Friday, July 9, 2010

ಗಾಳಿಯೇ ನೋಡು ಬಾ..

ಗಾಳಿಯೇ ನೋಡು ಬಾ..ದೀಪದಾ ನರ್ತನ.
ರಾತ್ರೀಯೆ ನೀಡು ಬಾ ಮಾಯದಾ ದರ್ಪಣ...

ಇದೆಂತ ಅದ್ಭುತ ಕಲ್ಪನೆ ಅಲ್ವಾ. ಗಾಳಿಯೂ ನಮ್ಮೊಟ್ಟಿಗೆ ಇರುತ್ತದೆ. ದೀಪವೂ ನಮ್ಮೊಟ್ಟಿಗೆ ದಿನವೂ ಪ್ರಜ್ವಲಿಸುತ್ತದೆ. ನರ್ತನ ಟಿವಿಗಳಲ್ಲಿ ಬರ್ತಾನೇ ಇರ್ತವೆ. ಇಂತಹ ಸಾಲುಗಳು ಹುಟ್ಟಲು ಸಾಧ್ಯವೆ. ಹಾಗೆ ಹುಟ್ಟಿದರೆ ಅದು ಕವಿ ಮನಸ್ಸಿನಲ್ಲಿ ಸಾಧ್ಯ. ರವಿ ಕಾಣದ್ದು..ಕವಿ ಕಂಡ ಅಂತರಾ ಅಲ್ಲ. ಅದು ಎಲ್ಲ ಕಾಲಕ್ಕೂ ನಿಜವೇ. ಬೀಸುವ ಗಾಳಿಗೆ...ಅತ್ತ..ಇತ್ತ ಆರಲು ಸಜ್ಜಾಗುವ ದೀಪದ ಅಂತ್ಯ ಇಲ್ಲಿ ಕವಿಗೆ ನರ್ತನ ಅನಿಸುತ್ತದೆ.

ಇಂತಹ ಸಾಲುಗಳು ಸುಮ್ಮನೆ ಪುಸ್ತಕದಲ್ಲಿ ಉಳಿದಿದ್ದರ ಹೆಚ್ಚು ಪ್ರಚಾರ ಸಿಗ್ತಿತ್ತೋ ಇಲ್ವೋ. "ಸಂಚಾರಿ" ಚಿತ್ರದಲ್ಲಿ ಜಯಂತ್ ಕಾಯ್ಕಿಣಿಯವರ ಸಾಲುಗಳಿವು.. ಪಲ್ಲವಿನೇ ಇಷ್ಟೊಂದು ಚೆಂದ ಅದ್ಮೇಲೆ ಚರಣ ಹೇಗಿರಬೇಕು..ನೀವೇ ಕಲ್ಪಿಸಿಕೊಳ್ಳಿ...

ನಿನ್ನಂತೆ ನನ್ನಾರು ಕಾಡಿಲ್ಲ..
ಅದುವೇ ಪ್ರೀತಿಯ ಲಕ್ಷಣ...

ಗಾಳಿಯ ಹಾಡಿಗೆ ಪ್ರೀತಿ ಸಾಲುಗಳು ಸೇರುತ್ತವೆ. ಪ್ರೀತಿ-ಪ್ರೇಮದ ಅಲೆಯನ್ನೂ ಹರಿಸುತ್ತವೆ. ಕಾರಣ ಕ್ರಿಮಿನಲ್ ವೊಬ್ಬನ ಪ್ರೇಮಕಥೆಯ ಚಿತ್ರವೇ "ಸಂಚಾರಿ". ಸಾಹಿತ್ಯವೂ ಮೌಲ್ಯಯುತವಾಗಿದೆ. ಗಾಳಿಯೇ ನೀ ನೋಡು ಬಾ...ಈ ಹಾಡೊಂದರ ಮೇಲೆನೆ ೨೦ ದಿನ ಕೆಲಸ ಮಾಡಲಾಗಿದೆ. ಅದು ಬೇಕು..ಇದು ಬೇಕು ಅಂತ ಕೊನೆಗೆ ಗಾಳಿಯೇ ನೀ ನೋಡು ಬಾ ಅನ್ನೊದು ಹೊರಹೊಮ್ಮಿದೆ.

ಸಂಚಾರಿಯಲ್ಲಿ ವಿ.ನಾಗೇಂದ್ರ ಪ್ರಸಾದ್ ವಿರಚಿತ ಗೀತೆಗಳು ಇವೆ. ಒಂದಕ್ಕಿಂತವೊಂದು ಚೆಂದನೆಯ...ತಣ್ಣನೆಯ ಸಾಹಿತ್ಯದ ಗೀತೆಗಳು ಅನಿಸದೇ ಇರದು. ಏಕೆಂದರೆ, ಮಧುರ ಸಂಗೀತಕ್ಕೆ ಉತ್ತಮ ಸಾಲುಗಳು ಅನಿಸುವುದೇ ಈ ಹಾಡಿನ ವಿಶೇಷತೆ. ಹೊಸ ಗಾದೆಗಳನ್ನೂ ಚಿತ್ರದ ಹಾಡೊಂದರಲ್ಲಿ ಪ್ರಯೋಗಿಸಲಾಗಿದೆ. ನಮ್ಮಜ್ಜ...ಮುತ್ತಜ್ಜ ಹೇಳಿ ಹೋದ ಗಾದೆಗಳು ಅದೆಲ್ಲೊ ಹೆಣ್ಣಿನ ಹೋಲಿಕೆ ಮಾಡುವ ಕೆಲಸ ಮಾಡಿದ್ದವು ಅಂತ ಹೇಳಬಹುದು. ಇದೇ ಹಳೆ ಗಾದೆಗಳ ಸಾಲಿಗೆ ಸೇರಿಸುವಂತ ಪ್ರಯತ್ನ ವಿ.ನಾಗೇಂದ್ರಪ್ರಸಾದ್ "ಸಂಚಾರಿ" ಚಿತ್ರದಲ್ಲಿ ಮಾಡಿದ್ದಾರೆ.. ಇದಕ್ಕೆ ಕೆಳಗಿನ ಸಾಲು ಸಾಕ್ಷಿ...

ಭೂಮಿ ಸುತ್ತೋದು ಕಾಣದು...
ಇಬ್ಬನಿ ಸದ್ದು ಕೇಳದು..
ಇವುಗಳ ಹಾಗೇಯೇ ಪ್ರಶ್ನೇ ಈ ನಾರಿ..

ವಿ.ನಾಗೇಂದ್ರ ಪ್ರಸಾದ್ ಇದೇ ಚಿತ್ರದಲ್ಲಿ ಇನ್ನೊಂದು ಹೊಸ ಪದ್ಯ ಬರೆದುಕೊಟ್ಟಿದ್ದಾರೆ. ಕಣ್ಣಾ ಸನ್ನೆಯಲಿ...ಹೆಣ್ಣಾ ಕೇಳೋ ನೀವ ಅನ್ನೊ ಈ ರಚನೆ ಹೊಸ ಅನುಭವ ಕೊಡ್ತದೆ. ಹೊಸ ಪದಗಳ ಪರಿಚಯವನ್ನೂ ಮಾಡಿಸ್ತವೆ. ಹೆಣ್ಣಿನ ಮನದಾಳದ ಪ್ರಶ್ನೆಗಳನ್ನ ಹೊರಗೆಡವುತ್ತವೆ....

ಯಾರೀವ..ಯಾರೀವನೂ..
ರೆಪ್ಪೆ ಸನ್ನೆಯಲ್ಲಿ ಒಪ್ಪೆ ಅನ್ನೋ ನೀವ..
ಮಾಯವಾ ಮಾಡೋನಿವ..
ಮನಸೆಂಬ ಖಾಲಿ ಜಾಗವಾ ಆಕ್ರಮಿಸೋವ
ಈ ಪ್ರೇಮಿನಾ ಕರೆದೆ ಮನಸಾರೆ...

ಸಂಚಾರಿಯ ಈ ಗೀತೆಗಳಲ್ಲ ಹಿಟ್ ಆಗಿವೆ. ಬಿರುಗಾಳಿ ಚಿತ್ರಕ್ಕೆ ಸಂಗೀತ ನೀಡಿದ ಅದೇ ಅರ್ಜುನ್ ಇದಕ್ಕೂ ಮ್ಯೂಸಿಕ್ ಮಾಡಿದ್ದಾರೆ. ಎಂದಿನಂತೆ ಸೋನು ನಿಗಮ್ ಹಾಡಿದ್ದಾರೆ. ಶ್ರೇಯಾ ಘೋಷಾಲ್ ಎರಡು ಹಾಡಿಗೆ ಧ್ವನಿಯಾಗಿದ್ದಾರೆ. ಕೇವಲ ಆಡಿಯೋ ಗೀತೆಗಳನ್ನ ಕೇಳಿದವರಿಗೆ ಈಗ ಹಾಡು ನೋಡ ಬಹುದು. ಚಿತ್ರ ತಂಡ ಈಗಾಗಲೇ ಮೂರು ಹಾಡುಗಳನ್ನ ಎಲೆಕ್ಟ್ಟಾನಿಕ್ ಮಾಧ್ಯಮಕ್ಕೆ ನೀಡಿದೆ.

ಸಾಹಿತ್ಯಕ್ಕೆ ತಕ್ಕನಾಗಿಯೇ ನಿರ್ದೇಶಕ ಕಿರಣ್ ಗೋವಿ "ಸಂಚಾರಿ" ಹಾಡುಗಳ ಚಿತ್ರೀಕರಣ ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಹಾಡುಗಳದ್ದೇ ಕಾರುಬಾರು. ಜುಲೈ ೧೬ ರಂದು ಚಿತ್ರ ತೆರೆಗೂ ಬರಲಿದೆ. ಬಂದ ಮೇಲೆ ಹಾಡು ಕೇಳಿದ ಜನ ಚಿತ್ರದ ಕಥೆ ನೋಡಿ ಏನ್ ಹೇಳ್ತಾರೋ ಏನೋ...ಹೊಸ ನಾಯಕ ರಾಜ್. ನಾಯಕಿ ಬಿಯಾಂಕಾ ದೇಸಾಯಿ ರಿಲೀಜ್ ನತ್ತ ಮುಖ ಮಾಡಿ ಕಾಯುತ್ತಿದ್ದಾರೆ...

- ರೇವನ್ ಪಿ.ಜೇವೂರ್

No comments:

Post a Comment