Sunday, July 4, 2010

ಬಾಲಿವುಡ್ ಕನ್ನಡ

ಕನ್ನಡದಲ್ಲಿ ಎಷ್ಟು ಜನ ಬಾಲಿವುಡ್ ನವರಿದ್ದಾರೆ. ಲೆಕ್ಕಹಾಕಿದರೆ ಬಂದು ಹೋಗಿವ ತಾರಾಬಳಗವೇ ಹೆಚ್ಚು. ಮುಂಬೈನಿಂದ ಆಗಾಗ ಬಂದು ನಟಿಸಿ ಹೊರಟು ಹೋಗುವುದು ಸದ್ಯದ ಟ್ರೆಂಡ್. ಕೆಲವರಲ್ಲಿ ಪೂಜಾ ಗಾಂಧಿಯಂತ ಹುಡುಗಿ ಇಲ್ಲಿಯೇ ಉಳಿದಿದ್ದಾರೆ. ಕನ್ನಡತಿನೇ ಆಗಿದ್ದಾರೆ. ತಕ್ಕಮಟ್ಟಿಕೆ ಕನ್ನಡವನ್ನೂ ಕಲಿತಿದ್ದಾರೆ. ಈಗ ವಿಷಯ ಇದಲ್ಲ. ಬಂದು ಹೋಗುವ ಮಂದಿಯದ್ದು.

ಕನ್ನಡಕ್ಕೆ ಬರುವ ಹಿಂದಿ ತಾರೆಯರು ಒಂದು ಇಂಗ್ಲೀಷ್ ಮಾತನಾಡುತ್ತಾರೆ. ಇಲ್ಲವೇ, ಹಿಂದಿ ಬೋಲ್ ಥೇ ಹೈ. ಇದಾದ ಮೇಲೆ ಒಂಚೂರು ಕನ್ನಡದ ಪದಗಳನ್ನ ಕಲಿತು ಆಶ್ಚರ್ಯ ಮೂಡಿಸುತ್ತಾರೆ. ತಮ್ಮ ಪಾತ್ರಕ್ಕೆ ಇನ್ನಾರೋ ಡಬ್ಬಿಂಗ್ ಮಾಡ್ತಾರೆ. ಆಗ ಕರೆದುಕೊಂಡು ಬಂದವರಿಗೆ ನೋಡಲು ಹಿಂದಿ ಸ್ಟಾರ್ ಸಿಗ್ತಾರೆ. ಆ ಮೂಕ ಕ್ಯಾರೆಕ್ಟರ್ ಗೆ ಧ್ವನಿ ತುಂಬುತ್ತಾರೆ. ಇದು ಸದ್ಯ ನಮ್ಮ ಕನ್ನಡ ಇಂಡಸ್ಟ್ರೀಲಿ ಪರಭಾಷೆಯರ ಬಗೆಗಿನ ಬೇಜಾನ್ ಒಲವು.
ಇವರಲ್ಲಿಯೇ ಕೆಲವರು ಕನ್ನಡ ಭಾಷೆಯನ್ನ ಕಲಿತು ಡಬ್ಬಿಂಗ್ ಮಾಡಿದವರಿದ್ದಾರೆ. ರಮೇಶ್ ಭಾಗವತ್ ನಿದೇರ್ಶನದ 'ಯಕ್ಷ' ಚಿತ್ರಕ್ಕೆ ಬಾಲಿವುಡ್ ನ ನಾನಾ ಪಾಟೇಕರ್ ಹೀಗೆನೇ ಮಾಡಿದ್ದಾರೆ. ಪೋಲಿಸ್ ಪಾತ್ರದಲ್ಲಿ ಅಭಿನಯಿಸಿದ ನಂತರ ನಾನಾ ಕನ್ನಡದಲ್ಲಿಯೇ ತಮ್ಮ ಕ್ಯಾರೆಕ್ಟರ್ ಗೆ ಜೀವ ಕೊಟ್ಟಿದ್ದಾರೆ. ಇದು ಹೇಗೆಲ್ಲ ಬರುತ್ತದೆ, ಜನ ಮೆಚ್ಚುತ್ತಾರಾ..ಇಲ್ವಾ. ಇದನ್ನ ಚಿತ್ರ ಬಂದ ಮೇಲೆ ಹೇಳಬಹುದು. ನಾನಾ ಪಾಟೇಕರ್ ಕಲಾಪ್ರೀತಿ ಮತ್ತು ಕನ್ನಡ ಪ್ರಯತ್ನ ಶ್ಲಾಘನೀಯ.
`ಜಮಾನಾ' ಚಿತ್ರದಲ್ಲೂ ಇದೇ ರೀತಿಯಾಗಿದೆ. ಜಾಕಿ ಶ್ರಾಫ್ ರಂತಹ ಹೀರೊ ಕನ್ನಡ ಕಲಿತಿದ್ದಾರೆ. ಸೆಟ್ ನಲ್ಲಿಯೇ ಡೈಲಾಗ್ ಹೊಡೆದಿದ್ದಾರೆ. ಚಿತ್ರೀಕರಣ ಮುಗಿದ ನಂತರ ತಮ್ಮ ಪೋಲಿಸ್ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಇದು ಅಷ್ಟೊಂದು ಪಕ್ಕಾ ಅನಿಸುವುದಿಲ್ಲ. ತೆರೆ ಮೇಲೆ ಇದನ್ನ ನೋಡಿದವರಿಗೆ ಒಳ್ಳೆಯ ಪ್ರಯತ್ನ ಅನಿಸುತ್ತದೆ. ಕಾರಣ, ಸರಿಯಾಗಿ ಲಿಪ್ ಸಿಂಕ್ ಆಗಿಲ್ಲ.ಇದೇನೇ ಇದ್ದರೂ ಜಾಕಿ ಶ್ರಾಫ್ ಡಬ್ಬಿಂಗ್ ಕಹಾನಿ ಮೆಚ್ಚಲೇಬೇಕು. ಕಿಷನ್ ನಿದೇರ್ಶನದ `ಕೇರ್ ಆಫ್ ಫುಟ್ ಪಾತ್' ಚಿತ್ರದಲ್ಲಿ ಜಾಕಿ ಜೆಸ್ಟ್ ಕಾಣಿಸಿಕೊಂಡಿದ್ದರು. ಕನ್ನಡದ ಎರಡನೇ ಸಿನೆಮಾದಲ್ಲಿ ಡಬ್ಬಿಂಗ್ ಮಾಡಿ ಸುದ್ದಿ ಮಾಡಿದ್ದಾರೆ.

ಬಾಲಿವುಡ್ ಮಂದಿಯ ಈ ಕನ್ನಡ ಪ್ರೀತಿ ನಟರಿಗಷ್ಟೆ ಸೀಮಿತವಾಗಿಲ್ಲ. ಗಾಯಕರಿಗೂ ಇದು ಮೀಸಲು. ಸ್ವಲ್ಪ ಹಿಂದೆ ಹೋದರೆ, `ಒಂದೇ ಬಳ್ಳಿಯ ಹೂಗಳು' ಚಿತ್ರದ ಹಾಡೊಂದಕ್ಕೆ ಮುಹ್ಮದ್ ರಫೀ 'ನೀ..ನೆಲ್ಲಿ ನಡೆವೆ ದೂರ... ಅನ್ನೋ ಹಾಡು ಹಾಡಿದ್ದಾರೆ. ಲತಾ...ಆಶಾ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲಲ. ಇತ್ತೀಚಿಗೆ `ಮತ್ತೆ ಮುಂಗಾರು ' ಚಿತ್ರಕ್ಕೆ ಆಶಾ ಹಾಡಿದ್ದು ಗೊತ್ತೇಯಿದೆ...

ಇನ್ನು ಹೊಸಬರೋ...ಇವರಂತು ಕನ್ನಡದ ಗಾಯಕರೇ ಆದಂತಿದೆ. ಇಲ್ಲವೇ ಮಾಡಿದಂತಿದೆ. ಏಕೆಂದರೆ, ಸೋನು ನಿಗಮ್ ಹಾಡು ಸದ್ಯದ ಬಹುತೇಕ ಚಿತ್ರದಲ್ಲಿ ಇದ್ದೇ ಇರುತ್ತದೆ. ಶ್ರೇಯಾ ಘೋಷಾಲ್ ಕೂಡ ಒಂದು ಹಾಡಿಗೆ ಧ್ವನಿಯಾಗಿರುತ್ತಾರೆ. ಕುನಾಲ್ ಗಾಂಜಾವಾಲಾ ಇದೇ ಸಾಲಿಗೆ ಸೇರುವ ಮತ್ತೊಬ್ಬ ಬಾಲಿವುಡ್ ಗಾಯಕ. ಇವರ ಮುಂದೆ ಕನ್ನಡದವರು ಕಳೆದು ಹೋಗುತ್ತಿದ್ದಾರೆ.

ಇದು ಏನಕ್ಕೆ ಇದನ್ನ ಹೇಳುವುದು ಬೇಡ ಬಿಡಿ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಕನ್ನಡದವರಲ್ಲದ ಕನ್ನಡದ ಪ್ರೀತಿ ಇಲ್ಲಿ ದಿನೇ..ದಿನೇ ಹೆಚ್ಚುತ್ತಿದೆ. ಇದರ ಹಿಂದಿನ ರಹಸ್ಯವೇನು..ಇದನ್ನೂ ಹೇಳಬೇಕಿಲ್ಲ. ಚಿತ್ರ ಜಗತ್ತಿನ ಮಂದಿ ಸಿನೆಮಾ ಪ್ರಮೋಟ್ ಮಾಡಲು ಏನೇಲ್ಲ ಮಾಡ್ತಾರೆ. ಇದು ಬಣ್ಣದ ಭೂಮಿಯಲ್ಲವೇ...ಇಲ್ಲಿ ಸದಾಕಾಲ ಓಡುವುದು ಸಿರ್ಫ್ ಪೈಸಾ..ಪೈಸಾ....

- ರೇವನ್ ಪಿ.ಜೇವೂರ್

No comments:

Post a Comment