಹೋ ಖ್ಯಾತಿಯ ಗಾಯಕ ವಿಜಯ್ ಪ್ರಕಾಶ್.. ಮೊನ್ನೆ ಬೆಂಗಳೂರಿಗೆ ಬಂದಿದ್ರು. ಆಗಲೇ ತಮ್ಮ ಬದುಕಿನ ಸಂಗೀತ ಪಯಣ ಪುಟಗಳನ್ನ ತಿರುವಿ ಹಾಕಿದ್ರು..

ವಿಜಯ್ ಪ್ರಕಾಶ್ ತಕ್ಷಣಕ್ಕೆ ಕನ್ನಡಿಗರು ಅನಿಸೋದಿಲ್ಲ. ಉತ್ತರ ಭಾರತದ ಅದ್ಯಾವುದೋ ಊರಿನವರು ಅನಿಸುತ್ತಾರೆ. ಒಂದೊಮ್ಮೆ ಗಾಯಕ ಶ್ಯಾನ್ ತರವೂ ಕಾಣಿಸುತ್ತಾರೆ. ಆದ್ರೆ, ವಿಜಯ್ ಪ್ರಕಾಶ್ ಅಪ್ಪಟ ಕನ್ನಡಿಗರು. ಮೈಸೂರಲ್ಲಿ ಹುಟ್ಟಿ ಬೆಳೆದವರು. ತಿಳುವಳಿಕ ಬರೋವರೆಗೂ ಮೈಸೂರಲ್ಲಿಯೇ ಉಳಿದವರು. ೨೦ ನೇ ವಯಸ್ಸಿಗೆ ಸಂಗೀತದಲ್ಲಿಯೇ ಸಾಧಿಸಬೇಕು...ಸಂಗೀತದಲ್ಲಿಯೇ ಬೆಳೆಯ ಬೇಕೆಂದು ಮುಂಬೈ ಕಡೆಗೆ ಮುಖ ಮಾಡಿದ್ರು. ಅಲ್ಲಿಯೇ ಏಕೆ ಹೋದ್ರೋ ಏನೋ..

ಮುಂಬೈನಗರಿ ಯುವ ವಿಜಯ್ ರನ್ನ ಸ್ವಾಗತಿಸಿತು. ಅದು ಸಾ.ರೆ.ಗಾ.ಮ.ಪ ಸಂಗೀತ ವೇದಿಕೆ ಮೂಲಕ. ಖಾಸಗಿ ವಾಹಿನಿ ಸೋನಿಯಲ್ಲಿ ಯುವ ಪ್ರತಿಭೆಗಳನ್ನ ಹುಡುಕೋ ಈ ಕಾರ್ಯಕ್ರಮದಲ್ಲಿ ವಿಜಯ್ ಗೆ ಹಾಡೋ ಅವಕಾಶ್ ಸಿಕ್ಕಿತು. ಹಿಂದಿ ಬಾರದೆ ಇದ್ದರೂ ಅದನ್ನ ಕಲಿತು ಹಿಂದಿ ಹಾಡುಗಳನ್ನೇ ಹಾಡಿದ್ರು. ಕನ್ನಡದ ಒಂದು ಗೀತೆಯನ್ನ ಮುಂಬೈಯಲ್ಲಿ ಹಾಡಿದ್ರು. ಆಗಲೇ..ವಿಜಯ್ ಒಂಚೂರು ಗುರುತಿಸಿಕೊಂಡ್ರು...

ಬಳಿಕ ಸಾಗಿದ ಪಯಣ ದೊಡ್ಡದು. ಸಂಗೀತದಲ್ಲಿಯೇ ಹೆಸರು ಮಾಡಬೇಕಂದು ಬಂದ ವಿಜಯ್ ಪ್ರಕಾಶ್ ಗೆ ಜಾಹೀರಾತು ಕ್ಷೇತ್ರ ಕೈ ಬೀಸಿ ಕರೆಯಿತು. ಯಾಕೆಂದ್ರೆ, ವಿಜಯ್ ಕಂಠ ಸಿರಿ ಅಷ್ಟು ಅದ್ಭುತವಾಗಿದೆ. ಗಡಸು ಧ್ವನಿಯ ವಿಜಯ್ ಮಾತನಾಡಲು ಶುರು ಮ ಮಾಡಿದ್ರೆ ಸಾಕು. ಡಿಜಿಟಲ್ ಸೌಂಡ್ ನ ಅನುಭವವಾಗುತ್ತದೆ. ಅಂತಹ ಗಟ್ಟಿ ಧ್ವನಿಯ ವಿಜಯ್ ಪ್ರಕಾಶ್ ಸುಮಾರು ೮ ಸಾವಿಕ್ಕೂ ಹೆಚ್ಚು ಜಾಹೀರಾತುಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇದರ ಜೊತೆಗೆ ಜಾಹೀರಾತು ಮಂದಿಗೆ ವಿಜಯ್ ಒಬ್ಬ ಗಾಯಕ ಎಂಬ ಸತ್ಯವೂ ಗೊತ್ತಾಯಿತು. ಆಗ ಜಿಂಗಲ್ಸ್ ಮಾಡಿಕೊಂಡೆಂಬ ಕೋರಿಕೆಗಳೂ ಬಂದವು. ಹಾಗೆ ಸಂಗೀತದ ಜೀವನ ಮುಂಬೈಯಲ್ಲಿ ಗಟ್ಟಿಯಾಗುತ್ತಲೇ ಹೋಯಿತು....

ಹಿಂದಿ ಚಿತ್ರ ಜಗತ್ತಿನ ಮಂದಿಗೂ ವಿಜಯ್ ಬಳಿಕ ಪರಿಚಯವಾದ್ರು. ಸುನೀಲ್ ಶೆಟ್ಟಿ ಅಭಿನಯದ `ಬಾಜ್' ಚಿತ್ರ ಒಂದು ಹಾಡಿಗೆ ಧ್ವನಿಯಾದ್ರು. ಅದುವೇ ವಿಜಯ್ ಹಿಂದಿ ಚಿತ್ರಕ್ಕೆ ಹಾಡಿದ ಮೊದಲ ಗೀತೆ. ಹೀಗೆ ಆರಂಭವಾದ ಹಿನ್ನೆಲೆ ಗಾಯನದ ಪಯಣ ಶುರುವಾಯಿತು. ತಮಿಳು ಚತ್ರಗಳಲ್ಲಿ ಹಾಡೊ ಅವಕಾಶವೂ ಆಗಲೇ ಬರುತ್ತಿದ್ದವು. ಹಿಂದಿ-ತಮಿಳು ಎರಡೂ ಭಾಷೆಯಲ್ಲಿ ಹಾಡುತ್ತಲೇ ಇದ್ರು. ಆಗಲೆ ರೆಹಮಾನ್ ಸಂಗೀತದ ಸ್ವದೇಶ್ ಚಿತ್ರಕ್ಕೆ ಒಂದು ಗೀತೆಗೆ ಧ್ವನಿಯಾಗೋ ಅವಕಾಶ ಬಂದಿತು. ಇಳೆಯರಾಜ್ ಸಂಗೀತ ನೀಡಿದ `ಚೀನಿ ಕಮ್ ಹೈ' ಚಿತ್ರದಲ್ಲೂ ಒಂದು ಹಾಡನ್ನ ಹಾಡಲು ಅವಕಾಶ ಬಂದಿತು...

ಉತ್ತರ-ದಕ್ಷಿಣ ಎರಡೂ ಕಡೆ ಪುಟ್ಟದಾಗಿ ಹೆಸರು ಮಾಡುತ್ತಲೇ ಇದ್ದ ವಿಜಯ್, ವಿಶ್ವವ್ಯಾಪಿ ಹೆಸರು ಮಾಡಿದ್ದು ಮಾತ್ರ ಜೈಹೋ ಹಾಡಿನಿಂದ. ಇಡೀ ಹಾಡಿಗೇನೂ ವಿಜಯ್ ಪ್ರಕಾಶ್ ಧ್ವನಿಯಿಲ್ಲ. ಕೇವಲ ಜೈಹೋ ಅಂದಿದ್ದಷ್ಟೆ. ಅದುವೇ ವಿಜಯ್ ಪ್ರಕಾಶ್ ರನ್ನ ವಿಜೈಹೋ ಪ್ರಕಾಶ್ ಎಂಬುಷ್ಟು ಖ್ಯಾತಿ ತಂದು ಕೊಡ್ತು...ಆದ್ರೆ, ಕನ್ನಡದ ಗಾಯಕ ಕನ್ನಡಕ್ಕೆ ಬರಲೇ ಇಲ್ಲವೇ ಅಂತ ಕೇಳಿಕೊಳ್ಳಬೇಕು ಅನಿಸುವ ಹೊತ್ತಿಗೆ `ಗಾಳಿಪಟ' ಚಿತ್ರದಲ್ಲಿ ಕವಿತೆ..ಕವಿತೆ ನೀನೇಕೆ ಪದಗಳಲ್ಲಿ ಕುಳಿತೆ ಎಂಬ ಹಾಡಿಗೆ ಅವಕಾಶ ಬಂತು. ಅದನ್ನ ಮನದುಂಬಿ ಹಾಡಿ...ಕನ್ನಡಿಗರ ಮನಕ್ಕೆ ಹತ್ತಿರವಾದ್ರು ವಿಜಯ್ ಪ್ರಕಾಶ್...ಅಲ್ಲಿಂದ ಕನ್ನಡದ ಗಾಯನದ ಪಯಣ ಶುರು...

ಇಲ್ಲಿವರೆಗೂ ಲೆಕ್ಕವಿಡಬಹುದಾದಷ್ಟು ಹಾಡುಗಳನ್ನ ಕನ್ನಡಕ್ಕೆ ಹಾಡಿದ್ದಾರೆ. ಸುದೀಪ್-ರಾಗಿಣಿ ಅಭಿನಯದ ಕೆಂಪೇಗೌಡ ಚಿತ್ರ ಥರ..ಥರ ಹಾಡಿಗೆ ವಿಜಯ್ ವಿಶೇಷ ಕಂಠದ ಸ್ಪರ್ಶವಿದೆ. ಇತ್ತೀಚಿಗೆ ತೆರೆ ಕಂಡಿದ್ದ ಜೋಗಯ್ಯ ಚಿತ್ರದ ಕುರಿ...ಕೋಳಿ ಹಾಡಿಗೂ ವಿಜಯ್ ಪ್ರಕಾಶ್ ಧ್ವನಿಯಿದೆ. ಕನ್ನಡದಲ್ಲೀ ಹಾಡಿರೊ ಇನ್ನು ಹಲವು ಚಿತ್ರಗಳು ತೆರೆ ಕಾಣಬೇಕಿದೆ. ಅದಕ್ಕೂ ಮೊದಲೇ ಸಂಗೀತ ನಿರ್ದೇಶನ ಮಾಡೊ ದೊಡ್ಡ ಜವಾಬ್ದಾರಿಯ ಅವಕಾಶ ಬಂದಿದೆ. ಅಂದರ್-ಬಾಹರ್ ಎಂಬ ಶೀರ್ಷಿಕೆಯ ಚಿತ್ರಕ್ಕೆ ವಿಜಯ್ ಪ್ರಕಾಶ್ ಸಂಗೀತ ನೀಡುತ್ತಿದ್ದಾರೆ. ಶಿವಣ್ಣ-ಪಾರ್ವತಿ ಮೆನನ್ ಅಭಿನಯದ ಈ ಚಿತ್ರದ ಚಿತ್ರೀಕರಣ ಬರೋ ವರ್ಷ ೧೫ ರಿಂದ ಶುರುವಾಗಲಿದೆ. ಹೊಸ ಹೆಜ್ಜೆ ಇಟ್ಟರೋ ವಿಜಯ್ ಪ್ರಕಾಶ್ ಅವರಿಗೆ ಜೈ ಹೋ...

ರೇವನ್ ಪಿ.ಜೇವೂರ್

Saturday, June 4, 2011

ದುಷ್ಟ ಕಾವ್ಯ...

ದುಷ್ಟ ಕನ್ನಡದ ಸಿನಿಮಾ. ತಮಿಳು ಫೀಲ್ ಕೊಡ್ತದೆ. ಪರುತಿವೀರನ್ ಚಿತ್ರ ಗೊತ್ತಿರಬೇಕಲ್ಲ. ಅದರಲ್ಲಿಯ ಆ ಹಾರಾಟ ಇಲ್ಲೂ ಇದೆ. ಸಂಭಾಷಣೆಯಲ್ಲಂತೂ ಕೂಗಾಡ ಜಾಸ್ತಿ. ಹಾಡುಗಳು ಖುಷಿ ಕೊಡ್ತವೆ. ಛಾಯಾಗ್ರಹಣ ಚೆಂದಗಿದೆ. ಕತೆ ಓಕೆ. ಎಸ್.ನಾರಾಯಣ್ ಪುತ್ರ ಮಿಂಚುತ್ತಾನೆ. ಹೊಸ ನಟಿ ಸುರಭಿ ಹೊಳೆಯುತ್ತಾಳೆ. ಈಸಾ ಮತ್ತು ಪಾತಿಯಯಾಗಿ ತೆರೆ ಮೇಲೆ ಬಂದ ಈ ಯುವ ಜೋಡಿಯ ಕತೆ ಇಲ್ಲಿ ಈ ಥರ ಸಾಗುತ್ತದೆ ಓದಿ... ಸೂರ್ಯೋದಯದಿಂದಲೇ ಕತೆ ತೆರೆದು ಕೊಳ್ತದೆ. ನಾಯಕ ತಾಯಿ ನಿತ್ಯ ಕರ್ಮಗಳನ್ನ ಮುಗಿಸಿಕೊಂಡು ಹೊರ ನಡೆಯುತ್ತಾಳೆ. ಬಸ್ ಸ್ಟಾಂಡ್...ಪೋಲಿಸ್ ಸ್ಟೇಷನ್. ಎಲ್ಲವೂ ಅಲೆದು ಬರುತ್ತಾಳೆ.ತಾಯಿಯ ಈ ತಳ-ಮಳ ದಿಂದ ಪ್ರೇಕ್ಷಕರಿಗೆ ಈಸಾ ಎಲ್ಲಿ ಎಂಬ ಕುತೂಹಲ ಮೂಡುತ್ತದೆ. ಈಸಾ ಜೈಲಲ್ಲಿದ್ದಾನೆಂಬ ಕ್ಲೂ ಕೂಡ ಆಗಲೇ ಸಿಗುತ್ತದೆ.ಅಷ್ಟಾಗಿದ್ದೇ ತಡ.ಈಸಾ ಇನ್ ಜೈಲ್..ಅಷ್ಟೇ,ಅಲ್ಲ. ತನ್ ಕತೆಯನ್ನ ತಾನೇ ಹಿನ್ನೆಲೆ ಧ್ವನಿಯಲ್ಲಿ ನಿರೂಪಿಸುತ್ತಲೇ ಸಾಗುತ್ತಾನೆ...

ಹಿನ್ನೆಲಯ ಈ ಕತಾ ನಿರೂಪಣೆ ಈಸನ ಚರಿತ್ರೆಯನ್ನೇ ಬಿಚ್ಚಿಕೊಳ್ಳುತ್ತದೆ. ಪ್ರೇಯಸಿ ಪಾತಿಯ ಪರಿಚಯವೂ ಅಗ್ತದೆ. ಚಿಕ್ಕಂದಿನಲ್ಲಿಯೇ ಪ್ರೀತಿ-ಪ್ರೇಮ ಅರಳಿದ ವಿಚಾರವೂ ತಿಳಿಯುತ್ತದೆ. ಈಸನು ದೊಡ್ಡವನಾಗ್ತಾನೆ. ಪಾತಿನೂ ಮೆಚ್ಯೂರ್ಡ್ ಆಗ್ತಾಳೆ. ಅದನ್ನ ಹೇಳೋಕೆ ಇಲ್ಲೊಂದು ಸಾಂಗ್ ಇದೆ.

ನನ್ನ ಹೆಂಡ್ತಿ ದೊಡ್ಡವಳಾಗಿದ್ದಾಳೆ...

ಇಷ್ಟೊಂದಿಗೆ ಕತೆ ಪ್ರೇಕ್ಷಕರನ್ನ ತನ್ನತ್ತ ಸೆಳೆಯೋ ಸಾಹಸ ಮಾಡಿರುತ್ತದೆ. ದೊಡ್ಡವಳಾದ ಹುಡುಗಿ ಮನದಲ್ಲಿ ಕಲರ್..ಕಲರ್ ಕನಸುಗಳು ಹುಟ್ಟಿಕೊಳ್ತವೆ. ಪ್ರೀತಿಸಿದ ಈಸನನ್ನ ಐ ಲವ್ ಯೂ ಅನ್ನೋ ಮಟ್ಟಿಕೆ ಪ್ರೀತಿ ಪಕ್ವವಾಗಿರುತ್ತದೆ. ಅದನ್ನೂ ಸಹ ಇಲ್ಲಿ ನಿದೇಶಕ್ರು ಒಂದು ಹಾಡಿನ ಮೂಲಕವೇ ಹೇಳಿಸಿದ್ದಾರೆ.

ಈಸಾ ಓ ಈಸಾ ಐ ಲವ್ ಯೂ ಅನ್ನೋ ಹಾಡು...
ಈ ಹಾಡಾದ ಬಳಿಕ ಮಾತಲ್ಲಿ ಅಬ್ಬರ ಜಾಸ್ತಿ ಆಗ್ತದೆ. ಪ್ರೇಕ್ಷಕರಿಗೂ ಇದು ಹೋಗ್ತಾ...ಹೋಗ್ತಾ ಚಿತ್ರದಲ್ಲಿ ಇದು ಕಾಮನ್ ಅನಿಸಿಬಿಡ್ತದೆ. ಹೊಡೆದಾಟ...ಓಡಾಟ ಇಷ್ಟು ಬೇಕಿತ್ತಾ ಅನಿಸುತ್ತದೆ. ಆದ್ರೆ, ಈ ಮೊಲಾರ್ಧದ ಮುಗಿಯೋ ವೇಳೆಗೆ ಪಾತಿ ಮತ್ತು ಈಸ ಪ್ರೀತಿ ಫೀಲ್ ಆಗ್ತದೆ. ಆದ್ರೆ, ಅದನ್ನ ಅನುಭವಿಸೋ ಮೊದಲೇ ಇಂಟರ್ ವಲ್ ಅಗ್ತದೆ. ಅಷ್ಟೇ,ಅಲ್ಲ. ಒಂದು ಟ್ವೀಸ್ಟ್ ಕೂಡ ಇದೆ...

ಟ್ವೀಸ್ಟ್ ಸೆಕೆಂಡ್ ಹಾಫ್ ವರೆಗೂ ಮುಂದುವರೆಯುತ್ತದೆ. ಜೈಲಲ್ಲಿ ಇರೋ ಈಸಾ ಈಗ ಹೊರಗಡೆ ಬಂದಿರುತ್ತಾನೆ. ಪಾತಿ ವಿಷ್ಯ ತಿಳಿದು ಮತ್ತೆ ಜೈಲಿಗೆ ಹೋಗ್ತಾನೆ. ಅಲ್ಲಿಯೇ ಈ ಪ್ರೇಮಿಗಳ ಮುಖಾ-ಮುಖಿ ಆಗುತ್ತದೆ. ಆಗ ನಾವು ಏಕ್ ದುಜೇ ಕೇಲಿಯೆ ಹೈ ಅಂತಲೇ ಜೈಲಿಂದ ಓಡಿ ಹೋಗ್ತಾರೆ. ಒಂದು ಕಡೆ ಪೋಲಿಸ್ರು. ಮತ್ತೊಂದು ಕಡೆ ಹುಡುಗಿ ಅಪ್ಪ. ಪ್ರೇಮಿಗಳ ಹಿಂದೆ ರನ್ನಿಂಗೋ..ರಂನ್ನಿಂಗೂ...ಆ ಗ್ಯಾಪ್ ನಲ್ಲಿ ಎಲ್ಲ ಚಿತ್ರಗಳಂತೆ ನಾಯಕ ಕೆಲ್ಸ ಮಾಡ್ತಾನೆ. ನಾಯಕಿನೂ ಕೆಲ್ಸ ಮಾಡ್ತಾಳೆ. `ದಿಲ್' ಫಿಕ್ಚರ್ ಥರ ಸಂಸಾರ ಶುರು ಆಗುತ್ತದೆ..

ಇಷ್ಟಾಗೋ ಹೊತ್ತಿಗೆ ಕತೆ ಕ್ಲೈಮ್ಯಾಕ್ಸ್ ಬಂದು ತಲುಪಿರುತ್ತದೆ. ಆದರೆ, ಇಲ್ಲೂ ಟರ್ನ್ ಅಂಡ್ ಟ್ವಿಸ್ಟ್ ಗಳಿವೆ. ಸ್ನೇಹದ ಮೇಲೆ ಬರೆದ ಒಂದು ಹಾಡು ಈ ಘಳಿಗೆಯಲ್ಲಿಯೇ ಬಂದು ಹೋಗುತ್ತದೆ. ಇಷ್ಟಾದ್ಮೇಲೆ ಕೊನೆ ಬಂದು ಬಿಡುತ್ತದೆ. ಅದು ಹೇಗೆ ಏನೂ.. ಅಂತ ಕೇಳೋ ಬದ್ಲು. ನೋಡಿದ್ರೇನೆ ತಿಳಿಯೋದು. ಹಾಗಂತ ಇಲ್ಲಿ ಮಹಾನ್ ಥ್ರಿಲ್ಲ್ ಇದೆ ಅಂತ ಭಾವಿಸಬೇಡಿ. ನಿರ್ದೇಶಕ್ರು ಇದನ್ನ ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಇನ್ನೊಂದು ಸಂಗ್ತೀ ಅಂದ್ರೆ, ಗೆಳೆಯರ ಗೆಳೆತನಕ್ಕೆ ಸಾಕ್ಷ್ಯ ಆಗಿರೊ ಕೊನೆ ಸನ್ನಿವೇಶ್ ಏಕೋ...ತುಂಬಾ ಕ್ರೂರ ಅನಿಸುತ್ತದೆ....

-ರೇವನ್ ಪಿ.ಜೇವೂರ್

Wednesday, June 1, 2011

ರೂಪಿಕಾ ಹೊಸ ರಾಗ...

ರೂಪಿಕಾ....


ಈಗ ಕಾಲ್ಗೆಜ್ಜೆ ನಾದ ಪಕ್ಕದ ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಇಲ್ಲಿಯ ನೆಲ ಬೇಸರ ತಂದಿತೋ..ಆಫರ್ ಬಂತು ಅಂತ ಆ ಕಡೆ ಹೆಜ್ಜೆ ಇಟ್ಟರೋ..ರಿಯಲ್ ಕತೆಗೆ ಈ ಹುಡುಗಿನೇ ನಾಯಕಿ. ಅಮರ್ ಎಂಬ ಯುವಕ ಬೆಂಗಳೂರಿನ ತಾರೆಗೆ ಜೋಡಿಯಾಗಿದ್ದಾನೆ...

ವಿಷ್ಯ ಇಷ್ಟೇ,ಅಲ್ಲ. ಇನ್ನು ವಿಶೇಷವಾದದ್ದೂ ಇದೆ. ಅದುವೇ ನಮ್ಮ ಕನ್ನಡದ ಚರಣ್ ರಾಜ್. ಸದ್ಯಕ್ಕೆ ಕಾಲಿವುಡ್ ಮತ್ತು ಟಾಲಿವುಡ್ ನ ಚಿತ್ರಗಳಲ್ಲಿ ಬ್ಯೂಝಿಯಾಗಿರುತ್ತಾರೆ. ಕನ್ನಡದ ಸ್ವಯಂಕೃಷ್ಣ ಚಿತ್ರದಲ್ಲೂ ಅಭಿನಯಿಸಿ ಹೋಗಿದ್ದಾರೆ. ಆದ್ರೆ ಅದೇನೋ ಈಗ ರಿಯಲ್ ಲವ್ ಸ್ಟೋರಿಯ ಹಾಡೊಂದು ಚರಣ್ ರಾಜ್ ಮೇಲೆ ಪ್ರಭಾವ ಬೀರಿದೆ. ಅದರ ಫಲವೇ..ರೂಪಿಕಾ-ಅಮರ್ ಜೋಡಿಯ

`ಯರ್ಥಾತ ಪ್ರೇಮಕತಾ' ಚಿತ್ರ..

ನಾಗರಾಜು
ಮತ್ತು ಅನಿತಾ ಲವ್ ಸ್ಟೋರಿ ಹೈದ್ರಾಬಾದ್ ನಲ್ಲಿ ಫುಲ್ ಫೇಮಸ್. ನಾಗರಾಜು ರಾಗ ಸಂಯೋಜಿಸಿ ಬರೆದ ಅನಿತಾ..ಓ ಅನಿತಾ ಹಾಡು ಈಗಲೂ ಪ್ರಚಲಿತ. ಈ ಒಂದು ಹಾಡನ್ನ ಕೇಳಿಯೆ ಕನ್ನಡಿಗ ಚರಣ್ ರಾಜ್ ನಾಗರಾಜು ಮತ್ತು ಅನಿತಾ ಪ್ರೇಮ ಕತೆ ಮೇಲೆ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ನಿರ್ಮಾಣ ಮಾಡೋದರೊಟ್ಟಿಗೆ ನಿರ್ದೇಶನವನ್ನೂ ಮಾಡ್ತಿದ್ದಾರೆ.


ಇನ್ನಷ್ಟು
ಸಂಗತಿಗಳೆಂದ್ರೆ, ರಿಯಲ್ ಪ್ರೇಮಿ ನಾಗರಾಜು ಚಿತ್ರಕ್ಕೆ ಎರಡು ಹಾಡು ಬರೀತಾಯಿದ್ದಾನೆ. ಅನಿತಾ ಓ ಅನಿತಾ ಸಿನಿಮಾದಲ್ಲಿ ಇದ್ದೇ ಇರುತ್ತದೆ. ಇದೇ ಜುನ್ ೬ ರಂದು ಚಿತ್ರ ಸೆಟ್ಟೇರುತ್ತಿದೆ. ಆಗಿನಿಂದ ಹಿಡಿದು..ಚಿತ್ರೀಕರಣ ಪೂರ್ಣಗೊಳ್ಳುವವರೆಗೂ ನಾಗರಾಜು ಫಿಲ್ಮಿ ಲವರ್ಸ್ ಗೆ ತಮ್ಮ ಲವ್ ಬಗ್ಗೆ ಗೈಡನ್ಸ್ ಕೊಡಲಿದ್ದಾರೆ...

ಆದ್ರೆ
, ಅನಿತಾ ಏನ್ ಆದಳು...ನಾಗರಾಜು ಏನೆಲ್ಲ ಫೇಸ್ ಮಾಡಿದ. ಎಲ್ಲವೂ ತೆರೆ ಮೇಲೆ ಬರಲಿದೆ. ಕನ್ನಡ ಹೊರತಾಗಿ ತಮಿಳು..ತೆಲುಗು ಭಾಷೆಯಲ್ಲಿ ಅನಿತಾ-ನಾಗರಾಜು ಕತೆ ತೆರೆಗೆ ಬರುತ್ತಿದೆ. ಕನ್ನಡಕ್ಕೆ ಯಾರು ತರುತ್ತಾರೋ ನೋಡಬೇಕು.


-ರೇವನ್ ಪಿ.ಜೇವೂರ್

Monday, April 25, 2011

ನೆನಪಿದೆಯಾ ಓ ಗೆಳತಿ...

ನೆನಪಿದೆಯಾ ಓ ಗೆಳತಿ. ನಾ ನಿನಗೆ ಪ್ರೀತಿಸಿದ್ದು. ನೆನಪಿದೆಯಾ ಗೆಳತಿ ನಾ ನಿನ್ನ ಜೀವ ಎಂಬುದು. ನೆನಪಿದೆಯಾ ಗೆಳತಿ..ನಿನಗಾಗಿ ನಾ ಕಣ್ಣೇ ಕಳೆದು ಕೊಂಡದ್ದು... ಇಲ್ಲ ಬಿಡು. ನೀನು ತಿಳಿಯಲು ಹೇಗೆ ಸಾಧ್ಯ. ನೀನು ಆಗ ಮದುವೆ ಸಂಭ್ರಮದಲ್ಲಿದ್ದೆ. ಪಕ್ಕದಲ್ಲಿದ್ದ ಗಂಡನ ಮಡಿಲ ಸೇರುವ ತವಕದಲ್ಲಿದ್ದೆ. ನನ್ನ ಬಿಟ್ಟು ಅಪ್ಪ-ಅಮ್ಮ ತೋರಿದ ಗಂಡನಿಂದ ತಾಳಿ ಕಟ್ಟಿಸಿಕೊಂಡು ಸೇಫ್ ಆಗಿದ್ದೇ. ನಾನು...ನಿನ್ನ ಆ ಪ್ರೀತಿಯಲ್ಲಿ ಕಣ್ಣು ಕಳೆದುಕೊಂಡೆ...ನಿನ್ನ ಪ್ರೀತಿಯ ಬಿಂಬದಲ್ಲಿಯೆ ಇನ್ನು ಕನಸು ಕಾಣುತ್ತಿದ್ದೇನೆ..ನೆನಪಿದೆಯಾ ಓ ಗೆಳತಿ..

ಈ ಮೇಲಿನ ಸಾಲುಗಳು ನಿಮಗೆ ಯಾರನ್ನೋ ನೆನಪಿಸುತ್ತವೆ. ಹೌದು....! ಮೇಲಿನ ಪ್ರತಿ ಸಾಲುಗಳು ಮಂಡ್ಯದ ರಘುವಿನ ಪ್ರೀತಿಯ ಕ್ರೂರ ಫಲಗಳೇ ಆಗಿವೆ. ಪ್ರೀತಿಸಿದವಳು...ಜೊತೆ..ಜೊತೆಗೆ ಓಡಾಡಿದವಳು...ಪ್ರೀತಿಯಿಂದ ಮುತ್ತಿಕ್ಕಿದವಳು ಇನ್ನಾರದೋ ಬಾಹುಬಂಧನದಲ್ಲಿದ್ದಾಳೆ. ಆದರೆ, ರಘು ಸದ್ಯ ಕಣ್ಣು ಕಳೆದುಕೊಂಡು ನಾರಾಯಣ ನೇತ್ರಾಲಯದಲ್ಲಿ ಕುರುಡು ಕನಸು ಕಾಣುತ್ತಿದ್ದಾನೆ. ಅನುಷಾ ಬಂದೇ ಬರುತ್ತಾಳೆ...ಪ್ರೀತಿಸುತ್ತಾಳೆಂಬ ನಿರೀಕ್ಷೆಯಲ್ಲಿದ್ದಾನೆ...

ರಘುವಿನ ಈ ಸ್ಟೋರಿ ಕೇಳಿ ಎಲ್ಲರ ಮನವೂ ಕಲುಕಿದೆ. ಗಾಂಧಿನಗರದ ಮಂದಿಯ ಮನವೂ ರೋಧಿಸಿದೆ. ಕೆಲವರು ರಘುನ್ನ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ಮಧ್ಯೆ ನಿರ್ದೇಶಕ ಎಸ್.ನಾರಾಯಣ ರಘು ಕಣ್ಣೀರ ಕತೆಯನ್ನ ಚಿತ್ರ ಮಾಡಲು ಹೊರಟ್ಟಿದ್ದಾರೆ. ಎಲ್ಲರಂತೆ ಈ ನಾಣಿಗೂ ರಘು ಕತೆ ಟಚ್ ಆಗಿದೆ. ಕ್ರೂರತೆಯ ಪರಮಾವದಿ ಅನಿಸಿದೆ. ಪ್ರತಿಷ್ಠೆಯ ಪರಾಕಾಷ್ಠೆ ಎಂದೆನಿಸಿದೆ. ಅದಕ್ಕೆನೆ 'ನೆನಪಿದೆಯಾ ಓ ಗೆಳತಿ' ಟೈಟಲ್ ನ ಸಿನಿಮಾ ಮಾಡಲು ಈಗ ಮುಂದಾಗಿದ್ದಾರೆ...

ರಘುವಿನ ರಿಯಲ್ ಲೈಫ್ ಕತೆನೆ ಇಲ್ಲಿ ಚಿತ್ರವಾಗ್ತಿದೆ. ಗಾಂಧಿನಗರದ ಗಿಮ್ಮಿಕ್ ಆಗಲಿ. ಚತ್ರರಂಗದ ಕಲರ್ ಆಗಲಿ ಇರದೇ ನೈಜ ರೀತಿಯಲ್ಲಿಯೇ 'ನೆನಪಿದೆಯಾ ಓ ಗೆಳತಿ' ತೆರೆಗೆ ಬರಲಿದೆ, ಹಾಗಂತ ನಾರಾಯಣ್ ಭರವಸೆ ನೀಡಿದ್ದಾರೆ. ತಮ್ಮ ಪುತ್ರನೇ ರಘು ಪಾತ್ರ ಮಾಡಲಿದ್ದಾನೆಂಬ ಸುದ್ದಿಯನ್ನೂ ಬಹಿರಂಗ ಪಡಿಸಿದ್ದಾರೆ. ರಘು ಮತ್ತು ಅನುಷಾ ಸ್ಟೋರಿಯ ಇನ್ನಷ್ಟು ವಿಷ್ಯಗಳನ್ನ ತಿಳಿದುಕೊಂಡು ಮುಂದುವರೆಯಲಿದ್ದಾರೆ. ಒಂದೊಳ್ಳೆ ಸಂದೇಶವನ್ನೂ ನೀಡುವ ಹಂಬಲವೂ ಇದೆ. ಆಯಾ ಸ್ಥಳಕ್ಕೆ ಹೋಗಿಯೇ ಎಲ್ಲವನ್ನೂ ಕುಲಂಕಷವಾಗಿ ತಿಳಿದುಕೊಂಡು ಚಿತ್ರ ಮಾಡುವ ಪ್ಲಾನೂ ಇದೆ. ಇನ್ನುಳಿದಂತೆ ಸದ್ಯಕ್ಕೆ ಎಸ್.ನಾರಾಯಣ ಕತೆ ಬರೆಯಲು ಕುಳಿತಿದ್ದಾರೆ...

ರೇವನ್
ಪಿ.ಜೇವೂರ್

Tuesday, October 19, 2010

ರಾಜನರ್ತಕಿ ಪೂಜಾ ಗಾಂಧಿ...

ಮಳೆ ಹುಡುಗಿ ಪೂಜಾ ಗಾಂಧಿ ಈಗ ನರ್ತಕಿ. ಕೇವಲ ನರ್ತಕಿಯಲ್ಲ. ರಾಜ ನರ್ತಕಿ. ಎಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಪೂಜಾ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫಾರ್ ಏ ಚೇಂಜ್ ಅಂತ ತುಳು ನಾಡಿನತ್ತ ಸರಿದ ಈ ಬೆಡಗಿಗೆ ಇಲ್ಲಿ ಡಬಲ್ ಶೇಡ್ ನ ಪಾತ್ರವೇ ಲಭಿಸಿದೆ. ಹಿಂದೆಂದೂ ಮಾಡದ ಕ್ಲಾಸಿಕಲ್ ಡ್ಯಾನ್ಸ್ ಗೆ ಪೂಜಾ ಹೆಜ್ಜೆ ಹಾಕಿದ್ದಾರೆ...

ಪೂಜಾಗೆ
ಇದು ಮೊದಲ ತುಳು ಚಿತ್ರವೇ ಹೌದು..! ಕನ್ನಡದ ಮತ್ತೊಂದು ಸಿನೆಮಾನೂ ಹೌದು. ಕಾರಣ, "ಬೀರೆ ದೇವು ಪೂಂಜೆ" ಅನ್ನೊ ಈ ಚಾರಿತ್ರಿಕ ಸಿನೆಮಾ ತುಳು ಮತ್ತು ಕನ್ನಡದಲ್ಲಿ ಸಿದ್ದವಾಗ್ತಿದೆ. ಏಕಕಾಲಕ್ಕೇನೆ ತೆರೆಗೂ ಬರಲಿದೆ. ಅದಕ್ಕೂ ಮುಂಚೇನೆ ಪೂಜಾ ತಮ್ಮ ಈ ಹೊಸ ಸಾಹಸದ ಬಗ್ಗೆ ಮಾತನಾಡಿದ್ದಾರೆ. ಅದೆಷ್ಟು ಕಷ್ಟವಾಗಿದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.

ಆದ್ರೂ
, ತುಳು ನಾಡಿನ ಮಂದಿಗೆ ದಿಲ್ ಖುಷ್ ಮಾಡಲು ಬೇಕಾದ ಆ ತಯಾರಿನೂ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ಡೈಲಾಗ್ ಕಲಿತು ಟಿಪಿಕಲ್ ಹಳೆ ತುಳುವಿನ ಸಂಭಾಷೆ ಹೇಳಿದ್ದಾರೆ. ಎಟ್ ದಿ ಸೇಮ್ ಟೈಮ್ ಕನ್ನಡ ಡೈಲಾಗೂ ಹೊಡೆಯಬೇಕಿದ್ದ ಸಂದರ್ಭವೂ ಪೂಜಾಗೆ ಬಂದೊದಗಿತ್ತು. ಅದಕ್ಕೇನೆ ಕನ್ನಡ ಸುಲಭ..ತುಳು ಕಷ್ಟ ಅಂತ ಹೇಳುವ ಅನುಭವವೂ ಈಗ ಆಗಿದೆ.
ಅಭಿನಯದ ಚಿತ್ರಕ್ಕೆ ಪೂಜಾನೇ ಮೇನ್ ಅಲ್ಲ ಬಿಡಿ. ೪೦೦ ವರ್ಷದ ಹಿಂದೆ ಇದ್ದ "ಬೀರೆ ದೇವು ಪೂಂಜೆ" ಅನ್ನೋ ಯೋಧನ ಸುತ್ತವೇ ಚಿತ್ರ ಹೆಣೆಯಲ್ಪಟ್ಟಿದೆ. ಆಗಿದ್ದ ರಾಜನ ಅಚ್ಚುಮೆಚ್ಚಿನ ಈ ಬೀರೆ ತನ್ನ ದರ್ಪದಿಂದಲೇ ಹಾಳಾಗುತ್ತಾನೆ.
ರಾಜನ ಆದೇಶದಂತೇನೆ ನರ್ತಕಿಯ ಕುತಂತ್ರಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಾನೆ.

ಈ ರೀತಿಯ ಕಥೆ ಇದ್ದರೂ ಸಹ ತುಳುನಾಡಲ್ಲಿ "ವೀರ ದೇವು ಪೂಂಜೆ" ಈಗಲೂ ಫೇಮಸ್. ತನ್ನ ೧೨ ನೇ ವಯಸ್ಸಿನಲ್ಲಿಯೇ "ಹುಲಿಕೊಂದು" ಹೆಗಲ ಮೇಲೆ ಹೊತ್ತು ತಂದ ಶೂರತ್ವ ದೇವ ಪೂಂಜನದ್ದು. ದಂತ ಕಥೆಗಳನ್ನೂ ಸೃಷ್ಟಿಸಿದ್ದ ಪರಾಕ್ರಮಿ ಈ ದೇವ ಪೂಂಜೆ. ಅಂತಹ ವ್ಯಕ್ತಿಯ ಕಥೆ ಯಕ್ಷಗಾನ ಪ್ರಸಂಗದಲ್ಲಿ ಅದ್ಯಾವಾಗಲೋ ಬಂದು ಹೋಗಿದೆ. ರಂಗದ ಮೇಲೆ ಅದೆಷ್ಟೋ ಸಲ ಆಡಲಾಗಿದೆಯೋ ಏನೋ. ನಿರ್ದೇಶಕ-ನಿರ್ಮಾಪಕ ಆರ್. ಧನರಾಜ್ ಈಗ "ದೇವ ಪೂಂಜೆ" ಕಥೆಗೆ ಚಿತ್ರ ರೂಪ ಕೊಡ್ತಾಯಿದ್ದಾರೆ. ೮೦ ಲಕ್ಷದಷ್ಟು ಬಜೆಟ್ ಪ್ಲಾನೂ ಮಾಡಿದ್ದಾರೆ.

ಆದ್ರೆ, ಈ ಚಿತ್ರ ನಿರ್ಮಾಣದ ಹಿಂದೆ ಎರಡು ಉದ್ದೇಶಗಳಿವೆ. ಒಂದು ರಾಷ್ಟ್ರೀಯ ಅವಾರ್ಡ್ ಪಡೆಯೋ ಆಸೆ. ಮತ್ತೊಂದು ಕರಾವಳಿ ಕಡೆಗಿನ ಕಲೆ-ಸಂಸ್ಕೃತಿ ಎತ್ತಿ ಹಿಡಿಯೋ ಪ್ರಯತ್ನ. ಅದಕ್ಕೇನೆ ಇದೇ ೨೩ ರಿಂದ ಎರಡನೇ ಹಂತದ ಶೂಟಿಂಗ್ ಶುರುವಾಗಲಿದೆ. ಡಿಸಂಬರ್ ೩೦ ರ ಹೊತ್ತಿಗೆ ಚಿತ್ರವನ್ನ ಅವಾರ್ಡ್ ಗೆ ಕಳಿಸುವ ಯೋಜನೆ ಇದೆ. ಬರುವ ಜನವರಿ ಗೆ ಸಿನೆಮಾ ತೆರೆಗೂ ಬರಲಿದೆ. ಅಲ್ಲಿವರೆಗೂ ಪೂಜಾ ಹೊಸ ಅವತಾರಕ್ಕಾಗಿ ಜಸ್ಟ್ ವೇಟ್.

-ರೇವನ್ ಪಿ.ಜೇವೂರ್

ಕೈಲಾಸಂ ಕಿರು ಸಿನೆಮಾ...

ಟಿ.ಪಿ.ಕೈಲಾಸಂ..ನಿಜಕ್ಕೂ ಆಸಮ್ಮೇ ಬಿಡಿ. ನಮ್ಮ ನಡುವಿನ ಜೀವಂತ ಕ್ಯಾರೆಕ್ಟರ್ ಗಳನ್ನ ರಂಗಕ್ಕೆ ತಂದ ಖ್ಯಾತಿ ಇವರದ್ದು. ಈಗ ಇದೇ ವ್ಯಕ್ತಿ ಜೀವಂತವಾದ್ರೆ, ಹೇಗೆ. ಹೌದು...! ರೇಡಿಯೋ ಜಾಕಿ ಶ್ರೀನಿ ಇಂತಹವೊಂದು ಪ್ರಯೋಗ ಮಾಡಿದ್ದಾರೆ. ಪತ್ರಕರ್ತ ಮತ್ತು ರಂಗಕರ್ಮಿ ಎ.ಎಸ್.ಮೂರ್ತಿಯವರು ಬರೆದ "ಟಿಪಿಕಲ್ ಆರಥಿ" ನಾಟಕ ಆಧಾರಿಸಿ ಎಸ್.ವಿ. ಬಾಬು ನಿರ್ಮಾಣದಲ್ಲಿ ಸ್ವತ: ಶ್ರೀನಿನೇ ಒಂದು ಕಿರು ಚಿತ್ರ ಮಾಡಿದ್ದಾರೆ. ಹಾಗೆ ಸಿದ್ಧವಾದ ಆ ಚಿತ್ರವೇ "ಸಿಂಪ್ಲಿ ಕೈಲೋಸಮ್"...

ಈ ಕಿರು ಚಿತ್ರದ ಪ್ರತಿ ಪ್ರೇಮ್ ಅದ್ಭುತವಾಗಿದೆ. ಶ್ರೀಷ್ ಕುಂದರವಲ್ಲಿ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ನಿಜಕ್ಕೂ ಒಂದು ಕಲಾಕೃತಿಯೇ ಆಗಿದೆ. ಅಷ್ಟು ಚೆಂದಗೆ ಇಡೀ ಚಿತ್ರವನ್ನ ತೆಗೆಯಲಾಗಿದೆ. ದೃಶ್ಯ ಸಂಯೋಜನೆಗೆ ಪ್ಲಾನ್ ಮಾಡಿದ ಲೈಟಿಂಗ್ ಆಗಿರಲಿ. ಕ್ಯಾಮೆರಾ ಯ್ಯಾಂಗಲೇ ಆಗಿರಬಹುದು. ಎಲ್ಲವೂ ಮನಮೋಹಕ. ಕಾರಣ, ಅಷ್ಟು ಶೃದ್ಧೆಯಿಂದಲೇ ಲೋಕಲ್ ಮೋಷನ್ ಫಿಕ್ಚ್ ಟೀಮ್ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ.

ಚಿತ್ರದ ಆರಂಭ ಶ್ರೀನಗರ ಕಿಟ್ಟಿ ನಿರೂಪಣೆಯಲ್ಲಿಯೇ ಸಾಗುತ್ತದೆ. ಟಿ.ಪಿ.ಕೈಲಾಸಂ ಅವರ ೧೭ ನಾಟಕಗಳ ಸಂಕ್ಷಿಪ್ತ ವಿವರಣೆನೂ ಇಲ್ಲಿ ದೊರೆಯುತ್ತದೆ. ಟಿ.ಪಿ.ಕೈಲಾಸಂ ಅವರ ವಿಶಿಷ್ಟ ಕನ್ನಡದ ಬಗ್ಗೆನೂ ಇಲ್ಲಿ ಪುಟ್ಟದೊಂದು ಪರಿಚಯವೂ ಸಿಗುತ್ತದೆ...ಇದಾದ ಮೇಲೆ ಇಲ್ಲಿ ಟಿ.ಪಿ.ಕೈಲಾಸಂ ಖುದ್ ಮಾತನಾಡಲು ಶುರು ಮಾಡುತ್ತಾರೆ...

ಟಿ.ಪಿ.ಕೈಲಾಸಂ ಇಲ್ಲ ಅನ್ನೋದು ಗೊತ್ತೆಯಿದೆ. ಆದ್ರೆ, ಇಲ್ಲಿ ಆ ಪಾತ್ರಕ್ಕೆ ರೇಡಿಯೋ ಜಾಕಿ ಮತ್ತು ಅಭಿನಯ ತಂರಂಗದ ವಿದ್ಯಾರ್ಥಿ ಶ್ರೀನಿ ಜೀವ ತುಂಬಿದ್ದಾರೆ. ಟಿ.ಪಿ.ಕೈಲಾಸಂ ಥರದ ಗೆಟಪ್. ಸಿಗರೇಟ್ ಸೇದುವ ಅವರ ಸ್ಟೈಲ್. ಸರಾಬು ಕುಡಿಯೋ ಖದರ್. ಹಂಗಂಗೆ ಇಲ್ಲಿ ಕಣ್ಣುಮುಂದೆ ಕಟ್ಟುತ್ತವೆ...ಆ ಕ್ಷಣವೇ ಕೈ ಇಲ್ಲಿ ಇನ್ನು ಜೀವಂತ ಅನ್ನೋಥರವೇ ಭಾಸವಾಗುತ್ತದೆ...

ಕೈಲಾಸಂ ಅನೇಕ ಪಾತ್ರಗಳನ್ನ ರಂಗಕ್ಕೆ ತಂದಿದ್ದಾರೆ. ಅದೇ ಪಾತ್ರಗಳೇ ಈ ಚಿತ್ರದಲ್ಲಿ ಮಾತನಾಡುತ್ತವೆ. ಕೈಲಾಸಂಗೇನೆ ಹತ್ತು ಹಲವು ಪ್ರಶ್ನೆಗಳನ್ನ ಕೇಳುತ್ತವೆ. ಆದ್ರೆ, ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೇನೆ ಕೈಲಾಸಂ ಮುಗುಳು ನಗೆಯಲ್ಲಿಯೇ ಅವುಗಳನ್ನೆಲ್ಲ ತೇಲಿಸಿ ಮುಂದಿನ ಕ್ಯಾರೆಕ್ಟರ್ ಗಳ ಬಗ್ಗೆ ತಮ್ಮಲಿಯೇ ಪ್ರಶ್ನಿಸಿಕೊಂಡು ಮುನ್ನಡೆಯುತ್ತಾರೆ...

ಈ ರೀತಿ ಚಿತ್ರದಲ್ಲಿ "ಸೂಳೆ" ನಾಟಕ ಪಾತ್ರ ಬರುತ್ತದೆ. ಟೊಳ್ಳು-ಗಟ್ಟಿ ರಚನೆಯ ಕ್ಯಾರೆಕ್ಟರ್ ಗಳು ಹಾದು ಹೋಗುತ್ತವೆ. ಈ ಎಲ್ಲ ಪ್ರಮುಖ ಪಾತ್ರಕ್ಕೆ ನಟಿ ಛಾಯಾ ಸಿಂಗ್ ಜೀವ ತುಂಬಿದ್ದಾರೆ. ಹಾಗಂತ ಛಾಯ ಇಲ್ಲಿ ಎಲ್ಲೂ ಒಂದೇ ಥರ ಕಾಣಿಸುವುದಿಲ್ಲ. ಒಂದೇ ಥರದ ಅಭಿನಯವೂ ಇಲ್ಲ ಬಿಡಿ. ಅಂತಹ ಕಲಾತ್ಮಕ ನಟನೆಯನ್ನ ಛಾಯಾ ಸಿಂಗ್ "ಸಿಂಪ್ಲಿ ಕೈಲೋಸಂ" ನಲ್ಲಿ ತೋರಿದ್ದಾರೆ. ಸದ್ಯಕ್ಕೆ ಈ ಚಿತ್ರ ಬೆಂಗಳೂರಲ್ಲಿ ಇತ್ತೀಚಿಗೆ ಪೂರ್ವ ಪ್ರದರ್ಶನ ಕಂಡಿದೆ. ಮೆಚ್ಚುಗೆನೂ ಪಡೆದಿದೆ...

- ರೇವನ್ ಪಿ.ಜೇವೂರ್