Tuesday, October 19, 2010

ರಾಜನರ್ತಕಿ ಪೂಜಾ ಗಾಂಧಿ...

ಮಳೆ ಹುಡುಗಿ ಪೂಜಾ ಗಾಂಧಿ ಈಗ ನರ್ತಕಿ. ಕೇವಲ ನರ್ತಕಿಯಲ್ಲ. ರಾಜ ನರ್ತಕಿ. ಎಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಪೂಜಾ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫಾರ್ ಏ ಚೇಂಜ್ ಅಂತ ತುಳು ನಾಡಿನತ್ತ ಸರಿದ ಈ ಬೆಡಗಿಗೆ ಇಲ್ಲಿ ಡಬಲ್ ಶೇಡ್ ನ ಪಾತ್ರವೇ ಲಭಿಸಿದೆ. ಹಿಂದೆಂದೂ ಮಾಡದ ಕ್ಲಾಸಿಕಲ್ ಡ್ಯಾನ್ಸ್ ಗೆ ಪೂಜಾ ಹೆಜ್ಜೆ ಹಾಕಿದ್ದಾರೆ...

ಪೂಜಾಗೆ
ಇದು ಮೊದಲ ತುಳು ಚಿತ್ರವೇ ಹೌದು..! ಕನ್ನಡದ ಮತ್ತೊಂದು ಸಿನೆಮಾನೂ ಹೌದು. ಕಾರಣ, "ಬೀರೆ ದೇವು ಪೂಂಜೆ" ಅನ್ನೊ ಈ ಚಾರಿತ್ರಿಕ ಸಿನೆಮಾ ತುಳು ಮತ್ತು ಕನ್ನಡದಲ್ಲಿ ಸಿದ್ದವಾಗ್ತಿದೆ. ಏಕಕಾಲಕ್ಕೇನೆ ತೆರೆಗೂ ಬರಲಿದೆ. ಅದಕ್ಕೂ ಮುಂಚೇನೆ ಪೂಜಾ ತಮ್ಮ ಈ ಹೊಸ ಸಾಹಸದ ಬಗ್ಗೆ ಮಾತನಾಡಿದ್ದಾರೆ. ಅದೆಷ್ಟು ಕಷ್ಟವಾಗಿದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.

ಆದ್ರೂ
, ತುಳು ನಾಡಿನ ಮಂದಿಗೆ ದಿಲ್ ಖುಷ್ ಮಾಡಲು ಬೇಕಾದ ಆ ತಯಾರಿನೂ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ಡೈಲಾಗ್ ಕಲಿತು ಟಿಪಿಕಲ್ ಹಳೆ ತುಳುವಿನ ಸಂಭಾಷೆ ಹೇಳಿದ್ದಾರೆ. ಎಟ್ ದಿ ಸೇಮ್ ಟೈಮ್ ಕನ್ನಡ ಡೈಲಾಗೂ ಹೊಡೆಯಬೇಕಿದ್ದ ಸಂದರ್ಭವೂ ಪೂಜಾಗೆ ಬಂದೊದಗಿತ್ತು. ಅದಕ್ಕೇನೆ ಕನ್ನಡ ಸುಲಭ..ತುಳು ಕಷ್ಟ ಅಂತ ಹೇಳುವ ಅನುಭವವೂ ಈಗ ಆಗಿದೆ.
ಅಭಿನಯದ ಚಿತ್ರಕ್ಕೆ ಪೂಜಾನೇ ಮೇನ್ ಅಲ್ಲ ಬಿಡಿ. ೪೦೦ ವರ್ಷದ ಹಿಂದೆ ಇದ್ದ "ಬೀರೆ ದೇವು ಪೂಂಜೆ" ಅನ್ನೋ ಯೋಧನ ಸುತ್ತವೇ ಚಿತ್ರ ಹೆಣೆಯಲ್ಪಟ್ಟಿದೆ. ಆಗಿದ್ದ ರಾಜನ ಅಚ್ಚುಮೆಚ್ಚಿನ ಈ ಬೀರೆ ತನ್ನ ದರ್ಪದಿಂದಲೇ ಹಾಳಾಗುತ್ತಾನೆ.
ರಾಜನ ಆದೇಶದಂತೇನೆ ನರ್ತಕಿಯ ಕುತಂತ್ರಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಾನೆ.

ಈ ರೀತಿಯ ಕಥೆ ಇದ್ದರೂ ಸಹ ತುಳುನಾಡಲ್ಲಿ "ವೀರ ದೇವು ಪೂಂಜೆ" ಈಗಲೂ ಫೇಮಸ್. ತನ್ನ ೧೨ ನೇ ವಯಸ್ಸಿನಲ್ಲಿಯೇ "ಹುಲಿಕೊಂದು" ಹೆಗಲ ಮೇಲೆ ಹೊತ್ತು ತಂದ ಶೂರತ್ವ ದೇವ ಪೂಂಜನದ್ದು. ದಂತ ಕಥೆಗಳನ್ನೂ ಸೃಷ್ಟಿಸಿದ್ದ ಪರಾಕ್ರಮಿ ಈ ದೇವ ಪೂಂಜೆ. ಅಂತಹ ವ್ಯಕ್ತಿಯ ಕಥೆ ಯಕ್ಷಗಾನ ಪ್ರಸಂಗದಲ್ಲಿ ಅದ್ಯಾವಾಗಲೋ ಬಂದು ಹೋಗಿದೆ. ರಂಗದ ಮೇಲೆ ಅದೆಷ್ಟೋ ಸಲ ಆಡಲಾಗಿದೆಯೋ ಏನೋ. ನಿರ್ದೇಶಕ-ನಿರ್ಮಾಪಕ ಆರ್. ಧನರಾಜ್ ಈಗ "ದೇವ ಪೂಂಜೆ" ಕಥೆಗೆ ಚಿತ್ರ ರೂಪ ಕೊಡ್ತಾಯಿದ್ದಾರೆ. ೮೦ ಲಕ್ಷದಷ್ಟು ಬಜೆಟ್ ಪ್ಲಾನೂ ಮಾಡಿದ್ದಾರೆ.

ಆದ್ರೆ, ಈ ಚಿತ್ರ ನಿರ್ಮಾಣದ ಹಿಂದೆ ಎರಡು ಉದ್ದೇಶಗಳಿವೆ. ಒಂದು ರಾಷ್ಟ್ರೀಯ ಅವಾರ್ಡ್ ಪಡೆಯೋ ಆಸೆ. ಮತ್ತೊಂದು ಕರಾವಳಿ ಕಡೆಗಿನ ಕಲೆ-ಸಂಸ್ಕೃತಿ ಎತ್ತಿ ಹಿಡಿಯೋ ಪ್ರಯತ್ನ. ಅದಕ್ಕೇನೆ ಇದೇ ೨೩ ರಿಂದ ಎರಡನೇ ಹಂತದ ಶೂಟಿಂಗ್ ಶುರುವಾಗಲಿದೆ. ಡಿಸಂಬರ್ ೩೦ ರ ಹೊತ್ತಿಗೆ ಚಿತ್ರವನ್ನ ಅವಾರ್ಡ್ ಗೆ ಕಳಿಸುವ ಯೋಜನೆ ಇದೆ. ಬರುವ ಜನವರಿ ಗೆ ಸಿನೆಮಾ ತೆರೆಗೂ ಬರಲಿದೆ. ಅಲ್ಲಿವರೆಗೂ ಪೂಜಾ ಹೊಸ ಅವತಾರಕ್ಕಾಗಿ ಜಸ್ಟ್ ವೇಟ್.

-ರೇವನ್ ಪಿ.ಜೇವೂರ್

ಕೈಲಾಸಂ ಕಿರು ಸಿನೆಮಾ...

ಟಿ.ಪಿ.ಕೈಲಾಸಂ..ನಿಜಕ್ಕೂ ಆಸಮ್ಮೇ ಬಿಡಿ. ನಮ್ಮ ನಡುವಿನ ಜೀವಂತ ಕ್ಯಾರೆಕ್ಟರ್ ಗಳನ್ನ ರಂಗಕ್ಕೆ ತಂದ ಖ್ಯಾತಿ ಇವರದ್ದು. ಈಗ ಇದೇ ವ್ಯಕ್ತಿ ಜೀವಂತವಾದ್ರೆ, ಹೇಗೆ. ಹೌದು...! ರೇಡಿಯೋ ಜಾಕಿ ಶ್ರೀನಿ ಇಂತಹವೊಂದು ಪ್ರಯೋಗ ಮಾಡಿದ್ದಾರೆ. ಪತ್ರಕರ್ತ ಮತ್ತು ರಂಗಕರ್ಮಿ ಎ.ಎಸ್.ಮೂರ್ತಿಯವರು ಬರೆದ "ಟಿಪಿಕಲ್ ಆರಥಿ" ನಾಟಕ ಆಧಾರಿಸಿ ಎಸ್.ವಿ. ಬಾಬು ನಿರ್ಮಾಣದಲ್ಲಿ ಸ್ವತ: ಶ್ರೀನಿನೇ ಒಂದು ಕಿರು ಚಿತ್ರ ಮಾಡಿದ್ದಾರೆ. ಹಾಗೆ ಸಿದ್ಧವಾದ ಆ ಚಿತ್ರವೇ "ಸಿಂಪ್ಲಿ ಕೈಲೋಸಮ್"...

ಈ ಕಿರು ಚಿತ್ರದ ಪ್ರತಿ ಪ್ರೇಮ್ ಅದ್ಭುತವಾಗಿದೆ. ಶ್ರೀಷ್ ಕುಂದರವಲ್ಲಿ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ನಿಜಕ್ಕೂ ಒಂದು ಕಲಾಕೃತಿಯೇ ಆಗಿದೆ. ಅಷ್ಟು ಚೆಂದಗೆ ಇಡೀ ಚಿತ್ರವನ್ನ ತೆಗೆಯಲಾಗಿದೆ. ದೃಶ್ಯ ಸಂಯೋಜನೆಗೆ ಪ್ಲಾನ್ ಮಾಡಿದ ಲೈಟಿಂಗ್ ಆಗಿರಲಿ. ಕ್ಯಾಮೆರಾ ಯ್ಯಾಂಗಲೇ ಆಗಿರಬಹುದು. ಎಲ್ಲವೂ ಮನಮೋಹಕ. ಕಾರಣ, ಅಷ್ಟು ಶೃದ್ಧೆಯಿಂದಲೇ ಲೋಕಲ್ ಮೋಷನ್ ಫಿಕ್ಚ್ ಟೀಮ್ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ.

ಚಿತ್ರದ ಆರಂಭ ಶ್ರೀನಗರ ಕಿಟ್ಟಿ ನಿರೂಪಣೆಯಲ್ಲಿಯೇ ಸಾಗುತ್ತದೆ. ಟಿ.ಪಿ.ಕೈಲಾಸಂ ಅವರ ೧೭ ನಾಟಕಗಳ ಸಂಕ್ಷಿಪ್ತ ವಿವರಣೆನೂ ಇಲ್ಲಿ ದೊರೆಯುತ್ತದೆ. ಟಿ.ಪಿ.ಕೈಲಾಸಂ ಅವರ ವಿಶಿಷ್ಟ ಕನ್ನಡದ ಬಗ್ಗೆನೂ ಇಲ್ಲಿ ಪುಟ್ಟದೊಂದು ಪರಿಚಯವೂ ಸಿಗುತ್ತದೆ...ಇದಾದ ಮೇಲೆ ಇಲ್ಲಿ ಟಿ.ಪಿ.ಕೈಲಾಸಂ ಖುದ್ ಮಾತನಾಡಲು ಶುರು ಮಾಡುತ್ತಾರೆ...

ಟಿ.ಪಿ.ಕೈಲಾಸಂ ಇಲ್ಲ ಅನ್ನೋದು ಗೊತ್ತೆಯಿದೆ. ಆದ್ರೆ, ಇಲ್ಲಿ ಆ ಪಾತ್ರಕ್ಕೆ ರೇಡಿಯೋ ಜಾಕಿ ಮತ್ತು ಅಭಿನಯ ತಂರಂಗದ ವಿದ್ಯಾರ್ಥಿ ಶ್ರೀನಿ ಜೀವ ತುಂಬಿದ್ದಾರೆ. ಟಿ.ಪಿ.ಕೈಲಾಸಂ ಥರದ ಗೆಟಪ್. ಸಿಗರೇಟ್ ಸೇದುವ ಅವರ ಸ್ಟೈಲ್. ಸರಾಬು ಕುಡಿಯೋ ಖದರ್. ಹಂಗಂಗೆ ಇಲ್ಲಿ ಕಣ್ಣುಮುಂದೆ ಕಟ್ಟುತ್ತವೆ...ಆ ಕ್ಷಣವೇ ಕೈ ಇಲ್ಲಿ ಇನ್ನು ಜೀವಂತ ಅನ್ನೋಥರವೇ ಭಾಸವಾಗುತ್ತದೆ...

ಕೈಲಾಸಂ ಅನೇಕ ಪಾತ್ರಗಳನ್ನ ರಂಗಕ್ಕೆ ತಂದಿದ್ದಾರೆ. ಅದೇ ಪಾತ್ರಗಳೇ ಈ ಚಿತ್ರದಲ್ಲಿ ಮಾತನಾಡುತ್ತವೆ. ಕೈಲಾಸಂಗೇನೆ ಹತ್ತು ಹಲವು ಪ್ರಶ್ನೆಗಳನ್ನ ಕೇಳುತ್ತವೆ. ಆದ್ರೆ, ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೇನೆ ಕೈಲಾಸಂ ಮುಗುಳು ನಗೆಯಲ್ಲಿಯೇ ಅವುಗಳನ್ನೆಲ್ಲ ತೇಲಿಸಿ ಮುಂದಿನ ಕ್ಯಾರೆಕ್ಟರ್ ಗಳ ಬಗ್ಗೆ ತಮ್ಮಲಿಯೇ ಪ್ರಶ್ನಿಸಿಕೊಂಡು ಮುನ್ನಡೆಯುತ್ತಾರೆ...

ಈ ರೀತಿ ಚಿತ್ರದಲ್ಲಿ "ಸೂಳೆ" ನಾಟಕ ಪಾತ್ರ ಬರುತ್ತದೆ. ಟೊಳ್ಳು-ಗಟ್ಟಿ ರಚನೆಯ ಕ್ಯಾರೆಕ್ಟರ್ ಗಳು ಹಾದು ಹೋಗುತ್ತವೆ. ಈ ಎಲ್ಲ ಪ್ರಮುಖ ಪಾತ್ರಕ್ಕೆ ನಟಿ ಛಾಯಾ ಸಿಂಗ್ ಜೀವ ತುಂಬಿದ್ದಾರೆ. ಹಾಗಂತ ಛಾಯ ಇಲ್ಲಿ ಎಲ್ಲೂ ಒಂದೇ ಥರ ಕಾಣಿಸುವುದಿಲ್ಲ. ಒಂದೇ ಥರದ ಅಭಿನಯವೂ ಇಲ್ಲ ಬಿಡಿ. ಅಂತಹ ಕಲಾತ್ಮಕ ನಟನೆಯನ್ನ ಛಾಯಾ ಸಿಂಗ್ "ಸಿಂಪ್ಲಿ ಕೈಲೋಸಂ" ನಲ್ಲಿ ತೋರಿದ್ದಾರೆ. ಸದ್ಯಕ್ಕೆ ಈ ಚಿತ್ರ ಬೆಂಗಳೂರಲ್ಲಿ ಇತ್ತೀಚಿಗೆ ಪೂರ್ವ ಪ್ರದರ್ಶನ ಕಂಡಿದೆ. ಮೆಚ್ಚುಗೆನೂ ಪಡೆದಿದೆ...

- ರೇವನ್ ಪಿ.ಜೇವೂರ್

ಕಪ್ಪು ಸುಂದರಿ....


ಕಪ್ಪು ಸುಂದರಿ. ಮಂಗಳೂರಿನ ಬೆಡಗಿ. ಮುಂಬೈಯಲ್ಲಿ ಬೆಳೆದ ಹುಡುಗಿ.. ಸ್ಲಂ ಡಾಗ್ ಚಿತ್ರದಿಂದ ಹಾಲಿವುಡ್ ನಲ್ಲಿ ಹೆಸರು. ಈಗ ಇದೇ ಫ್ರಿಡಾ ಪಿಂಟೋ ಮತ್ತೊಂದು ಚಿತ್ರಕ್ಕೆ ನಾಯಕಿ. ಮುಸ್ಲಿ ರಾಷ್ಟ್ರದ ಮಹಿಳೆಯರ ಕಥೆ-ವ್ಯಥೆ ಬಿಂಬಿಸುವ ಚಿತ್ರದಲ್ಲಿ ಫ್ರಿಡಾನೇ ಮೇನ್. ಪ್ರೀಡಾನೇ ಎಲ್ಲ. ಕಥೆ ಕೂಡ ಫ್ರೀಡಾ ನಿಭಾಯಿಸಿದ ಪಾತ್ರದ ಸುತ್ತವೇ ಸಾಗುತ್ತದೆ. ಅದೇ ಪಾತ್ರದ ಹೆಸರನ್ನೇ ಚಿತ್ರಕ್ಕೆ ಇಡಲಾಗಿದೆ. ಅಂದ್ರೆ, "ಮಿರಾಲ್" ಅನ್ನೋದ ಪಿಂಟೋ ಕಾಣಿಸಿಕೊಳ್ತಾಯಿರೋ ಮತ್ತೊಂದು ಇಂಗ್ಲೀಷ್ ಚಿತ್ರ..ಪ್ಯಾಲೆಸ್ಟೆನ್ ಭಾಷೆಯಲ್ಲೂ ಇದು ಸಿದ್ಧವಾಗಿದೆ...

ಫ್ರಿಡಾ ಇಲ್ಲಿ ಒಬ್ಬ ಸ್ಕೂಲ್ ಗರ್ಲ್. ಅಪ್ಪನ ಸುಪರ್ದಿಯಲ್ಲಿ ಬೆಳೆದ ಪುಟ್ಟಿ. ಪ್ಯಾಲೆಸ್ಟೆನ್ ನಂತಹ ಸ್ಥಳದಲ್ಲಿ ಬೆಳೆಯವ ಹುಡುಗಿ. ಓದುವಾಗಲೇ ಭಾರೀ ಮಾತುಗಾರ್ತಿ. ತಡವಾಗಿ ಬಂದು ಪ್ರೇಯರ್ ನಲ್ಲಿ ನಿಲ್ಲೋ ಆಕೆ. ೧೭ ವರ್ಷಕ್ಕೇನೆ ಪ್ರೀತಿ-ಪ್ರೇಮ ಅಂತ ಸುತ್ತುವ ಹುಡುಗಿ. ಆದ್ರೂ ಎನೋ ಸಾಧಿಸುವ ಛಲಲ. ಮುನ್ನುಗ್ಗುವ ಧೈರ್ಯ. ಇದೇ ಈ ಹುಡುಗಿಯನ್ನ ಕಷ್ಟಕ್ಕೆ ಸಿಲುಕಿಸುತ್ತದೆ...ಪ್ರೀತಿಸಿದ ಹುಡುಗ ಟೆರರ್ ಆಗಿರೋದ್ರಿಂದ ಪೋಲಿಸ್ರ ಏಟು ಬೀಳುತ್ತವೆ. ಹೀಗೆ ಸಾಗುತ್ತದೆ ಮಿರಾಲ್ ಕಥೆ...

ಆದ್ರೆ, ಇಂತಹ ಕಥೆಗಳು ಪ್ಯಾಲೆಸ್ಟ್ ನಲ್ಲಿ ಸಾಕಷ್ಟಿವೆ. ಇಂತಹವುಗಳನ್ನ ಹತ್ತಿರದಿಂದ ನೋಡಿದ ಪತ್ರಕೆರ್ತೆ ರೂಲಾ ಗೆಬ್ರೆಯಲ್ "ಮಿರಾಲ್" ಅಂತ ಕಾದಂಬರಿಯನ್ನೆ ಬರೆದಿದ್ದಾರೆ. ಇದನ್ನ ಓದಿದ ನಿರ್ದೇಶಕ ಜುಲಿಯನ್ ಸ್ಕಾನ್ ಬೆಲ್ ಫ್ರೀಡಾಳನ್ನ ಹಾಕಿಕೊಂಡು "ಮಿರಾಲ್" ಅಂತಲೆ ಚಿತ್ರ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದ್ರೆ, ಮಿರಾಲ್ ಬರೆದ ಇದೇ ರೂಲಾ ಗೆಬ್ರೆಯಲ್ ಚಿತ್ರಕ್ಕೆ ಸ್ಕ್ರೀನ್ ಪ್ಲೇ ಮಾಡಿದ್ದಾರೆ...

ಚಿತ್ರ ಕೇವಲ ಮಿರಾಲ್ ಕಥೆ ಹೇಳ್ತಿಲ್ಲ. ಪ್ಯಾಲೆಸ್ಟೆನ್ ನ ಪ್ರತಿ ಮಹಿಳೆಯ ಕಥೆಯನ್ನ ಇದು ಹೇಳ ಹೊರಟ್ಟಿದೆ. ಕಳೆದ ಸೆಪ್ಟಂಬರ್ ೩ ರಂದು ಇದು ವೆನಿಸ್ ಫಿಲ್ಮ ಫೆಸ್ಟಿವಲ್ ನಲ್ಲೂ ಪ್ರರ್ದಶನ ಕಂಡಿದೆ. ಫ್ರಾನ್ಸ್ ಫಿಲ್ಮ ಫೆಸ್ಟ್ ನಲ್ಲೂ "ಮಿರಾಲ್" ಗಮನ ಸೆಳೆದಿದ್ದಾಳೆ. ಅಷ್ಟೇ ಪ್ರಶಂಸೆನೂ ಪಡೆದಿದ್ದಾಳೆ..ಅಮೆರಿಕದಲ್ಲೂ ಮಿರಾಲ್ ತೆರೆ ಕಾಣಲಿದೆ. ಆದ್ರೆ, ಅದಕ್ಕೆ ೨೦೧೧ ಮಾರ್ಚ್ ೨೫ ರವರೆಗೂ ಕಾಯಬೇಕು...

-ರೇವನ್ ಪಿ.ಜೇವೂರ್

ಪುನಿತ್ ಪವರ್...

ಪುನಿತ್ ಪವರ್ ಮಲ್ಟಿಪಲ್ ಆಗಿದೆ...
ಹೌದು..! ಮಲ್ಟಿಸ್ಟಾರರ್ ಸಿನೆಮಾದಲ್ಲಿ ಪುನಿತ್ ಮೊದಲ ಭಾರಿ ನಟಿಸುತ್ತಿದ್ದಾರೆ. ಮೊದಲೆಲ್ಲ ಅಪ್ಪು ಒಬ್ಬರೇ ತೆರೆ ಮೇಲೆ ಮಿಂಚಿತ್ತಿದ್ದರು. ಆದ್ರೆ, ಈಗ ಇಬ್ಬರು ತಾರೆಯರು ಸಾಥ್ ನೀಡ್ತಾಯಿದ್ದಾರೆ. ಜಾಕಿ ನಂತರ ಹೋಮ ಬ್ಯಾನರ್ ನಲ್ಲಿ ಸಿದ್ಧವಾಗ್ತಿರೋ ಈ ಚಿತ್ರದಲ್ಲಿ ಪುನಿತ್ ಗೆ ಲೂಸ್ ಮಾದ ಯೋಗಿ ಮತ್ತು ಶ್ರೀನಗರ ಕಿಟ್ಟಿ ಜೋಡಾಗಿದ್ದಾರೆ.....ರಾಧಿಕಾ ಪಂಡಿತ್ ಮೂವರು ನಾಯಕರ ಮಧ್ಯೆ ಒಬ್ಬಳೇ ಒಬ್ಬ ಚೆಲುವೆ...

ಕನ್ನಡದವರ ಈ ಚಿತ್ರಕ್ಕೆ ತಮಿಳು ಚಿತ್ರದ ಸಂಪೂರ್ಣ ಆಧಾರವಿದೆ."ನಾಡೋಡಿಗಳ್" ಅಂತ ಕಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ ಈ ಚಿತ್ರ ಮೂವರು ಗೆಳೆಯರ ಕಥೆ ಹೇಳುತ್ತದೆ. ಗೆಳೆಯನ ಪ್ರೀತಿಗಾಗಿ ಜೊತೆಗೇನೆ ಇರೋ ಸ್ನೇಹಿತರು ಇನ್ನಿಲ್ಲದಂತೆ ಕಷ್ಟ ಪಡೋದು. ತಮ್ಮ ಜೀವನವನ್ನೇ ಮುಡುಪಾಗಿಡೋದು "ನಾಡೋಡಿಗಳ್" ಚಿತ್ರದ ಪ್ರಮುಖ ಅಂಶ..ಆದ್ರೆ, ಹೊಸಬರ ಈ ಸಿನೆಮಾದಲ್ಲಿ ಸಾಕಷ್ಟು ತಿರುವುಗಳಿವೆ. ಹೀಗೆ ಆಗುತ್ತದೆ ಅಂದುಕೊಳ್ಳುವ ಮೊದಲೇ ಚಿತ್ರಕಥೆ ಬೇರೆ ದಿಕ್ಕಿನತ್ತ ಕರೆದುಕೊಂಡು ಹೋಗುತ್ತದೆ. ಅಂತಹ ಪ್ರಯೋಗಾತ್ಮಕ ಚಿತ್ರಕಥೆಗೆ ಒಬ್ಬರಲ್ಲ, ಇಬ್ಬರಲ್ಲ, ರಾಜ್ ಫ್ಯಾಮಿಲಿ ರಾಘ್ರೇಂದ್ರ ರಾಜ್ ಕುಮಾರ್ ಅಂಡ್ ಪುನಿತ್ ರಾಜ್ ಕುಮಾರ್ ಮನಸೋತಿದ್ದಾರೆ. ಅದರ ಫಲವೇ ಈಗ ಕನ್ನಡದಲ್ಲಿ "ನಾಡೋಡಿಗಳ್" ಯಥಾವತ್ತು ಸಿದ್ಧವಾಗುತ್ತಿದೆ..

ಆದ್ರೂ, ತಮಿಳ್ ನೇಟಿವಿಟಿಗೂ. ಇಲ್ಲಿಯ ನೇಟಿವಿಟಿಗೂ ತುಂಬಾನೇ ವ್ಯತ್ಯಾಸ. ಹಾಗಾಗಿ, ದಾಡಿ ಮತ್ತು ಲುಂಗಿಯಲ್ಲಿ ಪುನಿತ್ ನೋಡಲು ಸಾಧ್ಯವೇ. ಅದಕ್ಕೇನೆ ಪುನಿತ್ ಅಂಡ್ ಫ್ರೆಂಡ್ಸ್ ಗೆ ಇಲ್ಲಿ ೮೦-೯೦ ರ ದಶಕದ ಶೈಲಿಯ ಉಡುಗೆ-ತೊಡುಗೆಗಳನ್ನ ಡಿಸೈನ್ ಮಾಡಲಾಗಿದೆ. ಅದೇ ಲುಕ್ ಅಂಡ್ ಫೀಲ್ ನಲ್ಲಿಯೇ ಅಪ್ಪು ಬರಲಿದ್ದಾರೆ. ರಾಧಿಕಾ ಪಂಡಿತ್ ಕೂಡ ಅಷ್ಟೇ. ಆಗಿನ ಲಂಗಾ-ದಾವಣಿ ಗೆಟಪ್ ನಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಅಷ್ಟೇ ಮಾತುಗಾರ್ತಿ ಕೂಡ ಹೌದು..

ಇವರಲ್ಲದೇ ಚಿತ್ರದಲ್ಲಿ ಇನ್ನು ಅನೇಕ ನಟರಿದ್ದಾರೆ. ಬರೊಬ್ಬರಿ ೧೮ ತಿಂಗಳ ಸುದೀರ್ಘ ಗ್ಯಾಪ್ ನ ನಂತರ ಈ ಚಿತ್ರಕ್ಕಾಗಿ ನಟ ವಿಶಾಲ್ ಹೆಗಡೆ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ರಂಗಾಯಣ ರಘು ಇಲ್ಲೂ ಮುಂದುವರೆಯಲ್ಲಿದ್ದಾರೆ. ಜಾಕಿ ಟೀಮ್ ನ ವಿ.ಹರಿಕೃಷ್ಣ ಸಂಗೀತ ಇನ್ನು ಹೆಸರಿಡದ ಈ ಚಿತ್ರಕ್ಕೂ ಇದೆ. ಸತ್ಯಾ ಹೆಗಡೆ ಇಲ್ಲೂ ಇದ್ದಾರೆ. ವಿಶೇಷವೆಂದ್ರೆ, ಮಠ ಖ್ಯಾತಿಯ ಡೈರೆಕ್ಟರ್ ಗುರುಪ್ರಸಾದ್ ಡೈಲಾಗ್ ಬರೆದುಕೊಟ್ಟಿದ್ದಾರೆ...೯೦ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಬರುವ ಮಾರ್ಚ್ ಹೊತ್ತಿಗೆ ಚಿತ್ರ ತೆರೆಗೂ ಬರಲಿದೆ.

ಆದ್ರೆ
, ಈಗಷ್ಟೇ ಸೆಟ್ಟೇರಿರುವ ಈ ಮಲ್ಟಿಸ್ಟಾರ್ ಸಿನೆಮಾದಲ್ಲಿ ನಾಡೋಡಿಗಳ್ ಚಿತ್ರದ ಒಬ್ಬ ನಾಯಕಿಯನ್ನ ಕನ್ನಡಕ್ಕೂ ಕರೆತಂದಿದ್ದಾರೆ. ಅಭಿನಯ ಅನ್ನೋ ಈ ಹುಡುಗಿ ತಮಿಳು ಚಿತ್ರದಲ್ಲಿ ನಾಯಕ ಶಶಿಕುಮಾರ್ ಸಹೋದರಿ ಪಾತ್ರ ನಿರ್ವಹಿಸಿದ್ದರು. ಇಲ್ಲೂ ಅದು ಮುಂದುವರಿಯಲಿದೆ. ಈ ಹುಡುಗಿಯನ್ನ ತೆರೆ ಮೇಲೆ ನೋಡಿದವರಿಗೆ ಈಕೆ ಅದೆಷ್ಟು ಸುಂದರಿ. ಅದೆಷ್ಟು ಮಾತುಗಾರ್ತಿ ಅನಿಸುತ್ತದೆ. ಅದ್ರೆ, ಈ ನಟಿ ರಿಯಲ್ ಲೈಫ್ ನಲ್ಲಿ ಡಮ್ ಅಂಡ್ ಡಫ್. ಇದನ್ನು ಕೇಳಿ ನಿಜಕ್ಕೂ ಬೇಸರವಾಯಿತು. ಆದರೇನಾಯಿತು. ಈ ಅಭಿನಯಳ ಅಭಿನಯಕ್ಕೆ ಸಲಾಮ್ ಹೊಡೆಯಲೇಬೇಕು....

- ರೇವನ್ ಪಿ.ಜೇವೂರ್

Friday, October 15, 2010

ಒಲವ ಬೆಳಕು...

ಬಾಳಿ ಬದುಕ ಬೇಕು ನಿನ್ನ ಒಲವಿನ ಬೆಳಕಿನಲ್ಲಿ.
ನೋವ ಮರೆಯಬೇಕು ನಿನ್ನ ವರ್ಣನೆಯ
ಕವಿತೆ ಸಾಲುಗಳಲ್ಲಿ. ಕಳೆದು ಹೋಗಬೇಕು
ನಿನ್ನ ಪ್ರೇಮದ ಮಡಿಲಲ್ಲಿ.

ಜೀವನದ ಜಾಡು ಹುಡುಕಿ ಹೊರಟಾಗ ನೀ
ಸಿಕ್ಕೆ ಒಲವ ಮರದಂತೆ. ಸಾಕೆಂದರೂ ಸೂಸುವೆ
ಪ್ರೀತಿಯ ನೆರಳ ಈ ಪ್ರೇಮಹೋಕನಿಗೆ.

ನಲ್ಮೆಯ ನಾಜೂಕಿನ ನನ್ನಾಕೆ ನೀ. ನಗಬಾರದೆ
ನನ್ನೊಮ್ಮೆ ನೋಡಿ. ನಾನಾಗುತ್ತಿದ್ದೇ ಆಗ ನಗುವಿ
ನಗಾರಿ.

ನಾ ಹೊರಟ ಆ ಕ್ಷಣ. ನಿನ್ನಲ್ಲಿತ್ತು ಅದೇನೋ ತಲ್ಲಣ.
ಹೇಳಬಾರದಿತ್ತೇ ಮರುಕ್ಷಣ. ನಾ ನಿನ್ನೊಂದಿಗ್ಗೇನೆ
ಸತ್ತು ಹೋಗುತ್ತಿದ್ದೇ ಅದೇ ದಿನ.

ಮರಳಿ ಬಂದಾಗ ನೀ ನಿರಲಿಲ್ಲ. ಇತ್ತಲ್ಲಿ ನೀ ಬಿಟ್ಟು
ಹೋದ ನಿನ್ನೊಲವಿನ ಮರ.....ನಮ್ಮೊಲವಿನ ಮರ....

- ರೇವನ್ ಪಿ.ಜೇವೂರ್

Wednesday, October 13, 2010

ಸುಂದರ ತಾಣ..ಪ್ರಜ್ವಲ್ ಗಾನ...

ಮುರಳಿ ಮೀಟ್ಸ್ ಮೀರಾ...
ಪ್ರಜ್ವಲ್ ದೇವರಾಜ್ ಹೊಸ ಸಿನೆಮಾ. ಕಳೆದ ಒಂದು ಒಂದೂವರೆ ತಿಂಗಳ ಹಿಂದೆ ಮಹೂರ್ತ ಮುಗಿದಿತ್ತು. ಈಗ ನೋಡಿದ್ರೆ, ಚಿತ್ರವೇ ಸಿದ್ಧವಾಗಿದೆ. ಒಂದೇ ಸ್ಕೆಡ್ಯೂಲ್ ನಲ್ಲಿ ಚಿತ್ರ ಪೂರ್ಣಗೊಳಿಸುವ ಪ್ಲಾನ್ ಚಿತ್ರ ತಂಡದ್ದಾಗಿತ್ತು. ಆದ್ರೆ, ಮಳೆಯೋ...ಎಲ್ಲವನ್ನೂ ಏರು-ಪೇರು ಮಾಡಿತು. ಅಂದುಕೊಂಡದ್ದಕ್ಕಿಂತ ಕೆಲವು ದಿನ ಹೆಚ್ಚೇ ಆಗಿದೆ. ಆದರೂ ನೋ ಪ್ರಾಬ್ಲಂ ಅಂತಲೇ ನಿರ್ದೇಶಕ ಯೋಗೇಶ್ ಹುಣಸೂರು ಮೊದಲ ನಿರ್ಮಾಣದ ತಮ್ಮ ಚಿತ್ರಕ್ಕೆ ಅದೇ ಉತ್ಸಾಹದಲ್ಲಿಯೇ ಸಾಗುತ್ತಿದ್ದಾರೆ.ಚಿತ್ರದ ಹಾಡುಗಳಿಗಾಗಿ ಅದ್ಭುತವೆನಿಸುವ ತಾಣವನ್ನೇ ಹೆಕ್ಕಿ ತೆಗೆದಿದೆ ಇವರ ತಂಡ....

ಹೌದು...! ಈಗ ಇಲ್ಲಿ ಹೆಚ್ಚು ಮಾತನಾಡಲು ಹೊರಟಿರೋದು ಇದನ್ನ. ಬೆಂಗಳೂರಿನ ಹೆಸರಗಟ್ಟದಲ್ಲಿ ಒಂದು ಪ್ಲೇಸ್ ಇದೆ. ಇಲ್ಲಿ ಆದರ್ಶ ಫಿಲ್ಮ ಇನ್ಸ್ ಟಿಟ್ಯೂಟ್ ಸಹ ಇದೆ. ಹಾ!!! ಇದರ ಪಕ್ಕದಲ್ಲಿಯ ಆ ಬಯಲು ಪ್ರದೇಶ ನಿಜಕ್ಕೂ ಸುಂದರ ತಾಣ. ಕೆಮ್ಮಣಗುಂಡಿ..ಇಲ್ಲವೋ ಸಕಲೇಶಪುರದ ಆ ಹಚ್ಚಹಸಿರ ಅನುಭವ ಇಲ್ಲಿಗೆ ಬಂದವರಿಗೆ ಕಂಡಿತ ಆಗುತ್ತದೆ. ಅಂತಹ ಆ ಚೆಂದನೆಯ ಜಾಗದಲ್ಲಿ ಹೆಚ್ಚು ಫೈಟ್ ಸೀನ್ ಗಳೆ ಶೂಟ್ ಆಗುತ್ತವೆ.
ಆದ್ರೆ, ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಗೆ ಅದ್ಯಾವಾಗ ಹೊಳೆಯಿತೋ ಏನೋ. ಹೆಸರಗಟ್ಟದ ಆ ಸ್ಥಳಕ್ಕೆ ಬಂದು ಪಕ್ಕಾ ಪ್ಲ್ಯಾನೇ ಹಾಕಿಕೊಂಡಿದ್ದಾರೆ. ರಾಜಸ್ಥಾನಿ ಬ್ಯಾಕ್ ಡ್ರಾಪ್ ನಲ್ಲಿ ತಮ್ಮ ಚಿತ್ರದ ಹಾಡೊಂದನ್ನ ಚಿತ್ರೀಕರಣಿಸಲು ಶುರು ಮಾಡಿದ್ದಾರೆ.

ಗುಜ್ಜರು
ತೊಡುವ ಉಡುಗೆಯನ್ನ ಧರಿಸಿದ ಮಕ್ಕಳು. ಅಲ್ಲಿಯ ಸಂಸ್ಕೃತಿಯನ್ನ ಬಿಂಬಿಸುವ ಮಹಿಳೆಯರು ಮತ್ತು ಪುರುಷರು ಹೆಸರುಗಟ್ಟದ ಆ ಮನಮೋಹಕ ಜಾಗದಲ್ಲಿ ಕಂಗೊಳಿಸುತ್ತಿದ್ದರು. ಕನ್ನಡ ಚಿತ್ರಕ್ಕೊಂದು ಸಿಂಪಲ್ ಬ್ಯಾಕ್ ಡ್ರಾಪ್ ಥರ ಕಾಣಿಸುತ್ತಿದ್ದರು...

ಇವರ
ಮಧ್ಯೆ ಪ್ರಜ್ವಲ್ ದೇವರಾಜ್ ಮತ್ತು ಹರ್ಷಿಕಾ ಪೊನ್ನಚ್ಚ ಕುಣಿಯುತ್ತಿದ್ದರು. ಧರಿಸಿದ ವೈಟ್ ಅಂಡ್ ವೈಟ್ ಡ್ರೆಸ್ ಇಲ್ಲಿ ಮಿರ..ಮಿರನೇ ಮಿಂಚುವಂತೆ ಮಾಡಿತ್ತು. ನ್ಯಾಚುರಲ್ ಲೈಟ್ಸ್ ಜೊತೆ..ಜೊತೆಗೇನೆ ಸೆಟ್ ಹುಡುಗರು ಸಟ್ ಮಾಡುವ ಲೈಟ್ಸ್ ಈ ಜೋಡಿಯ ಮಿಂಚಿನ ಮೋಡಿಯನ್ನ ಇನ್ನಷ್ಟು ಹೆಚ್ಚಿಸುತ್ತಿದ್ದವು. ದನ್ ಕುಮಾರ್ ಮಾಸ್ಟರ್ ಹೇಳಿಕೊಟ್ಟ ಹೆಜ್ಜೆಗೆ ಹೆಜ್ಜೆ ಹಾಕುವಾಗ ಈ ನವ ಜೋಡಿ ಕಣ್ಮಣ ಸೆಳೆಯುತ್ತಿತ್ತು. ಕಾರಣ, ಅಷ್ಟು ಚೆನ್ನಾಗಿದೆ ತೆರೆ ಮೇಲಿನ ಆ ಫೇರ್...

ಸಂಗೀತ
ನಿರ್ದೇಶಕ ಅಭಿಮಾನ್ ರಾಯ್ ಈ ಒಂದು ಹಾಡು ಬರೆದುಕೊಟ್ಟಿದ್ದಾರೆ. ಇದು ಇಲ್ಲಿಯ ಹಸಿರಿನ ನಡುವೆ ಭಿನ್ನ ವಿಭಿನ್ನವಾಗಿ ಚಿತ್ರೀಕರಿಸಲ್ಪಡಲಿದೆ. ಈ ಒಂದು ಹಾಡಿನ ನಂತರ ತಂಡ ಮತ್ತೊಂದು ಗೀತೆಯ ಶೂಟಿಂಗ್ ಮಾಡಲಿದೆ. ಇದಾದ ಮೇಲೆ ಬರುವ ನವೆಂಬರ್ ಹೊತ್ತಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ನೋಡಿ ಎಂಜಾಯ್ ಮಾಡಿ...

-ರೇವನ್ ಪಿ.ಜೇವೂರ್

Monday, October 11, 2010

ಭಾರತಿ ಹೆಜ್ಜೆ...

ನಟಿ ಭಾರತಿ...
ತಮ್ಮ ಚಿತ್ರ ಬದುಕನ್ನ ಮತ್ತೆ ನೆನೆಪಿಸಿಕೊಂಡಿದ್ದಾರೆ. ನಡೆದು ಬಂದ "ಬೆಳ್ಳಿ ಹೆಜ್ಜೆ"ಯನ್ನ ಮನಸಾರೆ ತಿರುವಿ ಹಾಕಿದ್ದಾರೆ. ಏನು ಹೇಳಲು ಸಾಧ್ಯವೋ ಅದನ್ನೆಲ್ಲ ಕನಾರ್ಟಕ ಚಲನ ಚಿತ್ರ ಅಕಾಡೆಮಿ ತಿಂಗಳ ಪ್ರತಿ ಎರಡನೇ ಶನಿವಾರ ಆಯೋಜಿಸುವ "ಬೆಳ್ಳಿ ಹೆಜ್ಜೆ" ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾರೆ. ಹೆಚ್ಚು ಕಡಿಮೆ ೩ ಗಂಟೆ ನಡೆಯುವ ಬೆಳ್ಳಿ ಹೆಜ್ಜೆಯಲ್ಲಿ ಸಾಕಷ್ಟು ವಿಷಯಗಳನ್ನ ನೆನಪಿಸಿಕೊಂಡಿದ್ದಾರೆ. ಅವುಗಳಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಇಲ್ಲಿವೆ ಓದಿ ಎಂಜಾಯ್ ಮಾಡಿ....
ಭಾರತಿಯವರು ಕನ್ನಡದವರೇ. ಹಾಗಂತ ಇದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಓದುತಿದ್ದಾಗಿನ ದಿನಗಳವು. ಕಾಲೇಜಿನ ಕಾರ್ಯಕ್ರಮದಲ್ಲಿ ಗೆಳೆತಿಯೊಂದಿಗೆ ಕಾಣಿಸಿಕೊಂಡ ಸಂತದ ಕ್ಷಣಗಳು. ಅದೇ ಖುಷಿಯಲ್ಲಿಯೇ ಕಾಲೇಜಿನವರು ನೋಟೀಸ್ ಬೋರ್ಡ್ ನಲ್ಲಿ ಭಾರತಿ ಮತ್ತು ಅವರ ಗೆಳತಿ ಫೋಟೊ ಅಂಟಿಸಿದ್ದರು. ಅದೃಷ್ಟವೋ ಏನೋ. ಇದನ್ನ ನೋಡಿದ ನಟ ಕಲ್ಯಾಣಕುಮಾರ್ ಮತ್ತು ಚಿನ್ನಿ ಸಂಪತ್ತ ಭಾರತಿಯವರನ್ನ ಆಡಿಷನ್ ಗೆ ಕರೆದಿದ್ದರು. ಇದಾದ ಮೇಲೆ ಎಲ್ಲವೂ ನಾರ್ಮಲ್ ಡೇಸ್.

ಆದ್ರೆ, ಒಂದು ದಿನ ಅವರ ತಂದೆ ಕಾಲೇಜಿಗೆ ಬಂದಿದ್ದರು. ಬಂದೊಡನೆಯೇ ಅಮ್ಮ ನಾವೀಗ ಮದ್ರಾಸಿಗೆ ಹೋಗಬೇಕು. ನಡೆ ಬೇಗ ಅಂದ್ರು. ಆದ್ರೆ, ಭಾರತಿಯವರಿಗೆ ಒಂದೂ ಗೊತ್ತಾಗ್ತಿಲ್ಲ. ನಾನೇಕೆ ಮದ್ರಾಸ್ ಗೆ ಹೋಗಬೇಕು. ಓದು ಬಿಟ್ಟು ನಾನೇಕೆ ಹೋಗಬೇಕು. ಇಂತಹ ಪ್ರಶ್ನೆಯನ್ನ ತಂದೆಗೆ ಕೇಳಿದ್ದೇ ಕೇಳಿದ್ದು. ಅಷ್ಟೇ,ಅಲ್ಲ. ಒಲ್ಲೆ ಎಂದು ಅತ್ತಿದ್ದೇ ಅತ್ತಿದ್ದು. ಆದ್ರೂ, ಅಪ್ಪ ಕೇಳಲಿಲ್ಲ. ಕಾಲೇಜಿನ ಗುರುಗಳು ನಾಯಕಿಯಾಗುವ ಅವಕಾಶ ಅಂತ ಹೇಳೋದನ್ನ ಬಿಡಲಿಲ್ಲ. ಕೊನೆಗೆ ಭಾರತಿಯೆಂಬ ಆ ಕಾಲೇಜು ಯುವತಿ ಮದ್ರಾಸ್ ಗೆ ಬಂದೇ ಬಿಟ್ಟರು.

ದುರಾಷ್ಟವೋ ಏನೋ. ಮೊದಲ ಆಫರ್ ನ ಚಿತ್ರ ಪೂರ್ಣಗೊಳ್ಳಲೇ ಇಲ್ಲ. ಆದ್ರೂ, ಕರೆತಂದ ಚಿನ್ನಿ ಸಂಪತ್ತ ಅವರು ಮದ್ರಾಸ್ ನಲ್ಲಿ ಬಿ.ಆರ್ ಪಂತಲು ಅವರನ್ನ ಪರಿಚಿಯಿಸಿದರು. ಅದರ ಫಲ "ದುಡ್ಡೇ ದೊಡ್ಡಪ್ಪ" ಚಿತ್ರದಲ್ಲಿ ಭಾರತಿ ನಟಿಸಿದರು. ಅಲ್ಲಿಂದ ಅನೇಕ ಚಿತ್ರಗಳಲ್ಲಿ ಭಾರತಿಯವರ ಅಭಿನಯ ಪಂತಲು ಅವರ ಹಲವು ಪಿಕ್ಚರ್ ಗಳಲ್ಲಿ ಕಂಡು ಬಂತು. ಬಂಗಾರದ ಮನುಷ್ಯ, ಮೇಯರ್ ಮುತ್ತಣ್ಣದಂತಹ ಚಿತ್ರದಲ್ಲಿ ರಾಜ್ ಗೆ ಜೋಡಿಯಾಗಿದ್ದರು. ಬಂಗಾರದ ಜಿಂಕೆ ಚಿತ್ರದಲ್ಲಿ ಪತಿ ವಿಷ್ಣುವರ್ಧನ್ ಅವರೊಟ್ಟಿಗೆ ನಟಿಸಿದ್ದರು..ಕೃಷ್ಣದೇವರಾಯ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿಯೂ ಬಂತು. ಹೆಸರು ಎಲ್ಲಡೆ ರಾರಾಜಿಸಿತು.

ಕಾಲೇಜು ದಿನಗಳಲ್ಲಿ ಭಾರತಿಯವರಿಗೆ ಕ್ರೀಡೆ ಅಂದ್ರೆ ತುಂಬಾ ಇಷ್ಟ. ಶಾಲಾ ದಿನಗಳಲ್ಲಿ ಕಂಡಿತ ಒಂದಿಲ್ಲ ಒಂದು ಕ್ರೀಡೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕಾಲೇಜು ಮೆಟ್ಟಿಲೇರಿದ ನಂತರವೂ ಇದು ಮುಂದುವರೆದಿತ್ತು. ಶಾಲಾ ದಿನಗಳಲ್ಲಿಯ ಆ ಸಮವಸ್ತ್ರವನ್ನ ಧರಿಸಿಕೊಂಡೇ ಕಾಲೇಜಿಗೆ ಬಂದು ಆಟವಾಡಿದ್ದು ಇದೆ. ಅಷ್ಟೊಂದು ಕ್ರೀಡಾಸಕ್ತಿ ಭಾರತಿಯವರ ಮನದಲ್ಲಿ ಮನೆ ಮಾಡಿತ್ತು. ಸಂಗೀತದೆಡೆಗೂ ಒಂಚೂರು ಒಲವಿತ್ತು. ಆದ್ರೆ, ನಟಿಯಾದ ಮೇಲೆ ಬಹುತೇಕ ಎಲ್ಲವೂ ಮರೆತು ಹೋಯಿತು. ನಟನೆಯ ಕಲಿಕೆಯಲ್ಲಿಯೇ ಪಯಣ ಸಾಗಿತ್ತು. ಕನ್ನಡ ಸೇರಿದಂತೆ ತಮಿಳು.ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ಭಾರತಿ ನಟಿಸಿದರು. ಹಿಂದಿಯಲ್ಲೂ ಬೆಂಗಳೂರಿನ ಭಾರತಿ ಅಭಿನಯ ಕಣ್ಮನ ಸೆಳೆದಿತ್ತು.

ದಿಲೀಪ್ ಕುಮಾರ್ ಅವರೊಟ್ಟಿಗೆ ಸಹ ಭಾರತಿ ಕಾಣಿಸಿಕೊಂಡ್ರು. ಒಂದಲ್ಲ, ಎರಡಲ್ಲ ಎಷ್ಟೇ ಟೇಕ್ ತೆಗೆದುಕೊಂಡರೂ ಸಹನೆಯಿಂದ ಭಾರತಿ ನಟಿಸಿ ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಅವರಿಂದ ಬೇಷ್ ಅನಿಸಿಕೊಂಡ್ರು. ತಮ್ಮ ಶಿಸ್ತಿನಿಂದ ಎಲ್ಲಡೆ ಹೆಸರು ವಾಸಿಯಾದ ಭಾರತಿ ಈಗಲೂ ಹಾಗೇನೆ. ಹೇಳಿದ ಟೈಮ್ ಗೆ ಸರಿಯಾಗಿ ಸೆಟ್ ನಲ್ಲಿ ಹಾಜರಿರುತ್ತಿದ್ದರು. ತಮ್ಮ ಟೈಮ್ ಸೆನ್ಸ್ ನಿಂದಲೇ ಭಾರತಿಯವರು ಹಿಸ್ಟೋರಿಕಲ್ ಚಿತ್ರದ ಅವಕಾಶ ಪಡೆದಿದ್ದರು. ಅದ್ಯಾವುದೋ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪಂತಲು ಅವರು ಭಾರತಿಯವರ ಶಿಸ್ತು ನೋಡಿ ಬೆರಗಾಗಿದ್ದರು. ಐತಿಹಾಸಿಕ ಚಿತ್ರದ ಅವಕಾಶ ನೀಡುವುದಾಗಿಯೂ ಹೇಳಿದ್ರು.

ಈ ರೀತಿ ಪ್ರಶಂಸೆಗೆ ಪಾತ್ರವಾದ ನಟಿ ಇತ್ತೀಚಿನ "ರಾಜ್ ದಿ ಶೋ ಮ್ಯಾನ್" ಚಿತ್ರದ ಹಾಡೊಂದರಲ್ಲಿ ಪುನಿತ್ ಜೊತೆಗೆ ಡಾನ್ಸ್ ಮಾಡಿದ್ದರು. ಕವಿತಾ ಲಂಕೇಶ್ ಅವರ "ಪ್ರೀತಿ ಪ್ರೇಮ ಪ್ರಣಯ" ಚಿತ್ರದಲ್ಲಿ ಅನಂತ್ ನಾಗ್ ಪೇರ್ ಆಗಿ ಭಾರತಿ ಕಾಣಿಸಿಕೊಂಡ್ರು. ತಮ್ಮ ನೆನಪಿನ ಬುತ್ತಿಯನ್ನ "ಬೆಳ್ಳಿ ಹೆಜ್ಜೆ" ಯಲ್ಲಿ ಬಿಚ್ಚಿ ಹಲವರಿಗೆ ಬ್ಲ್ಯಾಕ್ ಅಂಡ್ ವೈಟ್ ದಿನದ ಕಲರ್ ಫುಲ್ ಕಥೆಯ ರಸದೌತಣ ನೀಡಿದರು.

- ರೇವನ್ ಪಿ.ಜೇವೂರ್

Tuesday, October 5, 2010

ಲಂಕೇಶರ ಮಗನ ಪ್ರಚಾರ...


ಲಂಕೇಶರ ಮಗ ಇಂದ್ರಜಿತ್ ಡ್ಯಾನ್ಸ್ ಮಾಡ್ತಾಯಿದ್ದಾರೆ. ನಿರ್ದೇಶಕನಕ್ಕೆ ಕೈ ಹಾಕಿದ್ದು ಗೊತ್ತೇಯಿದೆ. "ಮೋನಾಲಿಸಾ" ದಂತಹ ಚಿತ್ರಕೊಟ್ಟು ಕನ್ನಡದಲ್ಲಿ ಒಂಚೂರು ಜಾಗ ಮಾಡಿಕೊಂಡದ್ದು ಈಗ ಹಳೆ ಕಥೆ. ಹೊಸ ಕಥೆ ಹೊಸದೇ ಬಿಡಿ. "ಹುಡುಗ-ಹುಡುಗಿ" ಚಿತ್ರಕ್ಕೆ ಇದೇ ಇಂದ್ರಜಿತ್ ನಿರ್ದೇಶನವೇನೋ ಮಾಡಿದ್ದಾರೆ. ಆದ್ರೆ ಅದೇನೋ ಏನೊ. ಹೊಸ ಟ್ರೆಂಡ್ ಹೆಸರಲ್ಲಿ ವಿದೇಶಿ ಹುಡುಗಿಯರೊಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ. ಬಾಲ್ಡ್ ಈಜ್ ಬ್ಯೂಟಿಫುಲ್ ಅನ್ನೋ ಹಾಗೆ ಕ್ಲೀನ್ ಸೇವ್ಡ್ ಹೆಡ್ ನಲ್ಲಿ
ಮಿರ..ಮಿರ ಮಿಂಚಿದ್ದೇ ಮಿಂಚಿದ್ದು....
ವಿದೇಶದಿಂದ ಡಾನ್ಸ್ ಸ್ಕೂಲ್ ಹುಡುಗಿಯರನ್ನ ಈ ಹಾಡಿಗಾಗಿ ಕರೆಸಿದ್ದಾರೆ. ಮುಂಬೈನ ಮಾಡೆಲ್ ಗಳ ಸಾಥ್ ಸಹ ಇದೆ. ಬೆಂಗಳೂರಿನ ಇಬ್ಬರು ಹುಡುಗಿಯರ ಜೋಡಿ ಇಲ್ಲಿ ಕೆಂಪಾದವೋ ಎಲ್ಲಾ ಕೆಂಪಾದವೋ ಥರವೇ ಇದೆ. ಈ ಒಂದು ಗೀತೆಗಾಗಿ ಸಿದ್ಧವಾದ ಸೆಟ್ ನಿಜಕ್ಕೂ ಚೆಂದ. ಬಾಲಿವುಡ್ ನ "ವೆಲ್ ಕಮ್" ಚಿತ್ರದ ಹಾಡೊಂದರ ಸೆಟ್ ನೆನಪಿಗೆ ಬರುತ್ತದೆ. ಆದ್ರೆ, ಇದು
ಕನ್ನಡದ ಮಟ್ಟಿಗೆ ಹೊಸತು ಅಂತಲೇಹೇಳಬಹುದು.
ಪ್ರಚಾರಕ್ಕಾಗಿ ರೆಡಿಯಾದ "ವಾಟ್ಸ್ ಅಪ್" ಪಲ್ಲವಿಯ ಈ ಹಾಡು ಸ್ಯಾಂಡಲ್ ವುಡ್ ಲೆಕ್ಕಕ್ಕೆ ವಿನೂತನ. ಹಿಂದೆ ಯಾವುದೇ ನಿರ್ದೇಶಕ ಚಿತ್ರದ ಪಚಾರಕ್ಕಾಗಿ ನೃತ್ಯ ಮಾಡಿದ್ದಿಲ್ಲ. ಸಖತ್ ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡದ್ದೂ ಇಲ್ಲ. ಇಂದ್ರಜಿತ್ ಇಂತಹ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಸಂತೋಷ್ ಪಾತಾಜೆ ಈ ಒಂದೇ ಒಂದು ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಮುರಳಿ

ಕೋರಿಯೋಗ್ರಾಫಿ
ಇದಕ್ಕಿದೆ....
ಹುಡುಗ-ಹುಡುಗಿ ಪ್ರಚಾರಕ್ಕೆ ಇಂದ್ರಜಿತ್ ಇನ್ನೊಂದು ತಂತ್ರ ಬಳಸುತ್ತಿದ್ದಾರೆ. ಚಿತ್ರದಲ್ಲಿ ಧರಿಸಿದ ನಟ-ನಟಿಯರ

ಆ ಎಲ್ಲ ಕಾಸ್ಟ್ಯೂಮ್ ಗಳನ್ನ ಧರಿಸಿ ಅದೇ ತಾರೆಯರೂ ರಾಂಪ್ ವಾಕ್ ಕೂಡ ಮಾಡಲಿದ್ದಾರೆ. ಚಿತ್ರದ ಗೀತೆಗಳಿಗೂ ಇವರ ಕುಣಿತವಿದೆ. ಆದ್ರೆ, ಇವರ ಕುಣಿತದಿಂದ ಇಂಡಸ್ಟ್ರೀಲಿ ಸುದ್ದಿಯಂತು ಆಗುತ್ತದೆ. ಆದರೂ, ಚಿತ್ರ ಪ್ರೇಮಿಗಳು ಪ್ರಚಾರದ ಗಿಮಿಕ್ ಗಳಿಗೆ ಮನಸೋಲುವುದಿಲ್ಲ ಅಂತ ಗೊತ್ತೇಯಿದೆ. ಅದಾಗ್ಯೂ ನಿರ್ಮಾಪಕ ಸಂದೇಶ ನಾಗರಾಜ್ ಅಂಡ್ ಮಿಸ್ಟರ್ ಇಂದ್ರಜತ್ "ಹುಡುಗ-ಹುಡುಗಿ" ರೀಚ್ ಮಾಡಲು ಹೊಸ..ಹೊಸ ಸರ್ಕಸ್ ಮಾಡ್ತಾಯಿದ್ದಾರೆ....
- ರೇವನ್ ಪಿ. ಜೇವೂರ್

Friday, October 1, 2010

ರೋಬೊ ರಜಿನಿ...

"ಎಂಧಿರನ್" ಇಂಟ್ರಸ್ಟಿಂಗ್ ಆಗಿದೆ. ಮೊದಲಾರ್ಧ ಹಿಡಿದು ಕುಳ್ಳಿರಿಸುತ್ತದೆ. ದ್ವಿತಿಯಾರ್ಧ ಹೊಸ ಜಗತ್ತಿನ ಅವಿಷ್ಕಾರಗಳ ಅನಾವರಣ ಮಾಡುತ್ತದೆ. ಅಂತ್ಯ ಹಾಲಿವುಡ್ ನ ಪ್ರಮುಖ ಚಿತ್ರಗಳ ದರುಶನ ಮಾಡಿಸುತ್ತದೆ. ಅಷ್ಟರ ಮಟ್ಟಿಗೆ "ಎಂಧಿರನ್" ಹಾಲಿವುಡ್ ರೇಂಜ್ ಗೇನೆ ಸಿದ್ಧವಾಗಿದೆ. ಸುರುವಿದ 150 ಕೋಟಿ ರುಪಾಯಿಯ ಆ ಶ್ರಮ ಎದ್ದು ಕಾಣುತ್ತದೆ. ರೆಹಮಾನ್ ಹಾಡುಗಳು ಅಷ್ಟೊಂದು ಚೆನ್ನಾಗಿ ಕೇಳುವುದಿಲ್ಲ. ಆದ್ರೆ, ನಿರ್ದೇಶಕ ಶಂಕರ್ ಚಿತ್ರ ಪ್ರೀತಿ ಹಾಡಿನ ಚಿತ್ರೀಕರಣದಲ್ಲೂ ಕಂಡು ಬರುತ್ತದೆ...


ರಜಿನಿ ಇಲ್ಲಿ ನಟಿಸಿಯೇಯಿಲ್ಲ. ಬದಲಿಗೆ ರಜಿನಿನೇ ರೋಬೊನೆ ಪರಕಾಯ ಪ್ರವೇಶ ಮಾಡಿದ್ದಾರೆ. ಆದ್ರೆ, ಇಲ್ಲಿ ಎಂದಿನ ರಜಿನಿಯ ದರುಶನ ಆಗೋದಿಲ್ಲ. ಕಾರಣ ಇದು ರೋಬೊಟ್ ಮ್ಯೂವಿ ಕಣ್ರೀ. ಸೈನ್ಸ್ ಸ್ಪರ್ಶವಿರೋ ಪಕ್ಕಾ ತಮಿಳ್ ಸಿನೆಮಾ. ಆದ್ರೂ, ಇಂಗ್ಲೀಷ ಚಿತ್ರ ನೋಡಿದಂತಹ ಅನುಭವ. ಏಕೆಂದ್ರೆ ಇಲ್ಲಿಯ ಪ್ರತಿ ಕೆಲಸವನ್ನ ಹಾಲಿವುಡ್ ಮಟ್ಟಕ್ಕೇನೆ ಮಾಡಲಾಗಿದೆ.



ಸ್ಟೈಲ್ ಕಿಂಗ್ ರಜಿನಿ ಸ್ಟೈಲ್ ಇಲ್ಲಿ ಕಡಿಮೆಯಿವೆ. ಇಲ್ಲವೇ ಇಲ್ಲ ಅದ್ರೂ ಸರಿನೇ. ಹಾಗಂತ ರಜಿನಿ ತಮ್ಮ ಮ್ಯಾನರಿಸಂ ಬಿಟ್ಟುಕೊಡೋದಿಲ್ಲ. ಅಲಲ್ಲಿ ಝಲಕ್ ಕೊಡ್ತಾನೇ ಹೋಗ್ತಾರೆ. ಚಿಟ್ಟಿ ಅನ್ನೊ ರೋಬೊ ಪಾತ್ರವೇ ಆಗಿರಬಹುದು. ಸಂಶೋಧಕನ ರೋಲೆ ಇರಬಹುದು. ರಜಿನಿ ಎರಡರಲ್ಲೂ ಭಿನ್ನವಾಗಿ ಕಾಣಿಸಿಕೊಳ್ತಾರೆ...ಎರಡನ್ನೂ ಕಂಪೇರ್ ಮಾಡಿದ್ರೆ, ರೋಬೊನೇ ಇಲ್ಲಿ ಗ್ರೇಟ್...



ಐಶ್ವರ್ಯ ರೈ ಬಚ್ಚನ್ ಪ್ರೇಯಸಿಯಾಗಿ ಎಂದಿನಂತೆ ಚೆಂದಗೆ ನಟಿಸಿದ್ದಾರೆ. ರೋಬೊ ರಜಿನಿ ಇರಲಿ. ಡಾಕ್ಟರ್ ರಜಿನಿ ಬಳಿ ಇರಲಿ. ಇಬ್ಬರಿಗೂ ಇಕ್ಕೋಲ್ ಶೇರ್ ಅನ್ನೋ ಹಾಗೆ ಕುಣಿದು ಕುಪ್ಪಳಿಸುತ್ತಾರೆ. ಆದ್ರೂ, ಜಾಸ್ತಿ ಡ್ಯಾನ್ಸ್ ಅಂಡ್ ರೋಮ್ಯಾಂಟಿಕ್ ಸಾಂಗ್ ಇರೊದು ರೋಬೊ ರಜಿನಿ ಜೊತೆಗೇನೆ. ಸೈಂಟಿಸ್ಟ್ ರಜಿನಿ ಜೊತೆಗಿನ ಒಂದು ಹಾಡಿನ ಲೋಕೇಷನ್ ಅದ್ಭುತವಾಗಿವೆ..



ಕಥೆ ರೋಬೊ ಮೇಲೆನೆ ನಿಂತಿದೆ. ರೋಬೊನೆ ಇಲ್ಲಿ ಕಥಾನಾಯಕ. ಹಾಗಾಗಿ ರೋಬೊ ರಜಿನಿಗೆ ಇಲ್ಲಿ ಹೆಚ್ಚು ಕೆಲಸ. ಟ್ರೈನ್ ಫೈಟಿಂಗ್ ನಲ್ಲಿ ರೋಬೊ ಸಾಹಸ ಮೆಚ್ಚುವಂತದ್ದು. ಡ್ಯಾನ್ಸ್ ಕೂಡ ಸೂಪಬ್. ಇನ್ನು ಪ್ರೀತಿಸೋದೊ, ಇದಂತು ನಿಜಕ್ಕೂ ಪಾಗಲ್ ಪ್ರೀತಿ. ನಾಶವಾಗಿ ತಿಪ್ಪಿಯಲ್ಲಿ ಬಿದ್ದರೂ ಕರಗದ ಪ್ರೇಮ ಪರ್ವ ರೋಬೊ ರಜಿನಿಯದ್ದು..



ಇಷ್ಟೆಲ್ಲ ಆದ್ಮೇಲ್ಲೂ ಇನ್ನೊಂದು ವಿಷಯ ಹೇಳೊದೊ ಮರೆತೆ. ಚಿತ್ರದ ಪ್ರಮುಖ ಎಳೆ ಸ್ಟ್ರಾಂಗ್ ಆಗಿದೆ. ಮನುಷ್ಯರಷ್ಟೇ ಅಲ್ಲ. ಅಡ್ವಾನ್ಸ್ಡ್ ರೋಬೊಗಳಿಗೂ "ಫೀಲಿಂಗ್ಸ್" ಮೂಡಿಸಬಹುದೆಂಬ ಕಲ್ಪನೆ ಇಲ್ಲಿಯ ಕಥೆ ಮೂಲ ಎಳೆ. ಆದ್ರೂ, ಕ್ಲೈಮ್ಯಾಕ್ಸ್ ಯಾಕೋ ಅತೀಯಾಯಿತು ಅನಿಸಿತು. ನೀವೂ ಒಮ್ಮೆ ಸಿನೆಮಾ ನೋಡಿ. ಒಂಚೂರು ಹೊಸ ಅನುಭವ ನಿಮಗೂ ಆಗಬಹುದು...



-ರೇವನ್ ಪಿ.ಜೇವೂರ್

Friday, September 24, 2010

ಹ್ಯಾರಿ ಪಾಟರ್ ಅಂತ್ಯ...

ಹ್ಯಾರಿ ಪಾಟರ್ ಕಥೆ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಸರಿ ಸುಮಾರು ೬ ಚಿತ್ರಗಳು ಹ್ಯಾರಿ ಪಾಟರ್ ಸರಣಿ ಕಥೆ ಮೇಲೆ ಬಂದು ಹೋಗಿವೆ. ಎಲ್ಲರಿಗೂ ಗೊತ್ತಿರುವಂತೆ ಪುಟ್ಟ ಹ್ಯಾರಿ ಪ್ರತಿ ಮಕ್ಕಳ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾನೆ. ತನ್ನ ಕಥೆ ಬೆಳೆದಂತೆ ತೆರೆ ಮೇಲಿನ ಡ್ಯಾನಿಯಲ್ ರಾಡ್ ಕ್ಲಿಪ್ ಸಹ ಬೆಳಯುತ್ತಲೇ ಬಂದಿದ್ದಾನೆ. ಅದೇ ರೀತಿನೇ ಸದ್ಯ ಕಥೆ ಅಂತ್ಯ ಕಾಣುತ್ತಿದೆ...


ಚಿತ್ರದ ಈ ಭಾಗದಲ್ಲಿ ಹ್ಯಾರಿ ಪಾಟರ್ ದೊಡ್ಡವನಾಗಿದ್ದಾನೆ. ಮಹಾ ಬಲಶಾಲಿಯೂ ಹೌದು. ಆದ್ರೆ, ದುರಂತವೆಂದರೆ ಹ್ಯಾರಿಗೆ ಮ್ಯಾಜಿಕ್ ಕಲಿಸಿಕೊಟ್ಟ ಗುರು ಸತ್ತು ಹೋಗಿದ್ದಾನೆ. ಹ್ಯಾರಿ ಪಾಟರ್ ನ ಶಕ್ತಿ ಕಸಿದುಕೊಳ್ಳಲು ಬರುತ್ತಲೇ ಇದ್ದ ಆ ಎಲ್ಲ ವಿಲನ್ ಗಳಿಗೆ ಒಂಚೂರು ಶಕ್ತಿ ಜಾಸ್ತಿಯಾಗಿದೆ. ಮುಪ್ಪು ಕೂಡ ಆವರಿಸಿಕೊಂಡಿದೆ. ಆದ್ರೂ, ಶಕ್ತಿಮೀರಿ ಯುವ ಹ್ಯಾರಿಯನ್ನ ಹೊಸೆದು ಹಾಕುವ ಪ್ಲಾನ್ ಹಾಕಿಕೊಂಡಿದ್ದಾರೆ. ...

ಆದ್ರೆ, ಹ್ಯಾರಿ ಈ ಕಥೆಯ ಅಂತ್ಯ ದೊಡ್ಡದಾಗಿಯೇ ಇದೆ. ಕೇವಲ ಒಂದೇ ಒಂದು ಭಾಗದಲ್ಲಿ ಅಂತ್ಯದ ಕಥೆ ಮುಗಿತಾಯಿಲ್ಲ. ಬರೊಬ್ಬರಿ ಎರಡು ಭಾಗದಲ್ಲಿ ಚಿತ್ರ ಬರುತ್ತಿದೆ. " ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹೆಲ್ಲೊನ್"ನ ಭಾಗವೊಂದು ಇದೇ ಬರುವ ನವೆಂಬರ್ ೧೯ ಕ್ಕೆ ತೆರೆಗೆ ಬರಲಿದೆ. ಆದ್ರೆ, ಹ್ಯಾರಿ ಕಥೆಗೆ ಶಾಶ್ವತ ಅಂತ್ಯ ಹೇಳುವ ಸಿನೆಮಾ ೨೦೧೧ ಕ್ಕೆ ರಿಲೀಜ್ ಆಗಲಿದೆ.

ಹ್ಯಾರಿ ಪಾತ್ರಕ್ಕೆ ಜೀವ ತುಂಬಿದ ಅದೇ ನಟರೇ ಇಲ್ಲೂ ಮುಂದುವರೆದಿದ್ದಾರೆ. ಡ್ಯಾನಿಯಲ್ ರಾಡ್ ಕ್ಲಿಫ್ ಯುವ ಹ್ಯಾರಿಯಾಗಿ ಕಾಣಿಸಿಕೊಳ್ತಾಯಿದ್ದಾರೆ. ಎಮ್ಮಾ ವಾಟ್ಸನ್ ಹ್ಯಾರಿಯ ಗೆಳತಿಯಾಗಿ ಇದ್ದಾಳೆ. ಇವರಿಬ್ಬರ ಸ್ನೇಹಿತನ ಪಾತ್ರಧಾರಿ ರುಪರ್ ಗ್ರಿಂಟ್ ಎಂದಿನಂತೆ ಟು ಬಿ ಕಂಟಿನ್ಯೂಡ್ ಆಗಿದ್ದಾನೆ. ಸ್ಟೀವ್ ಕ್ಲೂಸ್ ಚಿತ್ರಕಥೆ ಇಲ್ಲೂ ಇದೆ. ಆದ್ರೆ, ನಿದೇಶನವನ್ನ ಈ ಕೊನೆಯ ಚಿತ್ರಕ್ಕೆ
ಡೆವಿಡ್ ಯಟ್ ಮಾಡಿದ್ದಾರೆ.

ಎರಡೂ ಚಿತ್ರಗಳು 3ಡಿ ಮತ್ತು 2ಡಿ ಯಲ್ಲಿ ಬರುತ್ತಿವೆ. ವಿಶೇಷವೆಂದ್ರೆ, ಈ ಚಿತ್ರಗಳ ಹೊರತಾಗಿ ಈ ಹಿಂದಿ ಸರಣಿ ಚಿತ್ರಗಳು 3ಡಿ ಬಂದಿರಲಿಲ್ಲ. ಇದು ಒಂದು ಹೊಸ ರೀತಿಯ ಪರಿಣಾಮ ಬೀರಲು ಹೊಸ ಎಫೆಕ್ಟ್ ನಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಹ್ಯಾರಿ ಪ್ರೇಮಿಗಳಿಗೆ ಯುವ ಹ್ಯಾರಿ ಹೊಸ ಅನುಭವ ನೀಡಲಿದ್ದಾನೆ ಅಂತಲೇ ಹೇಳಬಹುದು..

- ರೇವನ್ ಪಿ.ಜೇವೂರ್

Tuesday, September 21, 2010

ಗಾಂಧಿನಗರದಲ್ಲಿ ಉತ್ತರ ಕರ್ನಾಟಕ....

ನಾವ್ ಬಂದೇವ..ನಾವ್ ಬಂದೇವ...ಸಿನಿಮಾ ನೋಡಾಕ್. ಸಿನಿಮಾ ನೋಡಿ, ಚಿತ್ರಾ ಮಾಡಾಕ್. ನಾವ್ ಹಿಂಗ. ಸಿನಿಮಾದ ಹುಚ್ಚನ್ಯಾಗ್ ಖಬರ್ ಇಲ್ದಂಗ ಕೆಲ್ಸಾ ಮಾಡ್ತೀವಿ. ನಿಜಾರೀ....ಉತ್ತರ ಕರ್ನಾಟಕದ ಮಂದಿ ಹಿಂಗ...

ಕನ್ನಡ ಫಿಲ್ಮ್ ಇಂಡಸ್ಟ್ರೀಯಾಗ ಉತ್ತರ ಕರ್ನಾಟಕದ ಮಂದಿನ ಜಾಸ್ತಿ ಅದಾರ್. ಎಲ್ಯಾರ್ ಹೋಗ್ರಿ, ಖಡಕ್ ಮಾತಿನ ಮನುಷ್ಯ ಸಿಕ್ಕಬಿಡ್ತಾನ್. ತೆರೆ ಹಿಂದ ಹೋದ್ರಂತು ಮುಗಿತ್. ನಮ್ಮೂರ್ ಬಿಜಾಪುರ್. ನಮ್ಮೂರ್ ಹುಬ್ಬಳಿ ಅನ್ನೋ ಹುಡುಗ್ರು ಸಿಕ್ಕ ಬಿಡ್ತಾರೆ. ಅದೇನ್ ಚಟಾನೋ ಏನ್. ಸಿನಿಮಾ ಹುಚ್ಚಿನ ಮಂದಿ ಸೀದಾ ಯಾವುದಾರ ಕೆಲ್ಸಕ್ಕ ಬಂದ ಬಿಡ್ತಾರೆ....

ಈಗ ಪರದೆ ಮ್ಯಾಲ್ ಕಾಣು ಮಂದಿನೂ ಹೆಚ್ಚ ಆಗ್ಯಾರ್. ಆದ್ರ, ಹಂಗ ಬಂದ ಜನಕ್ಕ ಇಲ್ಲಿ ಹೆಚ್ಚ್ ಹಾಸ್ಯ ಪಾತ್ರಾನಾ ಸಿಕ್ತಾವು. ಉತ್ತರ ಕರ್ನಾಟಕದ ಮಾತು ಬೆಂಗಳೂರ್ ಮಂದಿನ ನಗುಸ್ತಾವು. ಅದ ರೀತಿ ಕಾಡ್ಸು ಹಂಗ ಮಾಡ್ತಾವು. ರಾಜು ತಾಳಿಕೋಟಿ ಮಾತ್ ಕೇಳಿ ಅದೆಷ್ಟ ಜನ ನಗುದಿಲ್ಲ ಹೇಳ್ರಿ. 'ಮನಸಾರೆ" ಫಿಕ್ಚರ್ ನ್ಯಾಗಂತು ನಗುದ್ ನಗುದ್. "ಪಂಚರಂಗಿ" ನೂ ಹಂಗ ಐತಿ...

ಮತ್ತೊಂದ್ ಮದುವೇನಾ..! ಅನ್ನೊ ಚಿತ್ರದಾಗ ರಾಜು ನಗಸಾಕ ಮತ್ತ ಸಜ್ಜ. ಆದ್ರೆ, ಇದ ಹಾಸ್ಯದ ಕತೀ ಆತ್. ಹೀರೋ ಆಗು ಹುಡುಗ್ರು ಬರಾಕುಂತಾರ್. "ಗವಿಪುರ' ಅನ್ನೊ ಸಿನಿಮಾದ ಹೀರೊ ಸುರಜ್ ಧಾರವಾಡ ಹುಡುಗ. ಆದ್ರ, ಇವರ ಊರು ಬಿಜಾಪುರ್ ಜಿಲ್ಲಾ ಸಾಸನೂರು. ಹೀರೋಯಿನ್ ರಾಣೆಬೆನ್ನೂರ್ ದಾಕಿ. ಆದ್ರೆ ಸೌಜನ್ಯ ಅನ್ನು ಈ ಕಪ್ಪ ಹುಡುಗಿ ಹುಟ್ಟಿದ ಬೆಂಗಳೂರ್. ಬೆಳದಿದ್ದ ಬೆಂಗಳೂರ್. ಹಂಗಾಗಿ ಅಳ್ ಹುರುದಂಗ ಇಂಗ್ಲೀಷ್ ಮಾತಾಡ್ತಾಳ. ತಲಿನೂವು ಆಗುವಂಗ ಒಟಾ..ಒಟಾನೂ ಅಂತಾಳ. ಆದ್ರೆ, ನೋಡಾಕ ಚೆಂದ ಅದಾಳ್. ಶಾಣೆನೂ ಅದಾಳ.. ಸಿನಿಮಾ ರೆಡಿ ಆದ್ ಮ್ಯಾಲ್ ನೋಡಬೇಕ ಇವರ ಆಟ...

ಇವರಂಗ ಇನ್ನು ಬಾಳ ಮಂದಿ ಬರಾಕುಂತಾರ. ಆದ್ರ ಅದೃಷ್ಟಾ ಯಾರಿಗೈತೋ ಏನೊ. ಬಿಳಿ ಪರದೆ ಮ್ಯಾಲ್ ಮಿಂಚಾಕ ಹುಬ್ಬಳಿ ಮಂದಿ 'ದ್ರೋಹಿ' ಅನ್ನು ಚಿತ್ರಾ ಮಾಡ್ಯಾರ್ ಇವರ ಕತಿ ಏನ್ ಐತೋ ಏನೋ..ರೊಕ್ಕಾ ಹಾಕಿ ಗೆಲ್ಲು ಲೆಕ್ಕಾ ಮಾಡ್ಯಾರ್. ಇವರನ್ನ ಸಿದ್ಧರೂಢರ ಕಾಯಬೇಕು..

-ರೇವನ್ ಪಿ.ಜೇವೂರ್

Monday, September 20, 2010

ಹಳದಿ ಬೂಟಿನ ಹುಡುಗಿ...

ಹಳದಿ ಬೂಟಿನ ಹುಡುಗಿ. ಮುಂಬೈಗೆ ಬಂದು ಅದ್ಯಾವಾಗಲೋ ಆಗಿದೆ. ಈಗ ಆ ಕಥೆ ಹೊರಬಿದ್ದಿದೆ. ಹೌದು..! ನಿರ್ದೇಶಕ ಅನುರಾಗ್ ಕಶ್ಯಪ್ ಮುಂಬೈನ ಸತ್ಯ ಘಟನೆ ಮೇಲೆ ಒಂದು ಚಿತ್ರ ಮಾಡಿದ್ದಾರೆ. "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಅನ್ನೊ ಈ ಚಿತ್ರದಲ್ಲಿ ಹಳದಿ ಬೂಟ್ ಧರಿಸಿದ ಯುವತಿಯ ಕರಾಳ ಕಥೆಯ ನೋವಿದೆ. ಜರ್ಮನ್ ದಿಂದ ಬಂದ ಈಕೆಯ ಕಥೆ ನಿಜಕ್ಕೂ ಸಂಕಟ ತರುತ್ತದೆ. ಮುಂಬೈನಂತಹ ಹೊಲಸು ಜಗತ್ತಿನ ಕಾಮಪೀಪಾಸುಗಳು ಮುಗ್ಧ ಹುಡುಗಿಯ ಜೀವನದ ದಿಕ್ಕೇ ಬದಲಿಸಿ ಹಾಕಿದ್ದಾರೆ....

ಅದೆಲ್ಲೋ ಈ ಕಥೆ ಓದಿದ ನಿರ್ದೇಶಕ ಅನುರಾಗ್ ಕಶ್ಯಪ್ ಚಿತ್ರ ರೂಪ ಕೊಟ್ಟಿದ್ದಾರೆ. ಮುಂಬೈನ ಸಂದಿ-ಗೊಂದಿಗಳ ಜಾಲಾಡಿ ಅಲ್ಲಿ ಕೆಟ್ಟ ದಂಧೆಯ ಕ್ರೂರ ರೂಪವನ್ನ ಚಿತ್ರದಲ್ಲಿ ಯಥಾವತ್ತು ತೋರುವ ಪ್ರಯತ್ನ ಮಾಡಿದ್ದಾರೆ. ಮಸಾಜ್ ಪಾರ್ಲರ್ ಗಳಂತಹ "ದಂಧಾ" ಜಾಗಳಲ್ಲಿಯ ನೈಜ ಚಿತ್ರಣ ನೀಡುವ ಸಾಹಸವನ್ನೂ ತೋರಿದ್ದಾರೆ. ವಿದೇಶದಿಂದ ಭಾರತಕ್ಕೆ ಬರುವ ಪರದೇಶಿಗಳ ಪಾಡನ್ನ ಭಾರತಿಯರಿಗೆ ತಿಳಿಸಲು ಒಳ್ಳೆ ಪ್ಲಾನ್ ಮಾಡಿಕೊಂಡಿದ್ದಾರೆ...

ರೀಲ್ ಕಥೆಯಲ್ಲಿ ಬರುವ ಹುಡುಗಿ ಹೆಸರು ರುಥ್. ಅಪ್ಪನನ್ನ (ನಟ ನಾಸೀರುದ್ದೀನ ಷಾ ರನ್ನ) ಹುಡುಕಿಕೊಂಡು ಭಾರತಕ್ಕೆ ಬರುತ್ತಾಳೆ. ತನ್ನಪ್ಪ ಒಬ್ಬ ಫೋಟೋಗ್ರಾಫರ್ ಅನ್ನೋದು ಬಿಟ್ರೆ, ಪತ್ತೆ ಹಚ್ಚಲು ಬೇಕಾದ ಯಾವುದೇ ಮಾಹಿತಿಗಳಿಲ್ಲದೇನೆ ರುಥ್ ಮುಂಬೈಗೆ ಬಂದಿಳಿದು ಬಿಡ್ತಾಳೆ. ನಂತರ ಎಲ್ಲವೂ ಕರಾಳ..ಕರಾಳ. ಅಷ್ಟೊಂದು ಕೆಟ್ಟದಾಗಿ ಅತಿಥಿ ಸತ್ಕಾರ ಮಾಡುತ್ತದೆ ಮುಂಬೈ. ವಿದೇಶಿ ಎಂಬುವ ಒಂದೇ ಕಾರಣಕ್ಕೆ ರುಥ್ ಳನ್ನ ಎಲ್ಲರೂ ಸುಲಿದು ಬಿಡುತ್ತಾರೆ...ಸ್ನೇಹಿತನಂತೆ ಕಂಡ ವ್ಯಕ್ತಿಯೂ ದೇಹದ ವಾಂಛೆ ತೀರಿಸಿಕೊಂಡು ಬಿಡ್ತಾನೆ ....

ಇದೆನ್ನೆಲ್ಲ ನೋಡಲು ಚಿತ್ರ ಇನ್ನು ತೆರೆಗೆ ಬಂದಿಲ್ಲ. ಇದೇ ತಿಂಗಳ ತೆರೆಗೆ ಬರುವ ಸಾಧ್ಯೆತೆನೂ ಇದೆ. ಆದ್ರೆ, ಅದಕ್ಕೂ ಮುಂಚೆ "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಟೊರೆಂಟೋ ಇಂಟರ್ ನ್ಯಾಷ್ನಲ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಉತ್ತಮ ಪ್ರತಿಕ್ರಿಯೆಯನ್ನೂ ಪ್ರೇಕ್ಷಕರು ನೀಡಿದ್ದಾರೆ. ಭಾರತೀಯರು ಈ ಚಿತ್ರ ನೋಡಿ ತಮ್ಮ ಮೈಂಡ್ ಸೆಟ್ ಬದಲಿಸಿಕೊಳ್ಳುತ್ತಾರೆಂಬ ಭಾರೀ ವಿಶ್ವಾಸವೂ ನಿದೇರ್ಶಕ ಕಶ್ಯಪ್ ಗಿದೆ.

ಇನ್ನೊಂದು ವಿಶೇಷತೆನೂ ಇಲ್ಲಿದೆ. ರುಥ್ ಪಾತ್ರದ ಹುಡುಗಿ ಬೇರೆ ಯಾರೂ ಅಲ್ಲ. ದೇವ್ ಡಿ ಚಿತ್ರದ ಅದೇ ಕಾಲ್ಕಿ ಕೋಚ್ಚಿನ್ ಇಲ್ಲಿ ಹಳದಿ ಬೂಟಿನ ಹುಡುಗಿ. ನೈಜ ಕಥೆಗೆ ನೈಜ್ ವಿದೇಶಿಯನ್ನೇ ನಿರ್ದೇಶಕ ಕಶ್ಯಪ್ ಆಯ್ಕೆ ಮಾಡಿಕೊಂಡಿದ್ದಾರೆ. ಆದ್ರೆ, ಕಾಲ್ಕಿ ಜರ್ಮನ್ ದಿಂದ ಬಂದವಳಲ್ಲ. ಬದಲಿಗೆ ಫ್ರೆಂಚ್ ಬ್ಯೂಟಿಯಿಕೆ. ಅದು ಹೇಗೆ ನಂಟು ಬೆಳೆಯಿತೋ ಏನೋ. ಅನುರಾಗ್ ಕಶ್ಯಪ್ ಜೊತೆಗೆ ಈ ಚೆಲುವೆ ಅನುರಾಗ ಸಂಗಮ ಬೆಳೆದು ಬಿಟ್ಟಿದೆ. ಬಾಲಿವುಡ್ ನಲ್ಲಿ ಇವರ ಮಧ್ಯೆದ ಅಫೇರ್ ಬಗೆಗಿನ ಕಥೆನೂ ಕೇಳಿ ಬರುತ್ತಿದೆ. ಹಾಗಂತ ಇದು ಅದೆಷ್ಟು ದಿನ ಉಳಿಯುತ್ತದೆಯೋ ಗೊತ್ತಿಲ್ಲ. "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಚಿತ್ರ ಮನಸ್ಸಿನಲ್ಲಿ ಉಳಿಯೋದು ಗ್ಯಾರಂಟಿ. ಸೋ ವೇಟ್ ಫಾರ್ ಫಾರೆನ್ ಗರ್ಲ್...

- ರೇವನ್ ಪಿ.ಜೇವೂರ್

Saturday, September 11, 2010

ನಿಧಿ ಸುಬ್ಬಯ್ಯ ರಂಗು...

ಪಂಚರಂಗಿ ರಂಗು ರಂಗಾಗುತ್ತಿದೆ. ಚಿತ್ರದ ಕಥೆಯಲ್ಲಿ ಏನೂ ಇಲ್ಲ. ಆದ್ರೂ ಜನ ಚಿತ್ರ ಮಂದಿರದ ಕಡೆ ಓಡುತ್ತಿದ್ದಾರೆ. ಕಾರಣವೇನು. ಇದಂತು ಯಾರಿಗೂ ಗೊತ್ತಿಲ್ಲ. ಸಿಕ್ಕಾಪಟ್ಟೆ ಖಾರವಾಗಿ ವಿಮರ್ಶೆ ಮಾಡಿದ ಚಿತ್ರ ವಿಮರ್ಶಕರಿಗೂ "ಪಂಚರಂಗಿ" ಓಟದ ಗುಟ್ಟು ತಿಳಿದಂತಿಲ್ಲ. ವಿಮರ್ಶಗಳನ್ನ ನೋಡಿ ಚಿತ್ರ ನೋಡು ಮಂದಿ ಜಾಸ್ತಿ. ಇಲ್ಲಿ ವಿಮರ್ಶಗಳನ್ನು ಲೆಕ್ಕಿಸದೇನೆ ಚಿತ್ರ ನೋಡಲು ಜನ ಬರುತ್ತಿದ್ದಾರೆ. ಲೈಫು ಇಷ್ಟೇನೆ ಅನ್ನೋ ಭಟ್ಟರ ತತ್ವಗಳನ್ನ ಕೇಳಿ..ಕೇಳಿ ಬಿದ್ದು...ಬಿದ್ದು ನಗ್ತಾಯಿದ್ದಾರೆ...

ಆದರೆ, ಇಲ್ಲಿ ನಿಧಿ ರಂಗು ಹೆಚ್ಚಿದೆ. ನಟನೆಯಲ್ಲಿ ಪಕ್ವತೆ ಬಂದಿದೆ. ಆಫ್ ಸ್ಕ್ರೀನಲ್ಲಿ ಇರೋ ಥರವೇ ಆನ್ ಸ್ಕ್ರಿನಲ್ಲು ನಿಧಿ ನಗಿಸುತ್ತಾರೆ. ಅಳಿಸುತ್ತಾರೆ. ಸುಮ್ಮನಿದ್ದರೆ ಆಗಾಗ ಕಚಗುಳಿ ಇಡ್ತಾರೆ. ಅಷ್ಟೊಂದು ಚಂದದ ಅಭಿನಯವನ್ನ ಭಟ್ಟರು ನಿಧಿಯಿಂದ ತೆಗೆದಿದ್ದಾರೆ.
ಇದನ್ನ ನೋಡಿ ಬಹುತೇಕರಿಗೆ ನಿಧಿ ಮೇಲೆ ಭರವಸೆ ಬಂದಿದೆ. ಅಷ್ಟೇ ಪ್ರೀತಿನೂ ಬಂದಿದೆ. ಹಾಗಾಗಿ, ಕಾಲ್ ಮಾಡಿ "ನಿಧಿ ನಿನ್ನ ಅಭಿನಯ ಸೂಪರ್" ಅಂತ ಎಲ್ಲರೂ ಹೇಳ್ತಿದ್ದಾರೆ..

ಇದೇನೋ ಸಾಮಾನ್ಯ ಪ್ರೇಕ್ಷಕರ ಪ್ರತಿಕ್ರಿಯೆ. ಚಿತ್ರದಲ್ಲಿ ಪಾತ್ರ ನಿರ್ವಹಿಸಿದ ಅನಂತ್ ನಾಗ್ ಗೆ ನಿಧಿ ಅಭಿನಯ ಇಷ್ಟವಾಗಿದೆ. ಚಿತ್ರ ನೋಡಿದ ಮರುದಿನವೇ ಪ್ರೆಸ್ ಮೀಟ್ ನಲ್ಲಿ ನಿಧಿಯನ್ನ ಅನಂತ್ ತುಂಬಾನೆ ಹೊಗಳಿದರು. ಬರೊಬ್ಬರಿ ೧೫ ನಿಮಿಷ ನಿಧಿ ಅಭಿನಯದ ಬಗ್ಗೆ ಮಾತನಾಡಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿ, ಪುಟ್ಟ ಮಗಳಂತೆ ಅಪ್ಪಿ-ತಬ್ಬಿ ಮುದ್ದಿನಿಂದ ಸಂತಸ ಹೇಳಿಕೊಂಡ್ರು..

ಚಿತ್ರದಲ್ಲಿ ನಿಧಿ 'ಅಂಬಿಕಾ' ಅನ್ನೊ ಪಾತ್ರದಲ್ಲಿದ್ದಾರೆ. ಅಮ್ಮ ಇಲ್ಲ. ಅಪ್ಪ ಇಲ್ಲ. ಚಿಕ್ಕಪ್ಪ,ಚಿಕ್ಕಮ್ಮನ ಮನೆಯಲ್ಲಿಯೆ ಈಕೆಯ ವಾಸ. ಚಿಕ್ಕುಸ್ ಅಂತ ತರ್ಲೆ ಮಾಡ್ತ ಓಡಾಡುವ ಮಗಳು ಇವಳು. ತುಂಟಾಟ, ಮಂಗನಾಟ, ರಮ್ಯ ಬಾರ್ನಾ ಜೊತೆಗೆ ಕಿತ್ತಾಟ. ಇವುಗಳನ್ನ ಮಾಡ್ತಾನೆ ಇರುವ ಅಂಬಿಕೆ ಇವಳು. ಮನೆಯಲ್ಲಿ ಒಬ್ಬಳು ನೆಚ್ಚಿನ ಮಗಳು ಇದ್ದರೆ ಹೇಗಿರುತ್ತಾಳೋ. ಹಾಗೆ ನಿಧಿ ಪಂಚರಂಗಿಯಲ್ಲಿ ಫೀಲ್ ಆಗ್ತಾಳೆ.

ಅಂಬಿಕಾಳ ಪ್ರೀತಿಯ ನಿವೇದನೆ ಇಲ್ಲಿ ಇನ್ನು ಚೆಂದ. ಮನಸ್ಸಿನಲ್ಲಿಯ ಮಾತುಗಳನ್ನ ಹಂಗಂಗೇ ಹೇಳಿಬಿಡುವ ಹುಡುಗಿ ಈಕೆ. ನಿಧಿಯ ಗೆಟಪ್ ಕೂಡ ಮುದ್ದು..ಮುದ್ದಾಗಿದೆ. ಆ ಕಾರಣಕ್ಕೂ ನಿಧಿ ಇಷ್ಟವಾಗ್ತಾಳೇ ಅಂತ ಹೇಳಬಹುದು. ಪಂಚರಂಗಿಯಲ್ಲಿ ನಿಧಿ ರಂಗು ನಿಜಕ್ಕೂ ಇಷ್ಟವಾಗ್ತದೆ. ನೀವೊಮ್ಮೆ ನೋಡಿ..

-ರೇವನ್ ಪಿ.ಜೇವೂರ್

Friday, September 10, 2010

ಗಣಪತಿ ನೀ ನನಗೆ ಅಪಾರ...

ಗಣೇಶ ನೀ ನೆನಗೆ ಹೆಚ್ಚು.
ಬರೊಬ್ಬರಿ ೭ ವರ್ಷ ನಿನ್ನನಿಟ್ಟು ಪೂಜಿಸಿದೆ.
ಗೆಳೆಯರೊಟ್ಟಿಗೆ ಸಾರ್ವಜನಿಕವಾಗಿ ಪೂಜಿಸಿದೇವು.
ಅದರ ಫಲ ನಾನು ಈಗ ಒಂದು ಮಟ್ಟಕ್ಕೆ ಬಂದು
ನಿಂತಿದ್ದೇನೆ.

ನಿನ್ನ ಪೂಜಿಸುವಾಗ ಒಂದು ನಂಬಿಕೆಯಿತ್ತು.
ಜೀವನದಲ್ಲಿ ಏನೋ ಆಗುತ್ತೆ ಭಾರಿ ಬದಲಾವನೆಯಂದು.
ಅದು ಈಗ ಆಗ್ತಾಯಿದೆ. ಅಂದುಕೊಂಡ ಹುಡುಗಿ
ಜೀವನಕ್ಕೆ ಕಾಲಿಟ್ಟಾಗಿದೆ. ಪ್ರೀತಿಯಿಂದ ಮಾಡುವ
ಕೆಲಸವೂ ಸಿಕ್ಕಿದೆ.

ಸಾಕಪ್ಪ ಇಷ್ಟು ಅನ್ನುವ ಸಂಬಳವೂ ಇದೆ.
ತಿನ್ನಲು ಕೊರತೆಯಿಲ್ಲ. ಕೊರಗಲು ಮನೆಯಲ್ಲಿ
ಜಾಗವೇಯಿಲ್ಲ. ಪ್ರೀತಿ ತುಂಬಿದೆ. ಸ್ನೇಹ ಹೆಚ್ಚುತ್ತಿದೆ.
ನಿನ್ನ ನೆನಪೂ ಆಗುತ್ತಿದೆ.

ಗಣೇಶ ನೀ ನನಗೆ ಅಪಾರ..ಹೀಗೆ ಇರು ನನ್ನೊಟ್ಟಿಗೆ
ನಿನ್ನ ಪೂಜಿಸುವ ಮನದಲ್ಲಿ. ನನ್ನ ಬಾಲ ಗಣೇಶ...

-ರೇವನ್

Wednesday, August 18, 2010

ಅಪ್ಪ..ಅಪ್ಪ ನನಗೆ ನೀನು ಬೇಕು...

ಅಪ್ಪ ಹೆಣ್ಮುಮಕ್ಕಳಿಗೆ ಹೀರೋ. ಜಗತ್ತಿನ ಎಲ್ಲ ಹುಡುಗಿಯರಿಗೆ ಒಂದು ಸೆಕ್ಯೂರ್ಡ್ ಫೀಲ್. ಅಮ್ಮ ಕಷ್ಟ ಅರ್ಥ ಮಾಡಿಕೊಳ್ತಾಳೆ. ಬೆಂಬಲಕ್ಕೆ ಅಪ್ಪಬೇಕು. ಅಪ್ಪನೇ ಎಲ್ಲ. ಆದ್ರೆ, ನಾವು ಈ ಫೀಲ್ ಬಿಟ್ಟು ಹೊರಗಡೆ ಬಂದೇಯಿಲ್ಲ. ಸೃಷ್ಟಿಯ ಸಹಜ ನಿಯಮದಂತೆ ಹೆಣ್ಣುಮಕ್ಕಳು ಅಪ್ಪನತ್ತ ವಾಲುತ್ತಾರೆ. ಗಂಡು ಮಕ್ಕಳು ಅಮ್ಮನ ಒಲವಿಗೆ ಕರಗುತ್ತಾರೆ. ಈ ನಡುವೆ ಅಪ್ಪನೂ ಮಗನನ್ನ ತುಂಬಾ ಪ್ರೀತಿಸಬಲ್ಲ ಅನ್ನೋ ಸತ್ಯ ನಿಜಕ್ಕೂ ಕಣ್ಮುಂದೆ ಬರಲೂ ಸಾಧ್ಯವಿಲ್ಲ...

ಆದ್ರೆ, ಹಾಲಿವುಡ್ ಇಂಥಹ ಪ್ರಯತ್ನ ಮಾಡಿದೆ. "ಎಮ್ಟನ್ ಮಗನ್" ಅಂಥ ತಮಿಳ್ ಚಿತ್ರರಂಗ ಅಪ್ಪ-ಮಗನ ಭಾವನಾತ್ಮಕ ಸಂಬಂಧದ ಮೌಲ್ಯ ತೆರೆದಿಟ್ಟು ದುಡ್ಡು ಬಾಚಿಕೊಂಡಿದೆ. ಕನ್ನಡ ಚಿತ್ರರಂಗ ಈಗ ಅದಕ್ಕೆ ಕೈಹಾಕಿದೆ. "ಪುತ್ರ" ಅನ್ನೊ ಚಿತ್ರ ಇದೇ ಭಾವದಲ್ಲಿಯೆ ಮಿಡಿಯಲಿದೆ. ತಂದೆಯ ಭದ್ರ ಬುನಾದಿಯಂತಹ ಸಲಹೆ..ಸಿಡುಕು..ಸಹಕಾರಗಳು "ಪುತ್ರ"ದಲ್ಲಿ ಗಂಡು ಮಕ್ಕಳ ಎದೆ ತಟ್ಟಲಿವೆ..

ಪುತ್ರದ ನಾಯಕನಾರಿರಬಹುದು ಅಂತ ನೀವು ಥಿಂಕ್ ಮಾಡ್ತಿರಬಹುದು. ಮನಸಾರೆ.. ನಾಯಕ ದಿಗಂತ್ ಪುತ್ರದ ಪುತ್ರ. ಅವಿನಾಶ್ ತಂದೆಯ ಪಾತ್ರಧಾರಿ. ಇವರ ಮಧ್ಯೆದ ಕಥೆನೇ "ಪುತ್ರ" ಆದ್ರೂ, ಚಿತ್ರದಲ್ಲಿ ಪ್ರೀತಿಯ ಎಳೆಯಿದೆ. ತ್ರೀಕೋನ ಪ್ರೀತಿಯ ಅಲೆ ಇಲ್ಲೂ ಹರೆಯುತ್ತದೆ. ಹಳ್ಳಿಯ ಹುಡುಗಿ...ಶಹರದ ಬೆಡಗಿ ಅಂತಲೇ ಕಥೆಗೆ ಎರಡು ಫ್ಲೆವರ್ ನೀಡಲಾಗಿದೆ. ಹಳ್ಳಿಯ ಚೆಲುವೆಯಾಗಿ "ಅಂಬಾರಿ" ಸುಪ್ರಿತಾ ಆಕ್ಟಿಂಗ್. ನಗರದ ಹುಡುಗಿಯಾಗಿ ರೂಪಶ್ರೀ ಕಾಣಿಸಿಕೊಳ್ತಾಯಿದ್ದಾರೆ...

ಹಿರಿಯ ನಿರ್ದೇಶಕ ಉಮಾಕಾಂತ್ ರ ಈ ಕನ್ನಡದ ಪ್ರಯತ್ನಕ್ಕೆ ನಟ ದಿಗಂತ್ ತುಂಬಾ ಸಂತಸಗೊಂಡಿದ್ದಾರೆ. ಚಿತ್ರದಲ್ಲಿ ಅಭಿನಯಿಸುತ್ತಲೇ ತಮ್ಮ ತಂದೆಯ ನೆನಪು ಮಾಡಿಕೊಂಡಿದ್ದಾರೆ. ಕಾರಣ, ತಂದೆಯ-ಮಗನ ಫೀಲಿಗ್ಸ್ ಇಲ್ಲಿ ಅಷ್ಟೊಂದು ಆಳ ಅಷ್ಟೊಂದು ನಿರಾಳ...ಇದನ್ನ ಕನ್ನಡದ ಮಂದಿ ಹೇಗೆ ತೆಗೆದುಕೊಳ್ತಾರೋ ಏನೋ. ಒಳ್ಳೆಯ ಪ್ರಯತ್ನವಂತು ಇಲ್ಲಿ ಆಗ್ತಾಯಿದೆ...
-ರೇವನ್ ಪಿ.ಜೇವೂರ್

Monday, August 16, 2010

ಬ್ಯಾನರ್ ಕಲೆಯಿಂದ ಚಿತ್ರಕಲೆಯತ್ತ....

ಬ್ಯಾನರ ಬದುಕು ದುಸ್ಥರ. ಪೋಸ್ಟರ್ ನಂಬಿ ಅದೆಷ್ಟೋ ಜನರ ಹೊಟ್ಟೆ ಖಾಲಿ..ಖಾಲಿ. ತಿಂಗಳು ಗಟ್ಟಲೇ ಕಟೌಟ್ ಬರೆದು ಕಾಸು ಕಾಣದ ಇನ್ನದೇಷ್ಟೋ "ಕಲಾವಿದರು" . ಇದು ಬಣ್ಣ ನಂಬಿ ಕುಂಚದ ಮೋಹಕ್ಕೆ ಬಿದ್ದವರ ಸತ್ಯ ಕಥೆ. ಆಧುನಿಕತೆಯ ಅಬ್ಬರಕ್ಕೆ ವಿನೈಲ್ ಸೃಷ್ಟಿಯೇನೋ ಆದವು. ಮಳೆಯ ಹೊಡತೆಕ್ಕೆ ಗಾಳಿಯ ತಿವಿತಕ್ಕೆ ಜಗ್ಗದೇ ನಿಂತು ಬಿಟ್ಟವು. ಆದ್ರೆ, ಬಣ್ಣವನ್ನೇ ನಂಬಿದ ಬ್ಯಾನರ್ ಕಲಾವಿದರು ಕೆಲಸವಿಲ್ಲದೇ ಅತಂತ್ರವಾಗಿದ್ದಾರೆ.

ಬ್ಯಾನರ್ ಕಲಾವಿದ ಕೆ. ಚಿನ್ನಪ್ಪ ಕೂಡ ಇದನ್ನ ಎದುರಿಸಿದವರು. ಆದ್ರೆ, ಚಿನ್ನಪ್ಪ ಸ್ವಲ್ಪ ಮಗ್ಗಲು ಬದಲಿಸಿದರು. ಹೊಟ್ಟೆಗೆ ಹಿಟ್ಟುಕೊಟ್ಟ ಬ್ಯಾನರ್ ಕಲೆ ಜೊತೆಗೆ ಚಿತ್ರಕಲೆಯಲ್ಲೂ ಆಸಕ್ತಿ ಬೆಳಸಿಕೊಂಡರು. ನಮ್ಮಲ್ಲಿಯ ಪ್ರೇಕ್ಷಣಿಯ ಸ್ಥಳಗಳಿಗೆ ಬೇಟಿಕೊಟ್ಟರು. ಅಲ್ಲಿಯ ಶಿಲ್ಪ ಕಲೆಯನ್ನ ತಮ್ಮ ಕುಂಚದಿ ಕ್ಯಾನ್ ವಾಸ್ ಗೆ ತರಲು ಆರಂಭಿಸಿದರು. ಇದರ ಫಲ ೨೦೦೫ ರಲ್ಲಿ ಶುರುವಾದ ಇವರ ಕುಂಚದ ಪಯಣ ಇಲ್ಲಿವರೆಗೂ ಸಾಥ್ ನೀಡಿದೆ.

ಇವುಗಳ ನಡುವೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ದೇಶ-ವಿದೇಶದಲ್ಲೂ ಚಿನ್ನಪ್ಪನವರ ಕಲೆಯ ಆರಾಧಕರಿದ್ದಾರೆ. ತೈಲವರ್ಣದ ಚಿತ್ರಗಳನ್ನ ಖರೀದಿಸಿಕೊಂಡು ತಮ್ಮ ಮನೆಯ ಗೋಡೆಗಳನ್ನ ಅಲಂಕರಿಸಿದ್ದಾರೆ. ಅಲ್ಲಂಕರಿಸುತ್ತಲೇ ಇದ್ದಾರೆ...

ಚಿನ್ನಪ್ಪನವರ ಬಣ್ಣದ ಬದುಕು ಇದೇ ರೀತಿ ಶ್ರೀಮಂತವಾಗಿಯೇ ಸಾಗಿದೆ. ಕಳೆದ ವರ್ಷ ೧೮ ಚಿತ್ರಗಳನ್ನ ಬಿಡಿಸಿದ್ದರು. ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲೂ ತಮ್ಮ ಕಲಾಪ್ರತಿಭೆಯನ್ನ ಪ್ರದರ್ಶಿದರು. ಇದಾದ ನಂತರ ಚಿನ್ನಪ್ಪನವರ ಕಲಾಪ್ರೀತಿ ಮತ್ತೆ ಮೈಗೊಡವಿ ನಿಂತಿದೆ. ಅಜಂತಾ,ಹಂಪಿ, ಒಂಟಿ ಸಲಗ, ಸಿಂಹದ ಕುಟುಂಬ, ಚಿಗುರೆಯ ಕಾದಾಟ, ಹೀಗೆ ೨೭ ಚಿತ್ರಗಳನ್ನ ಬಿಡಿಸಿದ್ದಾರೆ. ಇವುಗಳನ್ನ ಸಹ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆ. ೨೩ ರಿಂದ ಆ.೩೦ ರವೆರಗೂ ಪ್ರದರ್ಶಿಸಲಿದ್ದಾರೆ..

ಇದೇನೋ ಚಿತ್ರ ಕಲೆಯ ಕಥೆ. ಆದ್ರೆ, ಬ್ಯಾನರ್ ಮೋಹ ಚಿನ್ನಪ್ಪನವರನ್ನ ಬಿಟ್ಟು ಹೋಗಿಲ್ಲ. ಇನ್ನುಯಿದೆ. ಸರಿ ಸುಮಾರು ೬೨ ವರ್ಷಗಳೇ ಸಿನೆಮಾ ಬ್ಯಾನರ್ ಬರೆಯುವಲ್ಲಿ ಕಳೆದು ಹೋಗಿವೆ. ಬೇಡರಕಣ್ಣಪ್ಪ ಚಿತ್ರದಿಂದ ಆರಂಭವಾಗಿ ಕನ್ನಡದ ಎಲ್ಲ ನಾಯಕರ ಚಿತ್ರದ ಪೋಸ್ಟರ್ ಗಳು, ಬ್ಯಾನರ್ ಗಳು, ಕಟೌಟ್ ಗಳನ್ನ ರೂಪಿಸಿಕೊಟ್ಟಿದ್ದಾರೆ. ಇನ್ನೇನು ತೆರೆಗೆ ಬರಲಿರುವ ದರ್ಶನ್ ಅಭಿನಯದ "ಶೌರ್ಯ" ಚಿತ್ರಕ್ಕೂ ಇವರೇ ಕೆಲಸ ಮಾಡ್ತಿದ್ದಾರೆ. ೭೨ ರ ಇಳಿವಯಸ್ಸಿನಲ್ಲಿ ಈಗಲೂ ಅದೇ ಉತ್ಸಾಹದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹಲವು ಕನಸೂ ಕಾಣುತ್ತಿದ್ದಾರೆ. ಇವರ ಹಿರಿಯ ಕನಸ್ಸಿಗೊಂದು ಸಲಾಮ್..

- ರೇವನ್ ಪಿ.ಜೇವೂರ್

Friday, August 13, 2010

ಮಾಡರ್ನ್ ರಾಮಾಯಣ...

ರಾವಣ ಸೀತೆನ್ ಕದ್ದ ಹೂವಲ್ ಮಾಡಿದ ಫ್ಲೈಟಲಿ ಕಾರಣ, ಸಿಸ್ಟರ್ ಸೆಂಟಿಮೆಂಟ್ಸು.... ಕೌರವ ಹಳ್ಳಕ್ಕ ಬಿದ್ದ ಶೆಕುನಿ ಹಾಕಿದ ಸ್ಕೆಚಲಿ ಕಾರಣ, ರಿಯಲ್ ಎಸ್ಟೇಟು..

ರಾಮಾಯಣವನ್ನ ಹೀಗೆ ಹೇಳಿದ್ರೆ ಹೇಗೆ. ನಿಜ, ನಗು ಬರುತ್ತದೆ ಅಲ್ವೆ. ಈ ಒಂದು ಪ್ರಯೋಗವನ್ನ ನಮ್ಮ ಕನ್ನಡದವರೇ ಮಾಡಿದ್ದಾರೆ. ಕಾಮಿಡಿ ಆಕ್ಟಿಂಗ್ ಮಾಡ್ತಾಯಿದ್ದ ಅದೇ ನಾಗ್ ಶೇಖರ್ ತಮ್ಮ ಮೊದಲ ನಿರ್ದೇಶನದ "ಸಂಜು ವೆಡ್ಸ್ ಗೀತಾ" ಚಿತ್ರಕ್ಕೆ ಮೇಲೆ ಹೇಳಿದ ಹ್ಯೂಮರಸ್ ಲಿರಿಕ್ಸ್ ಬರೆಸಿದ್ದಾರೆ. ಡಾಕ್ಟರ್ ನಾಗೇಂದ್ರ ಪ್ರಸಾದ್ ಈ ಒಂದು ಗೀತ ರಚನೆ ಮಾಡಿಕೊಟ್ಟಿದ್ದಾರೆ..

ರಾಮಾಯಣದ ಕಥೆಗೆ ಹ್ಯೂಮರಸ್ ರೂಪ ನೀಡಲು "ಸಂಜು ವೆಡ್ಸ್ ಗೀತಾ" ಟೀಮ್ ಪೌರಾಣಿಕ ರಂಗಭೂಮಿಯ ಗೆಟಪನ್ನೇ ಕನ್ನಡದ ಹಾಸ್ಯ ಕಲಾವಿದರಿಗೆ ಹಾಕಿಸಿದೆ. ರಂಗಾಯಣದ ರಘು ಇಲ್ಲಿ ರಾವಣನ ಪಾತ್ರಧಾರಿ. ಸಾಧುಕೋಕಿಲ್ ಲಕ್ಷ್ಮಣ. ಬುಲೆಟ್ ಪ್ರಕಾಶ್ ಹನುಮನ ಗೆಟಪ್ ಧಾರಿ. ಈ ಕಲಾವಿದರ ಮಧ್ಯೆ ಸೀತೆ ಬೇಕೆ...ಬೇಕು. ಇದನ್ನ ಬೃಂದಾ ಪಾರೇಖ್ ಅನ್ನೊ ಮುಂಬೈನ ಐಟಂ ಗರ್ಲ್ ನಿಭಾಯಿಸಿದ್ದಾರೆ..

ಥೇಟ್ ಸೀತಾಮಾತೆ ಥರ ಕಾಣೋ ಬೃಂದಾ ಈ ಒಂದು ಗೀತೆಯಲ್ಲಿ ೧೦ ಗೆಟಪ್ ಆಗ್ತಾರೆ. ಎಲ್ಲ ದೇವತೆಗಳ ಜೊತೆ...ಜೊತೆಗೆ ಟ್ರೆಂಡಿ ಐಟಂ ಗರ್ಲ್ ಗೆಟಪು ಇಲ್ಲಿ ಬಂದು ಹೋಗುತ್ತದೆ. ಕಾರಣ, ಹೆಣ್ಣಿನ ಬಗೆಗಿನ ಎಲ್ಲ ಕಾಲದ ಚಿತ್ರಣ ನೀಡುವ ಒಂದು ಹ್ಯೂಮರಸ್ ಲಾಜಿಕ್ ಈ ಗೀತೆಯದ್ದು. ಆದ್ರೆ, ಇದು ಕಥೆಯಲ್ಲಿ ಸುಮ್ನೆ ಬಂದು ಹೋಗುದಿಲ್ಲ. ಈ ಖೈದಿಗಳೆಲ್ಲ ತಮ್ಮ ಹೊಸ ಖೈದಿಯನ್ನ ರಂಜಿಸಲಿಕ್ಕೆ ತಾವೇ ತಾವಾಗಿ ಈ ಎಲ್ಲ ಗೆಟಪ್ ಗಳನ್ನ ಹಾಕಿ ದಿಲ್ ಖುಷ್ ಮಾಡ್ತಾರೆ..

ಈ ಒಂದು ಹೊಸ ಪರಿಕಲ್ಪನೆ ಬಗ್ಗೆ ಈಗಷ್ಟೆ ನಿರ್ದೇಶಕ ನಾಗಶೇಖರ್ ಹೇಳಿಕೊಂಡಿದ್ದಾರೆ. ಈ ಮೊದಲು ಕೂಡ ಇದೇ ನಾಗ್ ಶೇಖರ್ ಕಡಿಮೆ ವೆಚ್ಚದಲ್ಲಿ ಒಂದು ಹಾಡು ಮಾಡಿದ್ದರು. ನಗರದ ಬೆನ್ನಿ ಮಿಲ್ ನ ಹಳೆ ಗೋಡೆಗಳಿಗೆ ಬಣ್ಣ ಹಚ್ಚಿ ಯುರೋಪ್ ಸ್ಟ್ರೀಟ್ ಥರವೇ ಅದನ್ನೇ ಬಳಸಿಕೊಂಡಿದ್ದರು. ಅದ್ಭುತ ಅನಿಸೋ ಆ ಲೋಕೇಷನ್ ನಲ್ಲಿ ನಾಯಕ ಶ್ರೀನಗರ ಕಿಟ್ಟಿ ಯ ಮೇಲೆ ರಾಪ್ ಥರದ ಹಾಡೊಂದನ್ನ ಚಿತ್ರೀಕರಿಸಿದರು.


ಆಗ ಸಾಥ್ ನೀಡಿದ ಕ್ಯಾಮರಾಮನ್ ಸತ್ಯ ಹೆಗಡೆ, ಆ ಹಾಡಿಗೂ ನೃತ್ಯ ನಿರ್ದೇಶಿಸಿದ ಇಮ್ರಾನ್ ಸರ್ದಾರಿಯಾ ಈ ಪೌರಾಣಿಕ ಹಾಡಿಗೂ ಜೋಡಿಯಾಗಿದ್ದಾರೆ. ಸದ್ಯಕ್ಕೆ ಶೂಟಿಂಗ್ ಸಮಯದಲ್ಲಿಯೇ ಭಾರೀ ಎಂಟರಟೈನಿಂಗ್ ಅನಿಸಿದ ಈ ರಾವಣನ ಹಾಡು ತೆರೆಗೆ ಬಂದ ಮೇಲ ಇನ್ನು ಸಿಕ್ಕಾಪಟ್ಟೆ ನಗಿಸುತ್ತದೆ ಅಂತಲೇ ಹೇಳಬಹುದು...

-ರೇವನ್ ಪಿ.ಜೇವೂರ್

Monday, August 9, 2010

ನಾ ಓದಿದ "ಯಾರೂ ಅರಿಯದ ವೀರರು"..


ಕನ್ನಡದ ಪುಸ್ತಕಲೋಕದಲ್ಲಿ ಅವಿಷ್ಕಾರಗಳು ನಡೀತಾನೇ ಇರುತ್ತವೆ. ಮಕ್ಕಳ ಸಾಹಿತ್ಯದಲ್ಲೂ ಇಂತಹ ಪ್ರಯೋಗಗಳಿಗೆ ಕೊರೆತೆಯಿಲ್ಲ. ಮಕ್ಕಳ ಮನ ತಟ್ಟುವ...ಮನರಂಜಿಸುವ ಅದೆಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ಕಾಮಿಕ್ ಪುಸ್ತಕಗಳು ಇದೆ ಸಾಲಿಗೆ ಸೇರುವ ಮತ್ತೊಂದು ಸಚಿತ್ರ ಸಾಹಿತ್ಯವೆಂತಲೇ ಹೇಳಬಹುದು. ಆದ್ರೆ, ಸಾಹಿತಿ ತಿರುಮಲೆ ಎಂ.ಎಸ್.ರಾಮಮೂರ್ತಿ ನಿಜಕ್ಕೂ ಹೊಸ ಪ್ರಯೋಗ ಮಾಡಿದ್ದಾರೆ. ಅಂದ್ರೆ, ಮಕ್ಕಳ ಇಷ್ಟಪಡುವ ವಿಷಯವನ್ನೆ ಆಧರಿಸಿ ಇಡೀ ಕಾದಂಬರಿಯನ್ನ ರಚಿಸಿದ್ದಾರೆ..

ಕಾದಂಬರಿ ಮುಖ ಪುಟ ನೋಡಿದರೆ ಮಕ್ಕಳ ಪುಸ್ತಕವೇ ಅಂತಹ ಹಿರಿಯರು ದೂರ ಸರಿಯಬಹುದು. ಆದ್ರೆ, ಓದುತ್ತಾ..ಓದುತ್ತಾ ಹೋದಂತೆ ಕಾದಂಬರಿ ಆಪ್ತವಾಗುತ್ತದೆ. ಕಾಡು ಪ್ರಾಣಿಗಳ ಜೀವನದ ಅರಿವು ಮೂಡುತ್ತಾ ಹೋಗುತ್ತದೆ. ಮೊದಲ ಅಧ್ಯಾಯದಲ್ಲೆ ಲೇಖಕರು ಓದುಗರನ್ನ ಹಿಡಿದಿಡುವ ನಿರೂಪಣೆ ಆರಂಭಿಸುತ್ತಾರೆ. ಮೊದಲ ಒಂದರೆಡು ಪ್ಯಾರಾಗಳು ಏನೂ ಅನಿಸುವುದಿಲ್ಲ. ಓದು ಮುಂದೆ ಸಾಗಿದಂತೆ, ಕಾಡು ಪ್ರಾಣಿಗಳ ಜೀವನ ಶೈಲಿ ಆಶ್ಚರ್ಯಗೊಳಿಸುತ್ತದೆ, ಏಕೆಂದ್ರೆ, ಪ್ರಾಣಿಗಳು ಆಡುವ ಮಾತು-ಕಥೆಗಳು ನಮ್ಮ-ನಿಮ್ಮ ದೈನಂದಿನ ಜೀವನದಲ್ಲಿ ಇರುವ ಹಾಗೇನೆ ಸಂಭಾಷಣೆಗಳಿವೆ. ಹಾಗಾಗಿ, ಕಾಂಬರಿಯ ಮೊದಲ ಅಧ್ಯಾಯ ನಿಮ್ಮನ್ನ ದಟ್ಟ ಕಾಡಿನ ದರುಶನ ಮಾಡಿಸುತ್ತಲೇ ಮುನ್ನಡೆಯುತ್ತದೆ...

ಇದರೊಟ್ಟಿಗೆ ಕಾಡು ಪ್ರಾಣಿಗಳಾದ ಗಂಭೀರ-ರಾಜ (ಸಿಂಹ), ಗಜೇಂದ್ರ-ಮಂತ್ರಿ (ಆನೆ), ಕರಿಯ-ಕಾಡು ಕೋಣಗಳ ನಾಯಕ , ಹನುಮ-ಕೋತಿಗಳ ನಾಯಕ, ಮನೋಹರ - ಸಾರಂಗಳ ನಾಯಕ, ಭೈರವ-ಕಾಡಿನ ಕ್ರೂರ ಹುಲಿ, ರಾಮಸೇವಕ (ಅಳಿಲು), ಭೂಪತಿಯ-ಆನೆಗಳ ನಾಯಕ, ನವನೀತ-ಪಕ್ಷಿಗಳ ನಾಯಕ, ಚತುರ- ನರಿಗಳ ನಾಯಕ. ಈ ರೀತಿ ನಮ್ಮ ನಡುವಿನ ನಾಯಕರ ಕಲ್ಪನೆಯೂ ಇಲ್ಲಿ ಬಂದು ಹೋಗುತ್ತದೆ....

ಆದ್ರೆ, ಲೇಖಕರು ಪ್ರಾಣಿಗಳ ಬಗೆಗಿನ ಸಣ್ಣ ಕಥೆಗಳನ್ನೇ ಬರೆಯಲು ಕುಳಿತಿದ್ದರಂತೆ. ಪಾತ್ರಗಳು ಇವರಿಂದ ಕಾದಂಬರಿಯನ್ನೇ ಬರೆಸಿಹಾಕಿವೆ. ಕಾರಣ, ಕಥೆಯಲ್ಲಿ ಬರುವ ಪ್ರತಿ ಪಾತ್ರವೂ ಒಂದೊಂದು ಕಥೆ ಹೇಳುತ್ತವೆ. ಅವುಗಳ ಸುತ್ತಣ ಬದುಕನ್ನು ನಿರೂಪಿಸಿಬಿಡ್ತವೆ. ಹಾಗಾಗಿ, "ಯಾರೂ ಅರಿಯದ ವೀರರು" ಕಾದಂಬರಿಯಲ್ಲಿ ಅಧ್ಯಾಗಳ ಸೃಷ್ಟಿಯಾಗಿದೆ. ಒಂದೊಂದು ಅಧ್ಯಾಯವೂ ಪ್ರಾಣಿಗಳ ಜೀವನದ ಮೇಲೆ ಬೆಳಕು ಚೆಲ್ಲುತ್ತಲೇನೇ ಕಾಡಿನ ಕಥೆ ಹೇಳುತ್ತವೆ...

ಕಥೆಯಲ್ಲಿ ಕೇವಲ ಪ್ರಾಣಿ ಪಕ್ಷಿಗಳಿಲ್ಲ. ಅರಣ್ಯ ನಾಶ ಮಾಡುವ ಮನುಷ್ಯರೂ ಬಂದು ಹೋಗುತ್ತಾರೆ. ಅದರಿಂದ ಪ್ರಾಣಿಗಳಿಗೆ ಆಗುವ ಅನಾಹುತಗಳ ಅನಾವರಣವೂ ಇಲ್ಲಿ ಆಗುತ್ತದೆ. ಕಾಡ ಬಿಟ್ಟು ನಾಡಿಗೆ ಪ್ರಾಣಿಗಳು ಏತಕ್ಕೆ ಬರುತ್ತವೆಂಬ ಸತ್ಯವೂ ಕಾದಂಬರಿಯಲ್ಲಿ ವ್ಯಕ್ತವಾಗುತ್ತವೆ...ಪ್ರಾಣಿಗಳನ್ನ ಉಳಿಸಿ..ಕಾಡು ಬೆಳಸಿ ಅನ್ನೋ ಸಂದೇಶವೂ ಕಥೆಯ ಮೂಲಕ ಆಗಾಗ ಮನತಟ್ಟುವಂತೆ ಹೇಳುವ ಪ್ರಯತ್ನವೂ ಆಗುತ್ತದೆ...

ತಿರುಮಲೆ ಎಂ.ಎಸ್.ರಾಮಮೂರ್ತಿಯವರ ಈ ಎರಡನೇ ಕೃತಿಯನ್ನ ನವರಸ ಕನ್ನಡ ಪ್ರಕಾಶನವರು ಪ್ರಕಟಿಸಿದ್ದಾರೆ. ೧೦೦ ರುಪಾಯಿ ಬೆಲೆಯ ಕಾದಂಬರಿ ಸುಮಾರು ೫೨ ಅಧ್ಯಾಗಳನ್ನ ಹೊಂದಿದೆ. ಚಿಕ್ಕ ಚಿಕ್ಕ ಕಥೆಯ ಈ ಪುಸ್ತಕ ಓದಿಸಿಕೊಂಡು ಹೋಗುತ್ತದೆ..ಓದಿ ನೋಡಿ...ನಿಮಗೂ ಅನಿಸುತ್ತದೆ...

- ರೇವನ್ ಪಿ.ಜೇವೂರ್

Saturday, August 7, 2010

ಸಾಯಿ ಶಕ್ತಿ...

ನಿರ್ದೇಶಕ ಸಾಯಿ ಪ್ರಕಾಶ್. ಸಾವಿನ ಸಮೀಪಕ್ಕೆ ಹೋಗಿ ಬಂದವರು. ಸಾವಿನ ಬೆಲೆ ಅರ್ಥವಾಗುವ ಹೊತ್ತಿಗೆ. ತಮ್ಮ ನಿರ್ಧಾರ ತಪ್ಪೆಂದು ಬೇಗ ಚೇತರಿಸಿಕೊಂಡ್ರು. ಸಾಲ..ಸೂಲಗಳ ಮಧ್ಯೆ ಆತ್ಮ ಹತ್ಯೆಯ ಧೈರ್ಯ ಮಾಡಿದ್ದು ಈಗ ಹಳೆ ಕಥೆ. ಹೊಸ ಶಕ್ತಿಯೊಂದು ಇವರಲ್ಲಿ ಮೂಡಿದೆ. "ನಾಗಶಕ್ತಿ"ಯ ಮೇಲಿನ ನಂಬಿಕೆ ಇವರನ್ನ ಮತ್ತೆ ಕಥೆ ಮಾಡಲು ಕುಳ್ಳಿರಿಸಿದೆ. ಜೀವನದ ತಪ್ಪು-ಒಪ್ಪುಗಳನ್ನ ಸರಿ ಮಾಡಿಕೊಳ್ಳಲು ನಾಗದೇವರ ಮೊರೆ ಹೋಗಿದ್ದಾರೆ. ಅವರ ಆಸೆಗೆ ಯಾರೂ ಒಲ್ಲೆ ಅಂದಿಲ್ಲ. ನಾಗಶಕ್ತಿಗೆ ಕನ್ನಡದ ಕಲಾವಿದರೆಲ್ಲ ಶಕ್ತಿನೇ ಆಗಿದ್ದಾರೆ...

ಸಾಯಿ ಪ್ರಕಾಶ್ ಸರಿ ಸುಮಾರು ೮೦ ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ನೂರು ಚಿತ್ರಗಳನ್ನ ನಿರ್ದೇಶನ ಮಾಡಲೇಬೇಕೆಂದು ಫೈನಲ್ ಇನ್ನಿಂಗ್ಸ್ ನಲ್ಲಿ ಮತ್ತೆ ಉತ್ಸುಕರಾಗಿದ್ದಾರೆ. ಅದರ ಫಲವೇ "ಶ್ರೀನಾಗಶಕ್ತಿ" ಕಥೆ ಸಿದ್ಧವಾಗಿದೆ. ಕಥೆ ಕೇಳಿದಾಕ್ಷಣ ಚಿತ್ರ ನಿರ್ಮಿಸಲು ನಟಿ ಚಂದ್ರಿಕಾ ಮುಂದೆ ಬಂದಾಗಿದೆ. ನಾಯಕಿ ಶ್ರುತಿಯೂ ಅಷ್ಟೆ. ರಾಷ್ಟ್ರಪ್ರಶಸ್ತಿ ತಂದುಕೊಟ್ಟ ನಿರ್ದೇಶಕರ ಕರೆಗೆ ಪ್ರೀತಿಯಿಂದ ಬಂದಾಗಿದೆ. ಜೊತೆಗೆ ತಂಗಿ ಮಗಳು ಕೃತಿಯನ್ನ ಕರೆತಂದಿದ್ದಾರೆ. ನಾಯಕ ರಾಮಕುಮಾರ್ ಸಹ ಇದಕ್ಕೆ ಹೊರತಾಗಿಲ್ಲ. ಸಾಯಿಯವರಿಗೆ ಒಳ್ಳೆಯದಾಗಲೆಂದು ಮತ್ತೊಂದು ಭಕ್ತಿ ಪ್ರಧಾನ ಚಿತ್ರಕ್ಕೆ ನಾಯಕರಾಗಲು ಒಪ್ಪಿಕೊಂಡಿದ್ದಾರೆ.

"ಶ್ರೀನಾಗಶಕ್ತಿ" ಶೃದ್ಧಾ,ಭಕ್ತಿ,ನಂಬಿಕೆ, ಈ ಮೂರು ಅಂಶಗಳನ್ನ ಆಧರಿಸಿದ ಚಿತ್ರ. ಎಲ್ಲ ಕಾಲಕ್ಕೂ ಧೈವಿ ಭಕ್ತಿ ಬೇಕೆ..ಬೇಕು ಅನ್ನೊ ಸಣ್ಣದೊಂದು ನಂಬಿಕೆ ಮೇಲೆ ಸಾಯಿ ಪ್ರಕಾಶ್ ನಾಗಶಕ್ತಿ ಕಥೆ ಹೆಣೆದಿದ್ದಾರೆ. ದುಡ್ಡು ಹಾಕಿದ ಚಂದ್ರಿಕಾ ಅವರಿಗೂ ಒಂದು ಪಾತ್ರ ಕೊಟ್ಟಿದ್ದಾರೆ. ನಾಗರಾಜ..ನಾಗರಾಣಿಯ ಎರಡು ಪ್ರಮುಖ ಕ್ಯಾರೆಕ್ಟರ್ ನಲ್ಲಿ ಚಂದ್ರಿಕಾ ನಾಗರಾಣಿ, ನಾಗರಾಜನ ಪಾತ್ರವನ್ನ ನಟ ಅಭಿಜಿತ್ ಮಾಡ್ತಾಯಿದ್ದಾರೆ.

ಕುಕ್ಕೆ ಸುಬ್ರಮಣ್ಯ, ನಂದಿಗ್ರಾಮ, ಬೆಂಗಳೂರುಗಳಲ್ಲಿ "ಶ್ರೀನಾಗಶಕ್ತಿ" ಚಿತ್ರೀಕರಣಗೊಳ್ಳಿದೆ. ಈ ಮೊದಲಿನ ಚಿತ್ರಕ್ಕೆ ಬಳಸಿದ ಗ್ರಾಪಿಕಲ್ ಸ್ಪರ್ಶ ಇಲ್ಲೂ ಇರುತ್ತದೆ. ಗ್ರಾಮದೇವತೆ, ನಾಗದೇವತೆಗಳಂತಹ ಚಿತ್ರಗಳಿಗೆ ಅತೀ ಹೆಚ್ಚು ಗ್ರಾಫಿಕ್ ಉಪಯೋಗಿಸಲಾಗಿತ್ತು. ಆದ್ರೆ, "ಶ್ರೀನಾಗಶಕ್ತಿ"ಯಲ್ಲಿ ಹಾಗಿಲ್ಲ. ಎಲ್ಲಿಬೇಕೋ...ಅಲ್ಲಿ ಗ್ರಾಫಿಕ್ ಬಳಕೆ ಆಗಲಿದೆ. ಬರುವ ಮೂರು
ತಿಂಗಳಲ್ಲಿ ಚಿತ್ರ ಸಿದ್ಧಗೊಳ್ಳುವಂತೇನೆ ಸ್ಕೆಡ್ಯೂಲ್ ಮಾಡಲಾಗಿದೆ. ಸಾಯಿಯವರ ಈ ಹೊಸ ಶಕ್ತಿ ಹೊಸ ಚಿತ್ರ ಮಾಡಲು ಇನ್ನಷ್ಟು ಶಕ್ತಿ ನೀಡಲಿ..
- ರೇವನ್ ಪಿ.ಜೇವೂರ್

Friday, July 30, 2010

ರಂಗಪ್ಪ ಹೋಗ್ಬಿಟ್ನಾ....?

ರಂಗಪ್ಪ ಇನ್ನಿಲ್ಲ. ರಂಗಪ್ಪ ಅಂತಹ ಮಹಾನ್ ವ್ಯಕ್ತಿಯಲ್ಲ. ಎಲ್ಲರಂತೇ ಈತ. ನಗುವುದು...ನಗಿಸುವುದು ಈತನಿಗೂ ಗೊತ್ತು. ಸಂಬಂಧಿಗಳೂ ಅಪಾರ. ಅದು-ಇದು ಕೂಡ ರಂಗಪ್ಪನ ಫಸ್ಟು..ಸೆಕೆಂಡು ಸೆಟಪ್ಪು. ಹೆಂಡ್ತಿಗೂ ಒಬ್ಬ ಬಾಯ್ ಫ್ರೆಂಡ್. ಆದ್ರೂ, ರಂಗಪ್ಪ ಗ್ರೇಟ್. ಕಾರಣ, ಈತನೇ ಚಿತ್ರದ "ಪ್ರಮುಖ" ಈತನ ಸುತ್ತವೇ ಎಲ್ಲ ಸಾಗುತ್ತದೆ. ಎಲ್ಲವೂ ಅಂತ್ಯಗೊಳ್ಳುತ್ತದೆ. ಈ ಆದಿ ಮತ್ತು ಅಂತ್ಯದ ನಡುವೆ ನಡೆಯುವ ಘಟನೆಗಳೇ "ರಮೇಶ್ ಅರವಿಂದ್" ಅಭಿನಯದ ಹೊಸ ಚಿತ್ರ "ರಂಗಪ್ಪ ಹೋಗ್ಬಿಟ್ನಾ...?"ದ ಹಾಸ್ಯ....

ನಟ ರಮೇಶ್ ಅರವಿಂದ್ ಈಗ ಮತ್ತೊಂದು ಹಾಸ್ಯ ಚಿತ್ರ ಪೂರ್ಣಗೊಳಿಸಿದ್ದಾರೆ. ಸಾಲು...ಸಾಲು ಚಿತ್ರಗಳ ರಿಲೀಜ್ ನ ಮಧ್ಯೆ "ರಂಗಪ್ಪ ಹೋಗ್ಬಿಟ್ನಾ...?" ಈಗಷ್ಟೇ ಚಿತ್ರೀಕರಣ ಮುಗಿಸಿದೆ. ಸೆಪ್ಟಂಬರ್ ತಿಂಗಳಲ್ಲಿ ಯಾವುದೇ ದಿನ ರಂಗಪ್ಪ ತೆರೆಗೆ ಬರುವ ಸಾಧ್ಯತೆ ಇದೆ...


ಈಗ ವಿಷಯ ಇದಲ್ಲ. ಚಿತ್ರದ ಕಥೆ ಬಗ್ಗೆ ಹೇಳೋದು ಜಾಸ್ತಿಯಿದೆ. ಸಾವಿನ ಸುತ್ತವೇ ಇಡೀ ಕಥೆ ಹೆಣೆಯಲಾಗಿದೆ. ಒಂದೇ ದಿನ ಒಂದೇ ಮನೆಯಲ್ಲಿ ರಂಗಪ್ಪನ ಕಥೆ ಬೆಳೆಯುತ್ತದೆ. ಬೇಕಾದ ವ್ಯಕ್ತಿ ಸತ್ತು ಹೋದಾಗ ನೆಂಟರು ಬಹಳ ದಿನ ಅಳುತ್ತಾರೆ. ಬೇಡವಾದ ವ್ಯಕ್ತಿ ಸತ್ತನೋ ಆಗ ಹತ್ತಿರದವರೂ ದೂರವಾಗ್ತಾರೆ. ಆದ್ರೆ, ಇಲ್ಲಿ ಹಾಗಲ್ಲ. "ಸಾವಿನ ಮುಂದೆ ಬದುಕಿನ ನರ್ತನ" ನಡೆಯುತ್ತದೆ. ಚಿತ್ರದ ಸಬ್ ಕ್ಯಾಪ್ಷನ್ ಸಹ ಇದನ್ನೇ ಇಡಲಾಗಿದೆ....


ನಿರ್ದೇಶಕ ಪ್ರಸನ್ನ ಸಾವಿನ ಸುದ್ದಿಯ ಸುತ್ತವೇ ಕಥೆ ಸೃಷ್ಟಿಸಿದ್ದಾರೆ. ಕಥೆಯ ಜೊತೆ..ಜೊತೆಗೆ ಹಾಸ್ಯವೇ ಪ್ರಧಾನವಾಗಿ ಹೊರಹೊಮ್ಮಲಿ ಅನ್ನೋದನ್ನ ಗಮನದಲ್ಲಿ ಇಟ್ಟುಕೊಂಡೇ "ರಂಪ್ಪನ ಸಾವಿನ" ಸುದ್ದಿ ಸಿದ್ಧ ಮಾಡಿದ್ದಾರೆ...ಆದ್ರೆ, ಇಲ್ಲಿ ಕೇವಲ ಸಾವಿನ ಸುದ್ದಿಯ ಹಾಸ್ಯದ ನರ್ತನ ಇದ್ದಂತೆ ಕಾಣುವುದಿಲ್ಲ. ಮನೆಯಲ್ಲಿ ಅದ್ಯಾರೋ ಬೇಕಾದವರು ಸತ್ತು ಹೋದ್ರೆ, ಏನೆಲ್ಲ ಸಾಧ್ಯತೆಗಳು ಇವೆ ಅನ್ನೋದನ್ನ ಹೇಳುವ ಸಾಹಸವನ್ನ ಮಾಡ್ತಿದ್ದಾರೆ ಅಂತಲೇ ಹೇಳಬಹುದು.


ಇನ್ನೊಂದು ಸಾಹಸವೂ ಚಿತ್ರೀಕರಣದಲ್ಲಿದೆ. ಲೆಕ್ಕದಂತೆ ಚಿತ್ರೀಕರಣವನ್ನ ೨೦ ದಿನದಲ್ಲಿ ಮುಗಿಸಬೇಕು. ಆದರೆ, ನಿರ್ದೇಶಕರು ಸಿಕ್ಕಾಪಟ್ಟೆ ಫಾಸ್ಟ್. ೧೬ ದಿನದಲ್ಲಿಯೇ "ರಂಗಪ್ಪನ ಕಥೆ" ಮುಗಿಸಿ ಹಾಕಿದ್ದಾರೆ. ಅಂದ್ರೆ, ಚಿತ್ರೀಕರಣದ ಕೆಲಸವಷ್ಟೇ ಈಗ ಮುಗಿದಿದೆ.


ಇಷ್ಟೆಲ್ಲ ಇರೋ ಚಿತ್ರದಲ್ಲಿ ರಂಗಪ್ಪನ ಪುತ್ರನ ಪಾತ್ರ ರಮೇಶ್ ಅರವಿಂದ್ ಅವರದ್ದು. ಈ ಹಿಂದಿನ ಚಿತ್ರಕ್ಕೆ ಹೋಲಿಸಿದ್ರೆ, ರಮೇಶ್ ಇಲ್ಲಿ ಹಾಸ್ಯ ಮಾಡೋದೇಯಿಲ್ಲ. ರಮೇಶ್ ಚಿತ್ರದಲ್ಲಿಯ ಸಂದಿಗ್ಧತೆಗಳಿಗೆ ಪ್ರೇಕ್ಷಕ ನಗ್ತಾನೆ. ತಂದೆಯ ಹಲವು ಗೋಜುಗಳಿಗೆ
ಪ್ರೇಕ್ಷಕ ಬಿದ್ದು....ಬಿದ್ದು ನಗ್ತಾನೆ. ಅಂತಹ ಹೊಸತನ "ರಂಗಪ್ಪ ಹೋಗ್ಬಿಟ್ನಾ" ದಲ್ಲಿ ಹಾಸ್ಯ ಚಿತ್ರ ಪ್ರಿಯರಿಗೆ ದೊರೆಯಲಿದೆ ಎಂಬ ನಂಬಿಕೆ ಈಗಲೇ ಚಿತ್ರ ತಂಡದಲ್ಲಿ ಮೂಡಿದೆ...


ಇಲ್ಲಿ ಇನ್ನೊಬ್ಬ ತಾರೆಯೂ ಬದಲಾಗಿದ್ದಾರೆ. "ಗಂಡ ಹೆಂಡತಿ"ಯಂತಹ ಚಿತ್ರದಲ್ಲಿ ಸ್ವಲ್ಪ ಜಾಸ್ತಿನೇ ಬೋಲ್ಡ್ ಸೀನ್ ನಲ್ಲಿ ಕಾಣಿಸಿಕೊಂಡ ನಟಿ ಸಂಜನಾ ರಂಗಪ್ಪನ ಮನೆಯಲ್ಲಿ ತುಂಬಾ ಸಭ್ಯೆಳು. ಮೈತುಂಬಾ ಸಾರಿ ಉಟ್ಟುಕೊಂಡು ಓಡಾಡುವ
ಸ್ನೇಹ ಎಂಬ ಸೊಸೆ. "ಮಾವ ಹೋಗ್ಬಿಟ್ನಾ"..? ಅನ್ನೊ ಸುದ್ದಿಯ ಗದ್ದಲದಲ್ಲಿ ಈಕೆಯದ್ದು ಒಂದಷ್ಟು ಪಾತ್ರವಿದೆ.. ಸಾಕಷ್ಟು ಅಭಿನಯವೂ ಇದೆಯಂತೆ.


ಇನ್ನುಳಿದಂತೆ ಸಿಹಿಕಹಿ ಚಂದ್ರು. ಮನ್ ದೀಪ್ ರಾಯ್, ಸಾಧು ಕೋಕಿಲ ಸೋದರ್ ಲಯನ್ ರಾಜ್. ಹೀಗೆ ಹಾಸ್ಯ ಕಲಾವಿದರ ದಂಡು "ರಂಗಪ್ಪನ" ಕಥೆಯಲ್ಲಿದೆ. ಕಿರುತೆರೆಯ ನಟ ನಂಜುಂಡ. ಹಿರಿ ತೆರೆಯಲ್ಲಿ ಕಾಣಿಸಿಕೊಂಡು ಕಿರುತೆರೆಯಲ್ಲಿ ಮಿಂಚುತ್ತಿರುವ ರವಿಕಿರಣ್ ಹತ್ತು ವರ್ಷದ ಸುದೀರ್ಘ ಗ್ಯಾಪ್ ನ ನಂತರ "ರಂಗಪ್ಪ ಹೋಗ್ಬಿಟ್ನಾ...? ದಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಹೊಸತನ..ಹೊಸ ನಿರ್ದೇಶಕರ ರಂಗಪ್ಪ ಹೋಗ್ಬಿಟ್ನಾ ಟೈಟಲ್ ನಿಂದಲೇ ಸದ್ಯ ಗಮನ ಸೆಳೆಯುತ್ತಿದೆ. ತೆರೆ ಮೇಲೆ ಬಂದ ನಂತರ ಇನ್ನು ಏನೇಲ್ಲ ಮಾಡ್ತದೋ....ಆ ರಂಗಪ್ಪನೇ ಬಲ್ಲ...

-ರೇವನ್ ಪಿ.ಜೇವೂರ್

Sunday, July 25, 2010

ಯಕ್ಷಯಾನ....ಯೋಗಿಗಾನ...

"ಯೋಗಿ" ಅಲಿಯಾಸ್ ಲೂಸ್ ಮಾದ "ಯಕ್ಷ" ನಾಗಿ ಬಿಟ್ಟಿದ್ದಾನೆ. "ದುನಿಯಾ"ದಲ್ಲಿ ಲೂಸ್...ಲೂಸ್ ಥರವೇ ಆಡಿ ಗಮನ ಸೆಳೆದ . ಮುಂದಿನ ಬಹುತೇಕ ಚಿತ್ರಗಳು ಲೂಸ್ ಯೋಗಿಗೆ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಹೆಸರು ತಂದಕೊಟ್ಟವು. ಆದ್ರೆ, ನಂತರ ಲೂಸ್ ಮಾದ ಬೋರ್ ಆದದ್ದು ಗೊತ್ತೇಯಿದೆ. ಈಗ ಹೊಸ ಅವತಾರ್ ದಲ್ಲಿ ಯೋಗಿ ಬರಲಿದ್ದಾನೆ. ತಂದೆ ಟಿ.ಪಿ.ಸಿದ್ಧರಾಜು ದುಡ್ಡು ಹಾಕಿರುವ ಚಿತ್ರಕ್ಕೆ ಈತನೆ ನಾಯಕ...ಈತೇನೆ ಯಕ್ಷ...

ಆದ್ರೆ, ರಮೇಶ್ ಭಾಗವತ್ ಅವರ ಕಥೆಯಲ್ಲಿ ಇನ್ನಷ್ಟು ಪ್ರಮುಖ ಪಾತ್ರಗಳಿವೆ. ಯೋಗರಾಜ್ ಪುಲಕೇಶಿ ರೋಲ್ ಗೆ ಈ ಮೊದಲೇ ಇವರೇ ಬೇಕು ಅಂದುಕೊಂಡಂತೇನೆ ಬಾಲಿವುಡ್ ನ "ನಾನಾ ಪಾಟೇಕರ್" ಬಂದು ಪೋಲಿಸ್ ಅಧಿಕಾರಿ ಕೆಲಸ ಮಾಡಿ ಹೋಗಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಧ್ವನಿಯಾಗಿ ಜೀವತುಂಬಿದ್ದಾರೆ.


ಕೇವಲ ನಾನಾ ಪಾಟೇಕರ್ ಅಲ್ಲ. ಮುಂಬೈ ನಲ್ಲಿ ಮಿಂಚುತ್ತಿರುವ ಅತುಲ್ ಕುಲಕರ್ಣಿ ಬಂದಿದ್ದಾರೆ. ಆ ದಿನಗಳಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತು. "ಯಕ್ಷ" ಚಿತ್ರದಲ್ಲಿ ಅತುಲ್ ಡಾನ್ ಪಾತ್ರದ ಮೂಲಕ ಮತ್ತೆ ಗಮನ ಸೆಳೆಯಲು ಸಜ್ಜಾಗಿದ್ದಾರೆ.


"ಯೋಗಿ" ಯಕ್ಷದಲ್ಲಿ ಹೊಸದನ್ನ ಟ್ರೈ ಮಾಡಿದ್ದಾನೆ. ಮೂವರು ಸಾಹಸ ನಿರ್ದೇಶಕರು ಹೇಳಿಕೊಟ್ಟ ಸಾಹಸವನ್ನ ಅಂಜು ಅಳುಕಿಲ್ಲದೇ ಮಾಡಿದ್ದಾನೆ. ಸ್ಕೂಬಾ ಡೈವಿಂಗ್ ನಂತಹ ಸಾಹಸಕ್ಕೂ ಕೈಹಾಕಿ ಯಶಸ್ವಿಯಾಗಿ ನಿರ್ವಹಿಸಿ ಮರಳಿದ್ದಾನೆ. ರಾಪ್ ಥರ ಹಾಡೊಂದರಲ್ಲಿ ಸಖತ್ ಡಾನ್ಸೂ ಮಾಡಿದ್ದಾನೆ. ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದ ಈ ಹಾಡು ಬೆಂಗಳೂರಲ್ಲಿ ಶೂಟ್ ಆಗಿದೆ. ಬ್ಯಾಂಕಾಕ್ ನಲ್ಲಿ ಒಂದು ಹಾಡು ಚಿತ್ರೀಕರಣವಾಗಿದೆ.


ಚಿತ್ರದ ಹಾಡುಗಳು ಲಂಡನ್ ನಲ್ಲಿ ಮಾಸ್ಟ್ರಿಂಗ್ ಆಗಿವೆ. ಇಂಗ್ಲೀಷ ಚಿತ್ರದ ಹಾಡೊಂದನ್ನ ನೋಡಿದಾಗ ಆಗುವ ಆ ಎಲ್ಲ ಫೀಲ್
"ಯಕ್ಷ" ನ ಗೀತೆಯಲ್ಲಿರಲಿವೆಯಂತೆ. ಅನೂಪ್ ಸೀಳಿನ್ ನಂತಹ ಯುವ ಸಂಗೀತ ನಿದೇರ್ಶಕ ಇಂತಹದೊಂದು ಸಾಹಸವನ್ನ ಬರೊಬ್ಬರಿ ೬ ತಿಂಗಳವರೆಗೂ ಕುಳಿತು ಮಾಡಿದ್ದಾನೆ. ಮಾಸ್ಟರಿಂಗ್ ಆದ ಹಾಡುಗಳು ಈಗಾಗಲೇ ಎಫ್ ಎಂ ರೇಡಿಯೋದಲ್ಲಿ ಪ್ರಸಾರವಾಗ್ತಿವೆ.


ಯಕ್ಷನ ಚಿತ್ರದಲ್ಲಿ ಮ್ಯಾಜಿಕ್ ಇದೆ. ಅಘಾದ ಶಕ್ತಿ ಕೈಗೆ ಬಂದರೆ ಶ್ರೀಸಾಮಾನ್ಯನು ಅಡ್ಡದಾರಿ ಹಿಡಿಯಬಹುದೆಂಬ ಕಲ್ಪನೆಯ ಅನಾವರಣ ಇದರಲ್ಲಿದೆ ಅನಿಸುತ್ತದೆ. ಕಾರಣ ಸದ್ಯ ಲಭ್ಯವಿರುವ ಪ್ರಮೋಗಳು ಯಕ್ಷನ ಯಕ್ಷಗಾನ ತೆರೆದಿಟ್ಟಿವೆ. ಕೇವಲ ಸ್ಟೈಲಿಷ್ ಡ್ರೆಸ್ ಅಂಡ್ ಲುಕ್ ಅಲ್ಲದೇ, ಹುಲಿ ವೇಷದಲ್ಲೂ ಮಿಸ್ಟರ್ ಲೂಸು ಕಾಣಿಸಿಕೊಂಡಿದ್ದಾನೆ. ಹೆಗಲ ಮೇಲೆ ಹಾವನ್ನೂ ಹಾಕಿಕೊಂಡು ಮ್ಯಾಜಿಕ್ ಮಾಡಿದ್ದಾನೆ.


"ಯಕ್ಷ" ಚಿತ್ರ ತಂಡಕ್ಕೆ ರೋಚಕ ಅನುಭವ ನೀಡಿದೆ. ನಾನಾ ಜೊತೆಗಿನ ಅಭಿನಯ ಖುಷಿಕೊಟ್ಟಿದೆ. ಅತುಲ್ ಕುಲಕರ್ಣಿ ಯೋಗಿಗೆ ಡೆಡಿಕೇಷನ್ ಬಗ್ಗೆ ಪಾಠ ಮಾಡಿ ಹೋಗಿದ್ದಾರೆ. ಇದೇ ೩೦ ರಂದು ಚಿತ್ರ ತಂಡ "ಯಕ್ಷ"ನ ಹಾಡನ್ನ ರಿಲೀಜ್ ಮಾಡಲಿದೆ. ಚಿತ್ರ ಬರುವ ಆಗಷ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ. ಅಲ್ಲಿವರೆಗೂ "ಯಕ್ಷ"ನ ಹಾಡುಗಳು ಸದ್ದು ಮಾಡುವ ಹಾಗಿವೆ..

- ರೇವನ್ ಪಿ.ಜೇವೂರ್

Tuesday, July 20, 2010

ನಮ್ ಏರಿಯಾಲ್ ಒಂದಿನ...

ನಮ್ಮ ಏರಿಯಾಲ್ ಒಂದಿನ. ಅರವಿಂದ್ ಕೌಶಿಕ್ ಮೊದಲ ಚಿತ್ರ. ಮಂಡ್ಯಾ ರಮೇಶ್ ಅವರ ಶಿಷ್ಯ. ಸಾಕಷ್ಟು ಕನಸು ಕಂಡು ಮಾಡಿದ್ದ ಚಿತ್ರವಿದು. ಹೊಸ...ಹೊಸ ಪ್ರಯೋಗಳನ್ನ ನಮ್ ಏರಿಯಾಲ್ ಮಾಡಿದ್ದಾರೆ. ಒಂದರ್ಥದಲ್ಲಿ ಇದು ಹೊಸ ತಲೆ ಮಾರಿನ ಚಿತ್ರವಂತಲೇ ಹೇಳಬಹುದು. ಪ್ರಯೋಗಾತ್ಮಕ ಸಿನೆಮಾ ಅಂದರೂ ತಪ್ಪಾಗಲಾರದು. ಗಾಂಧಿನಗರದ ಸಿದ್ಧ ಸೂತ್ರಗಳನ್ನ ನಮ್ ಏರಿಯಾದ ಹುಡುಗ್ರು ಮುರಿದ್ದಾರೆ...ಆದ್ರೆ..ದುರಂತ ಇವರನ್ನ ಬಿಟ್ಟಿಲ್ಲ. ಮೊದಲ ಚಿತ್ರ ಇನ್ನೇನು ರಿಲೀಜ್ ಆಗ್ತದೆ. ಇಂತಹ ಒಂದು ಕನಸಲ್ಲಿ...ಅಹಂನಲ್ಲಿ ಹೊಸತರದ ಪ್ರಮೋಗಳನ್ನ ಮಾಡಿತ್ತು ಕೌಶಿಕ್ ಟೀಮ್... ಅಷ್ಟೇ. ಆ ನಂತರ ಎಲ್ಲವೂ ಮಾಯಾಮೃಗವೇ...

ಚಿತ್ರ ಬಿಡುಗಡೆಯಾಗುವ ದಿನಗಳು ಬರಬರುತ್ತಾ ೩೬೫ ದಿನಗಳೇ ಕಳೆದು ಹೋದವು. ಈ ೩೬೫ ದಿನಗಳಿಗೆ ಇನ್ನೊಂದಷ್ಟು ದಿನಗಳು ಸೇರಿ ಎರಡು ವರ್ಷವೇ ಆಯಿತು. ಚಿತ್ರದಲ್ಲಿ ನಟಿಸಿದ ನಾಯಕ ಅನೀಷ್ "ಪೋಲಿಸ್ ಕ್ವಾಟರ್ಸ್ " ಅನ್ನೊ ಎರಡನೇ ಚಿತ್ರದಲ್ಲಿ ಅಭಿನಯಿಸಿದ. ಚಿತ್ರವೂ ರಿಲೀಜ್ ಆಯಿತು. ಆದರೆ, "ನಮ್ ಏರಿಯಾಲ್ ಒಂದಿನ" ಮತ್ತೆ ಕನಸಾಗಿ ಉಳಿಯಿತು. ಅಷ್ಟರಲ್ಲಿಯೆ ಇಡೀ ಟೀಮ್ ಬೇರೆ..ಬೇರೆ ಕೆಲಸಗಳಲ್ಲಿ ತೊಡಗಿತು. "ನಮ್ ಏರಿಯಾಲ್ ಒಂದಿನ" ಪ್ರೀತಿ ಬಿಟ್ಟು ಹೋಗಲಿಲ್ಲ ಬಿಡಿ...
ಹಲವು ಕಷ್ಟ...ನಷ್ಟಗಳನ್ನ ಎದುರಿಸಿ ಈಗ ಹುಡುಗ್ರ ಮತ್ತೆ ಚೇತರಿಸಿಕೊಂಡಿದ್ದಾರೆ. ಇದೇ ೨೩ ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೇ ಖುಷಿಯಲ್ಲಿಯೆ ಕೌಶಿಕ್ ಅಂಡ್ ಟೀಮ್ ಮತ್ತೊಂದು ಪ್ರಮೋ ಮಾಡಿದೆ. ಈ ಪ್ರಮೋ ಅದು ಹೇಗಿದೆ ಅಂದ್ರೆ, ತಮ್ಮನ್ನ ತಾವೇ ಗೇಲಿ ಮಾಡಿಕೊಂಡಿದ್ದಾರೆ. ಚಿತ್ರ ತಡವಾಗಿದಕ್ಕೆ ತಾವೇ ಚೇಷ್ಠೆಗಳನ್ನ ಮಾಡಿದ್ದಾರೆ. ತಾವೇ ಆಕ್ಟೂ ಮಾಡಿದ್ದಾರೆ. ರವಿತೇಜ ಅನ್ನೊ ಯುವ ನಟ ಈ ಪ್ರಮೋದಲ್ಲಿ ಸಾಕಷ್ಟು ಗಮನ ಸೆಳೀತಾರೆ...ಇನ್ನಿಲ್ಲದಷ್ಟು ಹಾಸ್ಯದ ರಸದೌತಣ ಬಡಿಸ್ತಾರೆ..ಅಷ್ಟು ಕ್ರಿಯಾಶೀಲ್ ಪ್ರಮೋರಿಯದು. ಅದನ್ನ ಅಕ್ಷರಗಳಲ್ಲಿ ಹೇಳುವುದಕ್ಕಿಂತ ನೋಡಿಯೆ ಅನುಭವಿಸಬೇಕು....

ಚಿತ್ರದ ಕಂಟೆಂಟ್ ವಿಷಯಕ್ಕೆ ಬಂದ್ರೆ, ಇಲ್ಲಿ ಗಲ್ಲಿ ಹುಡುಗರ ಪ್ರೀತಿಯಿದೆ. ಕ್ರಿಕೆಟ್ ಕ್ರೇಜ್ ಇದೆ. ಏರಿಯಾ ಹುಡುಗರ ಹೊಡೆದಾಟ..ಬಡೆದಾಟವಿದೆ. ಇದಕ್ಕೂ ಮೀರಿದ ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಅಷ್ಟೊಂದು ಹೊಸರೂಪದವೆನಿಸುವ ಅಶೋಕ್ ವರ್ಕ್ ಹೊಸ ಅನುಭವ ನೀಡ್ತದೆ. ಈ ಹಿಂದೆ ಇರದ ಫ್ರೇಮಿಂಗ್. ಹೊಸ ಥರದ ಕ್ಯಾಮೆರಾಯ್ಯಾಂಗಲ್. ವಿಷಯವನ್ನ ಆಳವಾಗಿ..ಕುತೂಹಲಕಾರಿಯಾಗಿ ತೋರಬಲ್ಲ ಎಲ್ಲ ತಂತ್ರಗಳು ಇಲ್ಲಿ ಬಳಕೆಯಾಗಿವೆ...

ನವ ನಟ ಅನಿಷ್ ಇಲ್ಲಿ ಸಖತ್ ಫೈಟ್ ಮಾಡಿದ್ದಾರೆ. ಮೇಘನಾ ಗಾಂವಕರ್ ಲುಕ್ ಅಂಡ್ ಫೀಲ್ ಚೆನ್ನಾಗಿದೆ ಅನಿಸುತ್ತದೆ. ಖಳನಾಯಕನ ಪಾತ್ರಧಾರಿ ರವಿತೇಜ ಇಲ್ಲಿ ಒಂಚೂರು ಕಾಮಿಡಿನೂ ಮಾಡ್ತಾರೆ. ಸದ್ಯಕ್ಕೆ ಇಷ್ಟು ಚಿತ್ರದ ಬಗ್ಗೆ ಗೊತ್ತಾಗಿರುವ ಸಂಗತಿ. ಇತ್ತೀಚಿಗೆ ಕರೆದ ಪ್ರೆಸ್ ಮೀಟ್ ನಲ್ಲಿ ಈ ಎಲ್ಲ ಸಂಗತಿಗಳನ್ನ ಹಂಚಿಕೊಂಡಿದೆ ನವ ಉತ್ಸಾಹದ ಕೌಶಿಕ್ ಟೀಮ್. ಇದೇ ಬರುವ ೨೩ ರಂದು ಚಿತ್ರ ತೆರೆಗೆ ಬರುತ್ತಿರುವ ಕಾರಣ ಮತ್ತೆ ಉತ್ಸಾಹ ಮೂಡಿಸಿಕೊಂಡ ಟೀಮ್ ಬಿಡುಗಡೆಯ ಗಡಿಬಿಡಿಯಲ್ಲಿ ಓಡಾಡುತ್ತಿದೆ. ಇವರ ಓಡಾಟ ಯಶಸ್ವಿಯಾಗಲಿ...

- ರೇವನ್ ಪಿ.ಜೇವೂರ್

Friday, July 16, 2010

ನಾ ನೋಡಿದ ಅರ್ಧ ಚಿತ್ರ...

ನಾ ಒಂದು ಚಿತ್ರ ನೋಡಿದೆ. ಅದು ಕೇವಲ ಅರ್ಧ ಗಂಟೆ. ಆರಂಭ ಗೊತ್ತಿಲ್ಲ. ಅಂತ್ಯವೂ ಗೊತ್ತಿಲ್ಲ. ವೀಕ್ಷಿಸಿದ ಕೇವಲ ೩೦ ನಿಮಿಷದಲ್ಲಿ ನೆಚ್ಚಿನ ಹಾಡು ಬಂದು ಹೋಯಿತು. ಹೀರೊ.ಹೀರೋಯಿನ್ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡ ವಿಷಯಗಳ ದರುಶನವೂ ಆಯಿತು. ನೋಡಿದ ಅರ್ಧ ಗಂಟೆಯ ವಿರ್ಮಶೆ ಇಲ್ಲಿದೆ. ಎರಡೂ ವರೆ ಗಂಟೆ ಚಿತ್ರ ನೋಡಿದಾಗಲೇ ಚಿತ್ರ ವಿರ್ಮಶೆ ಮಾಡುವುದು ಕಷ್ಟ. ಅಂತದ್ರಲ್ಲಿ ಇದು ಸರೀನಾ ಅನ್ನಬಹುದು. ಇದು ನಿಜಾನೆ. ಆದ್ರೂ, ಅರ್ಧಗಂಟೆಯ ಚಿತ್ರ ಕಾಡುತ್ತಿದೆ. ಸಾಲಾಗಲು ಪ್ರಯತ್ನಿಸುತ್ತಿದೆ. ಅದಕ್ಕೇನೆ ಮನಸ್ಸು ಈಗ ಅಕ್ಷರಗಳ ಗುಲಾಮ..

ಚಿತ್ರ ನಟ ರಾಜ್ . ಗೆಳತಿ ಬಿಂದು. ಇದು ಅರ್ಧಗಂಟೆಯಲ್ಲಿ ತಿಳಿದ ಸತ್ಯ. ಇಬ್ಬರಲೂ ಪ್ರೀತಿ. ಅವನಿಗೆ ಅಂತರಾಳದ ಪ್ರೀತಿ ಹೇಳಲಾಗದ ಸ್ಥಿತಿ. ಬಿಂದು ಗೆ ಗೆಳೆಯನ ಮನ ತಿಳಿಯುವ ಕುತೂಹಲ. ಇದರ ಮಧ್ಯೆ ಕಾಡಲ್ಲಿ ಕುಳಿತು ಇಬ್ಬರ ಪರಸ್ಪರ ಪ್ರೀತಿಯ ಸುತ್ತದ ಮಾತು-ಕಥೆ. ಆಗಲ್ಲ ಅಂದು ಹೋಗುವ ನಾಯಕ ಕೈಹಿಡಿದು ನಾ..ನಿನ್ನ ಪ್ರೇಯಸಿ ಅಂದು ಬಿಡುವ ಬಿಂದು. ಇಷ್ಟಾದ ಮೇಲೆ ಅದಲ್ಲೊಂದು ಹಾಡು...

ಗಾಳಿಯೇ ನೋಡು ಬಾ...
ದೀಪದಾ ನರ್ತನ...

ಹೌದು!!! ಇದು "ಸಂಚಾರಿ" ಚಿತ್ರದ ಕ್ಲೈಮ್ಯಾಕ್ಸ್ನ ಮುಂಚೆ ನಡೆಯುವ ದೃಶ್ಯ. ಈ ಅಂತ್ಯದಲ್ಲಿ ಖಳನಾಯಕರು ಬಂದು ಹೋಗುತ್ತಾರೆ. ಅವರು ಬಂದ ಮೇಲೆ ಮುಂದೇನಾಗುತ್ತದೆ ಅಂತ ಹೇಳೋದು ಬೇಡ. ರಾಜ್ ಆಕ್ಷನ್ ಶುರು. ಬಿಂದು ರೋದನ
ಆರಂಭ. ಇದಾದ ಮೇಲೆ ಏನ್ ಆಯಿತು. ಗೊತ್ತಿಲ್ಲ. ಅಷ್ಟು ಹೊತ್ತಿಗೆ ಹೊರಗೇ ಬರಲೇ ಬೇಕಿತ್ತು. ಕಾರಣ. ಅದು "ಸಂಚಾರಿ" ನೋಡಿದವರ ಅಭಿಪ್ರಾಯ ಕೇಳುವ ಸಮಯ.

ಫೈಟ್ಸ್ ಚೆನ್ನಾಗಿವೆ ಅಂದ್ರು...

ಹಾಡು ಗೆದ್ದಿವೆ ಅಂತ ಮತ್ತೆ..ಮತ್ತೆ ಹೇಳಿದರು.

ಕ್ಲೈಮ್ಯಾಕ್ಸ್ ಇನ್ನು ಸರಿ ಹೋಗಬೇಕಿತ್ತು ಅಂದರು.

ಮೊದಲ ದಿನದ ರೆಸ್ಪಾನ್ಸ್ ಬಹುತೇಕ ನಂಬಿಕೆಗೆ ಅರ್ಹ ಅಲ್ಲವೇ ಅಲ್ಲ. ಎರಡನೇ ದಿನವೋ. ಮೂರನೇ ದಿನವೋ ಬಣ್ಣದ ಬಣ್ಣ ಬಯಲಾಗುತ್ತದೆ. ಅಲ್ಲಿವರೆಗೂ ಕಾಯಬೇಕು. ಆದ್ರೆ, ಗೋವಿಯವರ ಕಥೆ ಬಗ್ಗೆ ನೋಡಿದವರು ಅಭಿಪ್ರಾಯ ಹೇಳಿದ್ದಾರೆ. ಅರ್ಜುನ್ ಸಂಗೀತ ಗೆದ್ದಿದೆ. ಹಾಡನ್ನ ತೆರೆಗೆ ತರುವಲ್ಲಿ ಕಿರಣ್ ಗೋವಿ ಸೋತಿಲ್ಲ. ರವಿವರ್ಮ ಸಾಹಸ ಇಷ್ಟವಾಗ್ತವೆ. ನಾಯಕ ರಾಜ್ ಚೆನ್ನಾಗಿ ಫೈಟ್ ಮಾಡಿದ್ದಾರೆ. ಬಿಂದು ಪಾತ್ರಧಾರಿ ಬಿಯಾಂಕಾ ಎಕ್ಸಪ್ರೆಷನ್ ಚೆನ್ನಾಗಿವೆ. ರಾಜ್ ನಟನೆ ಇನ್ನಷ್ಟು ಮಾಗಬೇಕು. ಇಷ್ಟು "ಸಂಚಾರಿ" ಸಿನೆಮಾ. ಇನ್ನಷ್ಟು ಪೂರ್ತಿ ಚಿತ್ರ ನೋಡಿದ ಮೇಲೆ ಬರೆಯುತ್ತೇನೆ .ಸಾರಿ..ಅರ್ಧ ಚಿತ್ರ ನೋಡಿ ಬರೆದಿದ್ದಕ್ಕೆ...

- ರೇವನ್ ಪಿ.ಜೇವೂರ್

Wednesday, July 14, 2010

ವಿನೋದ್ ಪ್ರಭಾಕರ್ ಎಂಬ ಮರಿ ಟೈಗರ್

ಚಿತ್ರರಂಗದ ಟೈಗರ್ ಅಂದರೆ ಯಾರು. ಇದನ್ನ ಹೇಳೊದೇ ಬೇಡ. ತಟ್ಟನೇ ಮೊದಲು ಬರುವ ಹೆಸರು ಪ್ರಭಾಕರ. ಎರಡನೆ ವ್ಯಕ್ತಿಯ ಹೆಸರು ಆಗು ಇರಲಿಲ್ಲ. ಈಗಲೂ ಇಲ್ಲ. ಆದ್ರೆ, ಟೈಗರ್ ಪ್ರಭಾಕರ ಹೋಗಿದ್ದೇ ತಡ. ಇಲ್ಲಿ ಅವರನ್ನ ಅನುಕರಣೇ ಮಾಡುವ ಪ್ರಭಾಕರ್ ಗಳು ಸಾಕಷ್ಟು ಹುಟ್ಟಿಗೊಂಡರು. ಪ್ರಭಾಕರ್ ಎಲ್ಲಿ...ಅವರಲ್ಲಿ. ಒಂಚೂರು ಅವರಂತೆ ಡೈಲಾಗ್ ಹೊಡಿತಿದ್ದರು. ದುನಿಯಾ ವಿಜಿ ಕೂಡ ಪ್ರಭಾಕರ್ ಪ್ರೇಮಿ. ಪ್ರಭಾಕರ್ ಅವರನ್ನ ಮೀರಿಸುವ..ಹೋಲುವ ವ್ಯಕ್ತಿ ಇದ್ದಾರೆಯೇ...? ಇಂತಹ ಪ್ರಶ್ನೆಗೆ ಉತ್ತರ ಸಿಗೋದಿಲ್ಲ. ಹೋಲಿಕೆ ಸಿಬಹುದು.

ಹೌದು...!!! ಅದು ವಿನೋದ್ ಪ್ರಭಾಕರ್. ಕನ್ನಡ ಚಿತ್ರರಂಗದಲ್ಲಿ ಸದ್ಯ ಮಿಂಚಲು ಪ್ರಯತ್ನಿಸುತ್ತಿರುವ ಕಟ್ಟುಮಸ್ತಾದ ಯುವಕ. "ನವಗ್ರಹ" ದಂತಹ ಕನ್ನಡದ ಚಿತ್ರದ ಮೂಲಕ ಅಪ್ಪನಂತೆ ಬೆಳ್ಳಿ ತೆರೆಗೆ ಬಂದವರು. ತಂದೆ ಪ್ರಭಾಕರ್ ಖಳನಾಯಕನಾಗಿಯೇ ಪ್ರವೇಶ ಪಡೆದಿದ್ದರು. ಪುತ್ರನ ವಿಷಯದಲ್ಲಿ ಆ ರೀತಿ ಆಗಿಲ್ಲ. ಖಳನಾಯಕರ ಮಕ್ಕಳೆಲ್ಲ ನಾಯಕರಾಗಿ ಅಭಿನಯಿಸಿದ "ನವಗ್ರಹ" ಚಿತ್ರದಲ್ಲಿ ವಿನೋದ್ ನಾಯಕರಾಗಿ ತೆರೆ ಮೇಲೆ ಕಾಣಿಸಿಕೊಂಡರು.

ನವಗ್ರಹದಿಂದಲೇ ಚಿರಪರಿಚತರಾದ ವಿನೋದ್ ಥೇಟ್ ಪ್ರಭಾಕರ್ ಥರವೇ ಇದ್ದಾರೆ. ಅಪ್ಪನ ಹೋಲಿಕೆ ಯಥಾವತ್ತು ಇದೆ. ಫಿಜಿಕ್ ಅಂಡ್ ಫಿಟ್ ನೆಸ್ ಸೇಮ್ ಟು ಸೇಮ್. ೬.೨ ಇಂಚ್ ಹೈಟು. ಉದ್ದನೇಯ ಕೈಗಳು. ಎಲ್ಲೇ ನಿಂತರೂ ಅಷ್ಟೆ. ಎತ್ತರದ ಕಾಯ ಎದ್ದು ಕಾಣುತ್ತದೆ. ಕಾರಣ ಅಪ್ಪ ಹೇಳಿಕೊಟ್ಟ ವ್ಯಾಯಾಮದ ತಂತ್ರಗಳು ದೇಹವನ್ನ ಚೆನ್ನಾಗಿ ಬೆಳಸಿವೆ. ಒಂದೇ ಒಂದು ದಿನ ವ್ಯಾಯಾಮ ಮಾಡದೆ ವಿನೋದ್ ಹೊರಗೆ ಬೀಳೋದೆಯಿಲ್ಲ. ಅಪ್ಪ ಅಷ್ಟು ಮಜ್ಬೂತ್ ಅಡಿಪಾಯ್ ಹಾಕಿ ಹೋಗಿದ್ದಾರೆ.

ಅಪ್ಪನಂತೇ ಆಕ್ಷನ್ ಆಸ್ತಕಿ ಮೈಗೂಡಿಕೊಡ್ಡಿದೆ. ಡಾನ್ಸ್ ಕಷ್ಟ. ಮಾಡುವ ಉತ್ಸಾಹವಾಗಲಿ. ಕಲಿಕೆಯ ಕ್ರೇಜ್ ಆಗಲಿ ಕಡಿಮೆ ಇಲ್ಲ. ತೊಂದರೆಯಾದ್ರು ಚೆನ್ನಾಗಿ ಮಾಡಬಲ್ಲ ಛಲವಿದೆ. ಕನ್ನಡದಲ್ಲಿ ತಂದೆಯ ಹೆಸರು ಉಳಿಸಬೇಕೆಂಬ ಹೆಬ್ಬಯಕೆ. ತನನ್ನ ತನ್ನ ತಂದೆಯಿಂದಲೇ ಜನ ಗುರುತಿಸುತ್ತಾರೆಂಬು ಗೊತ್ತಿದೆ. ಅದು ಗೊತ್ತಿದ್ದರೂ ಕೂಡ ಬೇಜಾರಿಲ್ಲ. ತಂದೆ ಥರವೇ ಮಿಂಚುವ ದೊಡ್ಡ ಕನಸು.
ಹೋರಿ ಅಂತ ಕಳೆದ ವರ್ಷ ಸೆಟ್ಟೇರಿದ ಚಿತ್ರದಲ್ಲಿ ಈತ ನಾಯಕ. ರಮಣೀತೋ ಚೌಧರಿ ವಿನೊದ್ ಗೆ ಸಾಥ್ ನೀಡ್ತಾಯಿದ್ದಾರೆ. ಗೌರಿ ಮುಂಜಾಲ್ ಮತ್ತೊಬ್ಬ ಚೆಲುವೆ. ಇವರ ಮಧ್ಯೆ ವಿನೋದ್ ಹೀರೊ. ಮನ ತಟ್ಟುವ ಹಾಡುಗಳು ಸಿನೆಮಾಕ್ಕೆ ಸಿದ್ಧವಾಗ್ತಿವೆ. ಈಗಾಗಲೇ ಚಿತ್ರದ ತಮ್ಮ ಆಕ್ಷನ್ ಪ್ಯಾಕ್ಡ್ ಕೆಲಸ ಮುಗಿದಿದೆ. ಕ್ಲೈಮ್ಯಾಕ್ಸ್ ಶೂಟಿಂಗೂ ಕಂಪ್ಲಿಟ್ ಆಗಿದೆ. ಹಾಡಿನ ಚಿತ್ರೀಕಣಕ್ಕೆ ಇಡೀ ತಂಡ ಬ್ಯಾಂಕಾಕ್ ಗೂ ಹೋಗಲಿದೆ...

ತಮ್ಮ ಚಿತ್ರದ ಬಗ್ಗೆ ವಿನೋದ್ ಗೆ ತುಂಬಾನೆ ಉತ್ಸಾಹವಿದೆ. ಪ್ರೀತಿನೂ ಅಷ್ಟೇ ಇದೆ. ಚಿತ್ರದ ತಯಾರಿಕೆಯ ಈ ಹಿಂದೆ ಸ್ಥಗಿತಗೊಂಡಿತ್ತು. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ವಿನೋದ್ ಭಾರೀ ಆಕ್ಷನ್ ಮಾಡಿ ಕೈ ಮುರಿದುಕೊಂಡರು. ಇದರಿಂದ ಶೂಟಿಂಗ್ ಸ್ಟಾಪ್ ಆಯಿತು. ನಂತರ ವಿನೋದ್ ತಾಯಿ ತೀರಿ ಹೋದರು. ಈ ದು:ಖದಿಂದ ವಿನೋದ್ ಹೊರ ಬರಲು ತುಂಬಾನೇ ದಿನಗಳು ಕಳೆದವು. ಡೈರೆಕ್ಟರ್ ನಾಗೇಂದ್ರ ಮಾಗಡಿ ಆರೋಗ್ಯ ಕೆಟ್ಟಿತ್ತು. ಇದೆಲ್ಲ ಸೇರಿ "ಹೋರಿ" ಚೇತರಿಸಿಕೊಳ್ಳುವುದು ತಡವಾಯಿತು. ಈಗ ಅದೆಲ್ಲ ಸರಿ ಹೋಗಿ ತಂಡ ರೀಯಾಕ್ಟಿವ್ ಆಗಿದೆ. ಭಾರೀ ಜೋಶ್ ನಲ್ಲಿ ಸಾಂಗ್ ಶೂಟಿಂಗ್ ನಲ್ಲಿ ಬ್ಯೂಝಿಯಾಗಿದೆ...
ಹೊಸ ಕನಸಲಿ..ನವ ಉಲ್ಲಾಸದಲಿ "ಹೋರಿ" ಮತ್ತೆ ಹೂಂಕರಿಸುತ್ತಿದೆ....

- ರೇವನ್ ಪಿ.ಜೇವೂರ್

Sunday, July 11, 2010

ಹರ್ಷನ ಕಥೆ ಹೇಳಿದ ಕೃಷ್ಣನ್ ಲವ್ ಸ್ಟೋರಿ

ಕೃಷ್ಣನ್ ಲವ್ ಸ್ಟೋರಿ. ಕನ್ನಡದ ಸದ್ಯದ ಯಶಸ್ವಿ ಚಿತ್ರ. ತೆರೆಗೆ ಬಂದ ಮೊದಲ ದಿನ ಇದಕ್ಕೆ ಉತ್ತಮ ಆರಂಭ ಸಿಕ್ಕಿದೆ. ಹಾಗೇ ಈಗ ಅದು ಮುಂದುವರೆದಿದೆ. ಕನ್ನಡ ಪ್ರೇಕ್ಷಕ ಏನ್ ಹೇಳ್ತಾನೆ ಅಂತ ಚಿತ್ರ ತಂಡ ತಿಳಿದುಕೊಂಡೂ ಬಂದಿದೆ. ಅದೇ ಖುಷಿಯಲ್ಲಿಯೇ ತಂಡ ಒಂದು ಸತ್ಯವನ್ನೂ ಹೊರಗೆಡವಿದೆ. ಮೊದಲೇ ಹೇಳಿದಂತೆ ಮಾತು ಉಳಿಸಿಕೊಂಡಿದೆ..ಇದರ ಅರ್ಥ, ನೈಜ ಪ್ರೇಮ ಕಥೆಯ ನಾಯಕ ಯಾರು ಅನ್ನೋದು ಈಗ ಗೊತ್ತಾಗಿದೆ.

ನಿರ್ದೇಶಕ ಶಶಾಂಕ ತಮ್ಮ ಚಿತ್ರದ ರಿಯಲ್ ಹೀರೋನನ್ನ ಮಾಧ್ಯಮಕ್ಕೆ ಪರಿಚಯಿಸಿದ್ದಾರೆ. ಈತ ಯಾರೂ ಅನ್ನುವ ಸಮ್ ಡಿಟೈಲ್ಸ್ ಕೂಡ ಕೊಟ್ಟಿದ್ದಾರೆ. ಕೇವಲ ಇದು ತಮ್ಮ ಸ್ನೇಹಿತನ ಜೀವನದಲ್ಲಿ ನಡೆದ ನೈಜ ಘಟನೆ. ಆತನೇ ಅಲ್ಲಿ ನಾಯಕ ಅಂತಲೇ ಚಿತ್ರದ ಆರಂಭದಿಂದಲೂ ಹೇಳ್ತಾ ಬಂದಿದ್ದರು. ಶೇಕಡ ೭೫ ರಷ್ಟು ನೈಜ ಘಟನೆ. ೨೫ ರಷ್ಟು ಸಿನೆಮಾ ಅಂತಲೇ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಜನ ಕೃಷ್ಣನನ್ನ ಲವ್ ಮಾಡಿದ್ದಾರೆ. ಉತ್ತಮ ಪ್ರತಿಕ್ರಿಯೇನು ನೀಡಿದ್ದಾರೆ. ನಿಜವಾದ ಕೃಷ್ಣ ಯಾರೂ...? ಏನ್ ಮಾಡ್ತಾಯಿದ್ದಾನೆ. ಇದಾನಾ ಇಲ್ವಾ..? ಯಾವಾಗ ಜನಕ್ಕೆ ತೋರಿಸ್ತೀರಾ...? ಅಂತ ಹಲವು ಪ್ರಶ್ನೆಗಳನ್ನೂ ಕೇಳಿದ್ದಾರೆ. ಈ ಎಲ್ಲ ಪ್ರಶ್ನೆಗೆ ಈಗ ತೆರೆ ಬಿದ್ದಿದೆ. ಉತ್ತರವೂ ಸಿಕ್ಕಿದೆ..

ಕೃಷ್ಣನ್ ಲವ್ ಸ್ಟೋರಿ ಬೇರೆ ಅದ್ಯಾರದೋ ಅಲ್ಲ. ಶಶಾಂಕನ ಶಿಷ್ಯನದ್ದು. ಹರ್ಷ ಅನ್ನೋ ಈತ ಈಗಾಗಲೇ ಚಿತ್ರರಂಗದಲ್ಲಿದ್ದಾನೆ. ಮೊಗ್ಗಿನ ಮನಸಲ್ಲಿ ರಾಧಿಕಾ ಪಂಡಿತ್ ಮೊಲದ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ. ಕೃಷ್ಣನ್ ಲವ್ ಸ್ಟೋರಿಯಲಿ ಖಳನಾಯಕ ಪಾತ್ರವನ್ನೂ ನಿರ್ವಹಿಸಿದ್ದಾನೆ. ಈ ರೀತಿ ಚಿತ್ರರಂಗದ ನಂಟು ಬೆಳೆಸಿಕೊಂಡು ಬರುತ್ತಿದ್ದಾನೆ. ಇದೇ ಚಿತ್ರ ಪ್ರೀತಿಯಿಂದಲೇ ಹರ್ಷ ಈಗಷ್ಟೇ ಸೆಟ್ಟೇರಿದ "೨೦೧೨ " ಚಿತ್ರದ ಐವರು ನಾಯಕರಲ್ಲಿ ಒಬ್ಬನಾಗಿ ಕಾಣಿಸಿಕೊಳ್ತಾಯಿದ್ದಾನೆ.

ರಿಯಲ್ ಲೈಫ್ ನ ಈ ಪ್ರೇಮಿಯ ಜೀವನದಲ್ಲಿ ಹ್ಯಾಪಿ ಎಂಡಿಂಗ್ ಇದೆ. ಆದ್ರೆ, ಶಶಾಂಕ್ ಚಿತ್ರವನ್ನ ದು:ಖದಲ್ಲಿ ಅಂತ್ಯ ಮಾಡಿದ್ದಾರೆ. ಹರ್ಷನ ಹುಡುಗಿ ಸದ್ಯ ಸು:ಖವಾಗಿದ್ದಾರೆ. ಅದ್ಯಾರನ್ನೋ ಮದುವೆಯಾಗಿ ಅದೆಲ್ಲೋ ಸೆಟ್ಲ್ ಆಗಿದ್ದಾರೆ. ಒಂದು ಮಗು ಕೂಡ ಇದೆ. ಚಿತ್ರದಲ್ಲಿ ನಡೆಯುವಂತೆ ಹರ್ಷನ ಪ್ರೀತಿಸಿದ ಹುಡುಗಿ ನಿಜ ಜೀವನದಲ್ಲಿ ಮತ್ತೊಬ್ಬನೊಟ್ಟಿಗೆ ಓಡಿ ಹೋಗ್ತಾಳೆ. ಹಾಗೆ ಓಡಿ ಹೋದಾಗ ಆ ಹುಡುಗ ಅಪಘಾತದಲ್ಲಿ ಸತ್ತು ಹೋಗುತ್ತಾನೆ. ಈ ಗದ್ದಲದಲ್ಲಿ ಹರ್ಷನ ಪ್ರೀತಿ ಗೌಣವಾಗುತ್ತದೆ. ಹುಡುಗಿ ಮನೆಯವರು ಬೇರೊಬ್ಬನೊಂದಿಗೆ ಮದುವೆ ಮಾಡಿದ್ದಾರೆ. ಅದೇ ಹುಡುಗನ ಜೊತೆಗೆ ಹರ್ಷನ ಹುಡುಗಿ ಸದ್ಯ ಸಂಸಾರ ಮಾಡುತ್ತಿದ್ದಾಳೆ..

ಶಶಾಂಕ್ ಇನ್ನೊಂದು ಸ್ಟೆಪ್ ಮುಂದೆ ಹೋಗುವ ಪ್ಲಾನ್ ನಲ್ಲಿದ್ದಾರೆ. ನಿಜ ಜೀನದಲ್ಲಿ ಹರ್ಷನ ಕಥೆ ಎಂಡ್ ಆಗಿದೆ. ಚಿತ್ರದಲ್ಲಿ ಕಥೆ ಇನ್ನು ಉಳಿದಿದೆ. ಜನ ಸಹ ನಾಯಕನಿಗೆ ನ್ಯಾಯಕೊಡಿಸಿ ಅಂತ ಬೇಡ್ತಾಯಿದ್ದಾರಂತೆ. ಅದಕ್ಕೇನೆ "ಕೃಷ್ಣನ್ ಲವ್ ಸ್ಟೋರಿ" ಭಾಗ-2 ಮಾಡುವ ಇರಾದೆ ಪ್ರಕಟಿಸಿದ್ದಾರೆ. ಬರುವ ಮೂರು ತಿಂಗಳಲ್ಲಿ ಸ್ಕ್ರಿಪ್ಟಿಂಗ್ ಮುಗಿಸಿದ ಬಳಿಕ ಕೃಷ್ಣನ್ ಲವ್ ಸ್ಟೋರಿಯ ಭಾಗ ಎರಡರ ಚಿತ್ರೀಕರಣ ಆರಂಭಿಸಲಿದ್ದಾರೆ. ಮೊದಲ ಚಿತ್ರದಲ್ಲಿದ್ದ ಅಜಯ್ ರಾವ್ ಮತ್ತೆ ಮುಂದುವರೆಯಲ್ಲಿದ್ದಾರೆ. ರಾಧಿಕಾ ಪಂಡಿತ್ ಮೊದಲ ಭಾಗದಲ್ಲಿ ಸತ್ತು ಹೋಗಿದ್ದಾಳೆ. ರಾಧಿಕಾ ಅಣ್ಣನ ಪಾತ್ರವೂ ಇಲ್ಲಿರುವುದಿಲ್ಲ. ಇನ್ನುಳಿದ ಪಾತ್ರಗಳು ಮುಂದುವರೆಯುತ್ತವಂತೆ.

ಆದ್ರೆ, ಪಾರ್ಟ್ -೨ ದಲ್ಲಿ ಇರುವ ಕಥೆಯಲ್ಲ ಕಲ್ಪನಾತೀತ. ಇಲ್ಲಿ ಸತ್ಯ ಘಟನೆಯ ಸ್ಪರ್ಶ ಇರೋದೇಯಿಲ್ಲ. ಏನೇ ಇದ್ದರೂ ಅದು ಶಶಾಂಕ್ ಕಲ್ಪನೆ...ಹೀಗಂತ್ ಖುದ್ ಶಶಾಂಕ್ ಹೇಳಿಕೊಂಡಿದ್ದಾರೆ. ಇವರ ಹೊಸ ಹೆಜ್ಜೆಗೆ ಒಂದು ಗುಡ್ ಲಕ್.ಆದ್ರೂ, ಏನ್ ಕತೆ ಮಾಡ್ತಾರೇ ಅನ್ನೋದು ಸದ್ಯ ಇನ್ನು ಉಳಿದಿರುವ ಪ್ರಶ್ನೆ...

- ರೇವನ್ ಪಿ.ಜೇವೂರ್

Friday, July 9, 2010

ಗಾಳಿಯೇ ನೋಡು ಬಾ..

ಗಾಳಿಯೇ ನೋಡು ಬಾ..ದೀಪದಾ ನರ್ತನ.
ರಾತ್ರೀಯೆ ನೀಡು ಬಾ ಮಾಯದಾ ದರ್ಪಣ...

ಇದೆಂತ ಅದ್ಭುತ ಕಲ್ಪನೆ ಅಲ್ವಾ. ಗಾಳಿಯೂ ನಮ್ಮೊಟ್ಟಿಗೆ ಇರುತ್ತದೆ. ದೀಪವೂ ನಮ್ಮೊಟ್ಟಿಗೆ ದಿನವೂ ಪ್ರಜ್ವಲಿಸುತ್ತದೆ. ನರ್ತನ ಟಿವಿಗಳಲ್ಲಿ ಬರ್ತಾನೇ ಇರ್ತವೆ. ಇಂತಹ ಸಾಲುಗಳು ಹುಟ್ಟಲು ಸಾಧ್ಯವೆ. ಹಾಗೆ ಹುಟ್ಟಿದರೆ ಅದು ಕವಿ ಮನಸ್ಸಿನಲ್ಲಿ ಸಾಧ್ಯ. ರವಿ ಕಾಣದ್ದು..ಕವಿ ಕಂಡ ಅಂತರಾ ಅಲ್ಲ. ಅದು ಎಲ್ಲ ಕಾಲಕ್ಕೂ ನಿಜವೇ. ಬೀಸುವ ಗಾಳಿಗೆ...ಅತ್ತ..ಇತ್ತ ಆರಲು ಸಜ್ಜಾಗುವ ದೀಪದ ಅಂತ್ಯ ಇಲ್ಲಿ ಕವಿಗೆ ನರ್ತನ ಅನಿಸುತ್ತದೆ.

ಇಂತಹ ಸಾಲುಗಳು ಸುಮ್ಮನೆ ಪುಸ್ತಕದಲ್ಲಿ ಉಳಿದಿದ್ದರ ಹೆಚ್ಚು ಪ್ರಚಾರ ಸಿಗ್ತಿತ್ತೋ ಇಲ್ವೋ. "ಸಂಚಾರಿ" ಚಿತ್ರದಲ್ಲಿ ಜಯಂತ್ ಕಾಯ್ಕಿಣಿಯವರ ಸಾಲುಗಳಿವು.. ಪಲ್ಲವಿನೇ ಇಷ್ಟೊಂದು ಚೆಂದ ಅದ್ಮೇಲೆ ಚರಣ ಹೇಗಿರಬೇಕು..ನೀವೇ ಕಲ್ಪಿಸಿಕೊಳ್ಳಿ...

ನಿನ್ನಂತೆ ನನ್ನಾರು ಕಾಡಿಲ್ಲ..
ಅದುವೇ ಪ್ರೀತಿಯ ಲಕ್ಷಣ...

ಗಾಳಿಯ ಹಾಡಿಗೆ ಪ್ರೀತಿ ಸಾಲುಗಳು ಸೇರುತ್ತವೆ. ಪ್ರೀತಿ-ಪ್ರೇಮದ ಅಲೆಯನ್ನೂ ಹರಿಸುತ್ತವೆ. ಕಾರಣ ಕ್ರಿಮಿನಲ್ ವೊಬ್ಬನ ಪ್ರೇಮಕಥೆಯ ಚಿತ್ರವೇ "ಸಂಚಾರಿ". ಸಾಹಿತ್ಯವೂ ಮೌಲ್ಯಯುತವಾಗಿದೆ. ಗಾಳಿಯೇ ನೀ ನೋಡು ಬಾ...ಈ ಹಾಡೊಂದರ ಮೇಲೆನೆ ೨೦ ದಿನ ಕೆಲಸ ಮಾಡಲಾಗಿದೆ. ಅದು ಬೇಕು..ಇದು ಬೇಕು ಅಂತ ಕೊನೆಗೆ ಗಾಳಿಯೇ ನೀ ನೋಡು ಬಾ ಅನ್ನೊದು ಹೊರಹೊಮ್ಮಿದೆ.

ಸಂಚಾರಿಯಲ್ಲಿ ವಿ.ನಾಗೇಂದ್ರ ಪ್ರಸಾದ್ ವಿರಚಿತ ಗೀತೆಗಳು ಇವೆ. ಒಂದಕ್ಕಿಂತವೊಂದು ಚೆಂದನೆಯ...ತಣ್ಣನೆಯ ಸಾಹಿತ್ಯದ ಗೀತೆಗಳು ಅನಿಸದೇ ಇರದು. ಏಕೆಂದರೆ, ಮಧುರ ಸಂಗೀತಕ್ಕೆ ಉತ್ತಮ ಸಾಲುಗಳು ಅನಿಸುವುದೇ ಈ ಹಾಡಿನ ವಿಶೇಷತೆ. ಹೊಸ ಗಾದೆಗಳನ್ನೂ ಚಿತ್ರದ ಹಾಡೊಂದರಲ್ಲಿ ಪ್ರಯೋಗಿಸಲಾಗಿದೆ. ನಮ್ಮಜ್ಜ...ಮುತ್ತಜ್ಜ ಹೇಳಿ ಹೋದ ಗಾದೆಗಳು ಅದೆಲ್ಲೊ ಹೆಣ್ಣಿನ ಹೋಲಿಕೆ ಮಾಡುವ ಕೆಲಸ ಮಾಡಿದ್ದವು ಅಂತ ಹೇಳಬಹುದು. ಇದೇ ಹಳೆ ಗಾದೆಗಳ ಸಾಲಿಗೆ ಸೇರಿಸುವಂತ ಪ್ರಯತ್ನ ವಿ.ನಾಗೇಂದ್ರಪ್ರಸಾದ್ "ಸಂಚಾರಿ" ಚಿತ್ರದಲ್ಲಿ ಮಾಡಿದ್ದಾರೆ.. ಇದಕ್ಕೆ ಕೆಳಗಿನ ಸಾಲು ಸಾಕ್ಷಿ...

ಭೂಮಿ ಸುತ್ತೋದು ಕಾಣದು...
ಇಬ್ಬನಿ ಸದ್ದು ಕೇಳದು..
ಇವುಗಳ ಹಾಗೇಯೇ ಪ್ರಶ್ನೇ ಈ ನಾರಿ..

ವಿ.ನಾಗೇಂದ್ರ ಪ್ರಸಾದ್ ಇದೇ ಚಿತ್ರದಲ್ಲಿ ಇನ್ನೊಂದು ಹೊಸ ಪದ್ಯ ಬರೆದುಕೊಟ್ಟಿದ್ದಾರೆ. ಕಣ್ಣಾ ಸನ್ನೆಯಲಿ...ಹೆಣ್ಣಾ ಕೇಳೋ ನೀವ ಅನ್ನೊ ಈ ರಚನೆ ಹೊಸ ಅನುಭವ ಕೊಡ್ತದೆ. ಹೊಸ ಪದಗಳ ಪರಿಚಯವನ್ನೂ ಮಾಡಿಸ್ತವೆ. ಹೆಣ್ಣಿನ ಮನದಾಳದ ಪ್ರಶ್ನೆಗಳನ್ನ ಹೊರಗೆಡವುತ್ತವೆ....

ಯಾರೀವ..ಯಾರೀವನೂ..
ರೆಪ್ಪೆ ಸನ್ನೆಯಲ್ಲಿ ಒಪ್ಪೆ ಅನ್ನೋ ನೀವ..
ಮಾಯವಾ ಮಾಡೋನಿವ..
ಮನಸೆಂಬ ಖಾಲಿ ಜಾಗವಾ ಆಕ್ರಮಿಸೋವ
ಈ ಪ್ರೇಮಿನಾ ಕರೆದೆ ಮನಸಾರೆ...

ಸಂಚಾರಿಯ ಈ ಗೀತೆಗಳಲ್ಲ ಹಿಟ್ ಆಗಿವೆ. ಬಿರುಗಾಳಿ ಚಿತ್ರಕ್ಕೆ ಸಂಗೀತ ನೀಡಿದ ಅದೇ ಅರ್ಜುನ್ ಇದಕ್ಕೂ ಮ್ಯೂಸಿಕ್ ಮಾಡಿದ್ದಾರೆ. ಎಂದಿನಂತೆ ಸೋನು ನಿಗಮ್ ಹಾಡಿದ್ದಾರೆ. ಶ್ರೇಯಾ ಘೋಷಾಲ್ ಎರಡು ಹಾಡಿಗೆ ಧ್ವನಿಯಾಗಿದ್ದಾರೆ. ಕೇವಲ ಆಡಿಯೋ ಗೀತೆಗಳನ್ನ ಕೇಳಿದವರಿಗೆ ಈಗ ಹಾಡು ನೋಡ ಬಹುದು. ಚಿತ್ರ ತಂಡ ಈಗಾಗಲೇ ಮೂರು ಹಾಡುಗಳನ್ನ ಎಲೆಕ್ಟ್ಟಾನಿಕ್ ಮಾಧ್ಯಮಕ್ಕೆ ನೀಡಿದೆ.

ಸಾಹಿತ್ಯಕ್ಕೆ ತಕ್ಕನಾಗಿಯೇ ನಿರ್ದೇಶಕ ಕಿರಣ್ ಗೋವಿ "ಸಂಚಾರಿ" ಹಾಡುಗಳ ಚಿತ್ರೀಕರಣ ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನುಳಿದಂತೆ ಸದ್ಯಕ್ಕೆ ಹಾಡುಗಳದ್ದೇ ಕಾರುಬಾರು. ಜುಲೈ ೧೬ ರಂದು ಚಿತ್ರ ತೆರೆಗೂ ಬರಲಿದೆ. ಬಂದ ಮೇಲೆ ಹಾಡು ಕೇಳಿದ ಜನ ಚಿತ್ರದ ಕಥೆ ನೋಡಿ ಏನ್ ಹೇಳ್ತಾರೋ ಏನೋ...ಹೊಸ ನಾಯಕ ರಾಜ್. ನಾಯಕಿ ಬಿಯಾಂಕಾ ದೇಸಾಯಿ ರಿಲೀಜ್ ನತ್ತ ಮುಖ ಮಾಡಿ ಕಾಯುತ್ತಿದ್ದಾರೆ...

- ರೇವನ್ ಪಿ.ಜೇವೂರ್

Thursday, July 8, 2010

ಮಾಸ್ಟರ್ ಕಿಷನ್ ಈಗ `೧೫' ರ ನಾಯಕ




ಕಿಷನ್ ಕಥೆ ಗೊತ್ತೇಯಿದೆ. ಪುಟ್ಟ ಹುಡುಗನಿದ್ದಾಗಲೇ ನಿರ್ದೇಶಕನಾದ ಪ್ರತಿಭಾವಂತ ಈತ. ಕನ್ನಡದ ಮಟ್ಟಿಗೆ ಅತಿ ಚಿಕ್ಕವಯಸ್ಸಿನ ಡೈರೆಕ್ಟರ್. ಪೇಪರ್ ಆಯೋ ಹುಡುಗರಿಂದ ಸ್ಪೂರ್ತಿ ಪಡೆದು `ಕೇರ್ ಆಫ್ ಫುಟ್ ಪಾತ್' ಮಾಡಿದ. ನೂರು ದಿನಗಳವರೆಗೂ ಚಿತ್ರ ಓಡ್ತು. ಚಿಕ್ಕ ಹುಡುಗನ ಚಿತ್ರ ಅನ್ನೋ ಕ್ರೇಜು. ಅಕ್ಷರ ಕಲಿಕೆಯ ಒಂದಷ್ಟು ಸಂದೇಶ. ಗುರಿ..ಗೊತ್ತು. ಬಡ ಮಕ್ಕಳಿಗೆ ದಾರಿ ತೋರುವ ಪ್ರಯತ್ನ. ಇವೆಲ್ಲ ಇದ್ದಿದ್ದರಿಂದಲೇ ಚಿತ್ರಕ್ಕೆ ಒಂದು ಮೌಲ್ಯ ಬಂತು. ಕಿಷನ್ ಗೆ ಎಲ್ಲಡೆ ಸುತ್ತುವ ಅವಕಾಶನೂ ಬಂತು...


ಇದು ಈಗ ಇತಿಹಾಸವೇ ಬಿಡಿ. ಮಗನನ್ನ್ ಪ್ರೋತ್ಸಾಹಿಸಿದ ಅಪ್ಪ ಶ್ರೀಕಾಂತ್ ಮಗನನ್ನ "ನಾಯಕ"ನನ್ನಾಗಿ ಮಾಡಿದ್ದಾರೆ. ತಾವೂ ಕೂಡ ಇದ್ದ ಕೆಲಸಕ್ಕೆ ಸಲಾಮ್ ಹೊಡೆದು "ನಿರ್ದೇಶಕ"ರೂ ಆಗಿದ್ದಾರೆ. ಕಾರಣ ಚಿತ್ರ ಪ್ರೀತಿ ಅನ್ನೋದು ಶ್ರೀಕಾಂತ್ ಕಾಂತಿ ತುಂಬಿದ ಟಾಕ್.


ಮಗನನ್ನು ನಾಯಕನಾಗಿಸುವ ಉತ್ಸಾಹದಲ್ಲಿ ಹದಿಹರೆಯದ ಕಿಷನ್ ಗೆ ನಾಯಕಿಯನ್ನೂ ತಾವೇ ಜೋಡಿ ಮಾಡಿದ್ದಾರೆ. ಪುತ್ರನ ೧೫ ರ ಹರೆಯದಲ್ಲಿ ನಾಯಕನನ್ನಾಗಿಸುವ ಹೊಸ ಹೆಜ್ಜೆ ಇವರದು. ಇದಕ್ಕೆ ಅದು ಹೇಗೆಲ್ಲ ಪ್ರತಿಕ್ರಿಯೆ ಬರಲಿವೆಯೋ..ಈ ದಿನ ಸದ್ಯ ಇನ್ನೂ ದೂರ..ಚಿತ್ರದ ಬಗ್ಗೆ ಈಗಷ್ಟೇ ಮೊದಲ ಪ್ರೆಸ್ ಮೀಟ್ ಆಗಿದೆ. ೧೫ ಎಂಬ ಹೆಸರಿಟ್ಟಿದ್ದೇವೆ. ಟೀನೇಜ್ ಚಿತ್ರ ನಮ್ಮದು ಅಂತ ಹೇಳಿ ಹೋಗಿದ್ದಾರೆ...



ಟೀನೇಜ್ ಅಂದ್ರೆ, ಇದು ೧೫ ರ ಹರೆಯ. ಇತ್ತ ಬಾಲ್ಯವೂ ಅಲ್ಲ. ಅತ್ತ ಯೌವ್ವನವೂ ಅಲ್ಲ. ಬಾಲ್ಯಕ್ಕೆ ಬಾಯ್ ಬಾಯ್..ಹರೆಯಕ್ಕೆ ಹಾಯ್ ..ಹಾಯ್ ಅನ್ನೊ ಸ್ಲೋಗನ್ ನ ಚಿತ್ರವಿದು. ಇನ್ನೂಂದು ಸಂಗತಿಯೆಂದ್ರೆ, ೧೫ ರ ತಳಮಳ...ರೋಮಾಂಚನ. ರಾಸಾಯಣ..ಕನಸು...ಮನಸ್ಸು..ದೇಹ... ಎಲ್ಲವನ್ನೂ ಬಿಂಬಿಸುವ ಚಿತ್ರವಿದು. ಈ ವಯಸ್ಸೇ ಒಂಥರಾ..ಅನ್ನೋ ಪುಟ್ಟ ಅಡಿ ಬರಹದಲ್ಲಿ ಇದನ್ನೆ ಬಿಂಬಿಸುವ ಸಾಹಸ ಮಾಡಲಾಗಿದೆ...


ಕಿಷನ್ ನಾಯಕಿ ರುಷಿತಾ ಪಾಂಡ್ಯ. ಈಕೆ ಮುಂಬೈ ನಿವಾಸಿ. ೧೫ ಚಿತ್ರದ ಮೂಲಕ ಕನ್ನಡಕ್ಕೆ ಪ್ರವೇಶ ಮಾಡ್ತಾಯಿದ್ದಾಳೆ. ವಯಸ್ಸು ಚಿತ್ರದ ಟೈಟಲ್ ನಂತೇನೆ ಬರೊಬ್ಬರಿ ೧೫ . ಶಾಲೆನೂ ಅಷ್ಟೆ. ಕಿಷನ್ ಥರವೇ ಎಸ್.ಎಸ್.ಎಲ್.ಸಿ ಓದುವ ಪುಟ್ಟಿ.


ಈಕೆಯದ್ದು ಬಣ್ಣದ ಬದುಕಿನೊಟ್ಟಿಗೆ ಘಾಢವಾದ ನಂಟು ಬೆಳೆಯುತ್ತಲೇ ಬಂದಿದೆ. ೬ ನೇ ವಯಸ್ಸಿನಲ್ಲಿಯೇ ಟಿವಿ ನೋಡಿ ನಾನೂ ಅಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆ ವ್ಯಕ್ತಪಡಿಸುತ್ತಿದ್ದಳಂತೆ. ಮಗಳ ಆಸೆಯನ್ನ ತಂದೆ-ತಾಯಿ ಪೋಷಿಸಿ ಬೆಳೆಸಿದ್ದಾರೆ. ಹಾಗಾಗಿ


ಪಿಯರ್ಸ್ ಸೋಪ್ ನ ಜಾಹೀರಾತು ನಲ್ಲಿ ಈಕೆ ಕಾಣಿಸಿಕೊಂಡಳು. ಪರಿಣಿತಾ ಚಿತ್ರದಲ್ಲಿ ವಿದ್ಯಾಬಾಲನ್ ಬಾಲ್ಯದ ಪಾತ್ರಕ್ಕೆ ಈಕೇನೆ ಆಯ್ಕೆ ಆಗಿದ್ದಳು. ಚಿತ್ರರಂಗ, ಕಿರುತೆರೆಯ ಜಾಹೀರಾತು ನಲ್ಲಿ ಆಗಾಗ ವರ್ಕ್ ಮಾಡ್ತಾನೆ ಇದ್ದಾಳೆ. ಆಗಲೇ ೧೫ ರ ಆಫರ್ ಈಕೆಯನ್ನ ಕನ್ನಡಕ್ಕೆ ತಂದಿದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ "ನಾಯಕಿ" ಪಟ್ಟ ನೀಡಿದೆ.


ಈ ಒಂದು ಅವಕಾಶದಿಂದ ಸದ್ಯ ರುಷಿತಾ ತುಂಬಾನೇ ಖುಷಿಯಲ್ಲಿದ್ದಾಳೆ. ಕಥೆಯನ್ನ ಕೇಳಿ ಇಷ್ಟದಿಂದಲೇ ಕೆಲಸ ಮಾಡುವುದಾಗಿ ಹೇಳಿದ್ದಾಳೆ. ಹಾಡು...ರೋಮ್ಯಾನ್ಸು...ಫೈಟು..ಸೆಂಟಿಮೆಂಟ್ಸು ಎಲ್ಲವೂ ಇದರಲ್ಲಿದೆ. ಒಂದೇ ಮಾತಿನಲ್ಲಿ ಹೇಳೋದಾದ್ರೆ ಇದು ಕಿಷನ್ ನಾಯಕನಾದ ಪಕ್ಕಾ ಕಮರ್ಷಿಯಲ್ ಸಿನೆಮಾ..


ಎಸ್.ಎಸ್.ಎಲ್.ಸಿ. ಹುಡುಗರ ಮನಸನ್ನ ಬಿಚ್ಚಿಡುವ ಈ ಚಿತ್ರದಲ್ಲಿ ಕಿಷನ್ ಒಬ್ಬ ಗಿಟಾರಿಸ್ಟ್. ಸಂಗೀತ ಸಾಧನದ ಪ್ರೀತಿಯೊಂದಿಗೆ ಪ್ರೀತಿ-ಪ್ರೇಮದಲ್ಲಿ ಮಿಂದೇಳುವ ಹುಡುಗ ಈತ. ಗಿಟಾರ್ ಕಲಿತಂತೇನೆ ಫೈಟ್ ಮಾಡಲು ಹಲವು ಸಮರ ಕಲೆಯ ಅಭ್ಯಾಸವನ್ನೂ ಈಗಾಗಲೆ ಮಾಡಿಕೊಂಡಿದ್ದಾನೆ. ಅಪ್ಪನ ಚಿತ್ರದಲ್ಲಿ ನಟಿಸುವ ಸಂತೋಷದಲ್ಲೂ ಇದ್ದಾನೆ..


ಚಿತ್ರದ ಚಿತ್ರೀಕರಣ ಬರುವ ಆಗಷ್ಟ್ ತಿಂಗಳಲ್ಲಿ ಆರಂಭವಾಗಲಿದೆ. ಸೈಕೋ ಚಿತ್ರದ ಕ್ಯಾಮೆರಾಮನ್ ೧೫ ಕ್ಕೆ ಕೆಲಸ ಮಾಡಲಿದ್ದಾರೆ. ಸಿದ್ಧಾರ್ಥ ವಿಪಿನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಬೆಂಗಳೂರು ಅಲ್ಲದೇ ಅಮೆರಿಕದಲ್ಲೂ ಈ ಚಿತ್ರ ಚಿತ್ರೀಕರಣವಾಗಲಿದೆ. ಸದ್ಯಕ್ಕೆ ೧೫ ರ ಬಗ್ಗೆ ಇಷ್ಟೇ ಮಾತು..


-ರೇವನ್ ಪಿ.ಜೇವೂರ್

Sunday, July 4, 2010

ಬಾಲಿವುಡ್ ಕನ್ನಡ

ಕನ್ನಡದಲ್ಲಿ ಎಷ್ಟು ಜನ ಬಾಲಿವುಡ್ ನವರಿದ್ದಾರೆ. ಲೆಕ್ಕಹಾಕಿದರೆ ಬಂದು ಹೋಗಿವ ತಾರಾಬಳಗವೇ ಹೆಚ್ಚು. ಮುಂಬೈನಿಂದ ಆಗಾಗ ಬಂದು ನಟಿಸಿ ಹೊರಟು ಹೋಗುವುದು ಸದ್ಯದ ಟ್ರೆಂಡ್. ಕೆಲವರಲ್ಲಿ ಪೂಜಾ ಗಾಂಧಿಯಂತ ಹುಡುಗಿ ಇಲ್ಲಿಯೇ ಉಳಿದಿದ್ದಾರೆ. ಕನ್ನಡತಿನೇ ಆಗಿದ್ದಾರೆ. ತಕ್ಕಮಟ್ಟಿಕೆ ಕನ್ನಡವನ್ನೂ ಕಲಿತಿದ್ದಾರೆ. ಈಗ ವಿಷಯ ಇದಲ್ಲ. ಬಂದು ಹೋಗುವ ಮಂದಿಯದ್ದು.

ಕನ್ನಡಕ್ಕೆ ಬರುವ ಹಿಂದಿ ತಾರೆಯರು ಒಂದು ಇಂಗ್ಲೀಷ್ ಮಾತನಾಡುತ್ತಾರೆ. ಇಲ್ಲವೇ, ಹಿಂದಿ ಬೋಲ್ ಥೇ ಹೈ. ಇದಾದ ಮೇಲೆ ಒಂಚೂರು ಕನ್ನಡದ ಪದಗಳನ್ನ ಕಲಿತು ಆಶ್ಚರ್ಯ ಮೂಡಿಸುತ್ತಾರೆ. ತಮ್ಮ ಪಾತ್ರಕ್ಕೆ ಇನ್ನಾರೋ ಡಬ್ಬಿಂಗ್ ಮಾಡ್ತಾರೆ. ಆಗ ಕರೆದುಕೊಂಡು ಬಂದವರಿಗೆ ನೋಡಲು ಹಿಂದಿ ಸ್ಟಾರ್ ಸಿಗ್ತಾರೆ. ಆ ಮೂಕ ಕ್ಯಾರೆಕ್ಟರ್ ಗೆ ಧ್ವನಿ ತುಂಬುತ್ತಾರೆ. ಇದು ಸದ್ಯ ನಮ್ಮ ಕನ್ನಡ ಇಂಡಸ್ಟ್ರೀಲಿ ಪರಭಾಷೆಯರ ಬಗೆಗಿನ ಬೇಜಾನ್ ಒಲವು.
ಇವರಲ್ಲಿಯೇ ಕೆಲವರು ಕನ್ನಡ ಭಾಷೆಯನ್ನ ಕಲಿತು ಡಬ್ಬಿಂಗ್ ಮಾಡಿದವರಿದ್ದಾರೆ. ರಮೇಶ್ ಭಾಗವತ್ ನಿದೇರ್ಶನದ 'ಯಕ್ಷ' ಚಿತ್ರಕ್ಕೆ ಬಾಲಿವುಡ್ ನ ನಾನಾ ಪಾಟೇಕರ್ ಹೀಗೆನೇ ಮಾಡಿದ್ದಾರೆ. ಪೋಲಿಸ್ ಪಾತ್ರದಲ್ಲಿ ಅಭಿನಯಿಸಿದ ನಂತರ ನಾನಾ ಕನ್ನಡದಲ್ಲಿಯೇ ತಮ್ಮ ಕ್ಯಾರೆಕ್ಟರ್ ಗೆ ಜೀವ ಕೊಟ್ಟಿದ್ದಾರೆ. ಇದು ಹೇಗೆಲ್ಲ ಬರುತ್ತದೆ, ಜನ ಮೆಚ್ಚುತ್ತಾರಾ..ಇಲ್ವಾ. ಇದನ್ನ ಚಿತ್ರ ಬಂದ ಮೇಲೆ ಹೇಳಬಹುದು. ನಾನಾ ಪಾಟೇಕರ್ ಕಲಾಪ್ರೀತಿ ಮತ್ತು ಕನ್ನಡ ಪ್ರಯತ್ನ ಶ್ಲಾಘನೀಯ.
`ಜಮಾನಾ' ಚಿತ್ರದಲ್ಲೂ ಇದೇ ರೀತಿಯಾಗಿದೆ. ಜಾಕಿ ಶ್ರಾಫ್ ರಂತಹ ಹೀರೊ ಕನ್ನಡ ಕಲಿತಿದ್ದಾರೆ. ಸೆಟ್ ನಲ್ಲಿಯೇ ಡೈಲಾಗ್ ಹೊಡೆದಿದ್ದಾರೆ. ಚಿತ್ರೀಕರಣ ಮುಗಿದ ನಂತರ ತಮ್ಮ ಪೋಲಿಸ್ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಇದು ಅಷ್ಟೊಂದು ಪಕ್ಕಾ ಅನಿಸುವುದಿಲ್ಲ. ತೆರೆ ಮೇಲೆ ಇದನ್ನ ನೋಡಿದವರಿಗೆ ಒಳ್ಳೆಯ ಪ್ರಯತ್ನ ಅನಿಸುತ್ತದೆ. ಕಾರಣ, ಸರಿಯಾಗಿ ಲಿಪ್ ಸಿಂಕ್ ಆಗಿಲ್ಲ.ಇದೇನೇ ಇದ್ದರೂ ಜಾಕಿ ಶ್ರಾಫ್ ಡಬ್ಬಿಂಗ್ ಕಹಾನಿ ಮೆಚ್ಚಲೇಬೇಕು. ಕಿಷನ್ ನಿದೇರ್ಶನದ `ಕೇರ್ ಆಫ್ ಫುಟ್ ಪಾತ್' ಚಿತ್ರದಲ್ಲಿ ಜಾಕಿ ಜೆಸ್ಟ್ ಕಾಣಿಸಿಕೊಂಡಿದ್ದರು. ಕನ್ನಡದ ಎರಡನೇ ಸಿನೆಮಾದಲ್ಲಿ ಡಬ್ಬಿಂಗ್ ಮಾಡಿ ಸುದ್ದಿ ಮಾಡಿದ್ದಾರೆ.

ಬಾಲಿವುಡ್ ಮಂದಿಯ ಈ ಕನ್ನಡ ಪ್ರೀತಿ ನಟರಿಗಷ್ಟೆ ಸೀಮಿತವಾಗಿಲ್ಲ. ಗಾಯಕರಿಗೂ ಇದು ಮೀಸಲು. ಸ್ವಲ್ಪ ಹಿಂದೆ ಹೋದರೆ, `ಒಂದೇ ಬಳ್ಳಿಯ ಹೂಗಳು' ಚಿತ್ರದ ಹಾಡೊಂದಕ್ಕೆ ಮುಹ್ಮದ್ ರಫೀ 'ನೀ..ನೆಲ್ಲಿ ನಡೆವೆ ದೂರ... ಅನ್ನೋ ಹಾಡು ಹಾಡಿದ್ದಾರೆ. ಲತಾ...ಆಶಾ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲಲ. ಇತ್ತೀಚಿಗೆ `ಮತ್ತೆ ಮುಂಗಾರು ' ಚಿತ್ರಕ್ಕೆ ಆಶಾ ಹಾಡಿದ್ದು ಗೊತ್ತೇಯಿದೆ...

ಇನ್ನು ಹೊಸಬರೋ...ಇವರಂತು ಕನ್ನಡದ ಗಾಯಕರೇ ಆದಂತಿದೆ. ಇಲ್ಲವೇ ಮಾಡಿದಂತಿದೆ. ಏಕೆಂದರೆ, ಸೋನು ನಿಗಮ್ ಹಾಡು ಸದ್ಯದ ಬಹುತೇಕ ಚಿತ್ರದಲ್ಲಿ ಇದ್ದೇ ಇರುತ್ತದೆ. ಶ್ರೇಯಾ ಘೋಷಾಲ್ ಕೂಡ ಒಂದು ಹಾಡಿಗೆ ಧ್ವನಿಯಾಗಿರುತ್ತಾರೆ. ಕುನಾಲ್ ಗಾಂಜಾವಾಲಾ ಇದೇ ಸಾಲಿಗೆ ಸೇರುವ ಮತ್ತೊಬ್ಬ ಬಾಲಿವುಡ್ ಗಾಯಕ. ಇವರ ಮುಂದೆ ಕನ್ನಡದವರು ಕಳೆದು ಹೋಗುತ್ತಿದ್ದಾರೆ.

ಇದು ಏನಕ್ಕೆ ಇದನ್ನ ಹೇಳುವುದು ಬೇಡ ಬಿಡಿ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಕನ್ನಡದವರಲ್ಲದ ಕನ್ನಡದ ಪ್ರೀತಿ ಇಲ್ಲಿ ದಿನೇ..ದಿನೇ ಹೆಚ್ಚುತ್ತಿದೆ. ಇದರ ಹಿಂದಿನ ರಹಸ್ಯವೇನು..ಇದನ್ನೂ ಹೇಳಬೇಕಿಲ್ಲ. ಚಿತ್ರ ಜಗತ್ತಿನ ಮಂದಿ ಸಿನೆಮಾ ಪ್ರಮೋಟ್ ಮಾಡಲು ಏನೇಲ್ಲ ಮಾಡ್ತಾರೆ. ಇದು ಬಣ್ಣದ ಭೂಮಿಯಲ್ಲವೇ...ಇಲ್ಲಿ ಸದಾಕಾಲ ಓಡುವುದು ಸಿರ್ಫ್ ಪೈಸಾ..ಪೈಸಾ....

- ರೇವನ್ ಪಿ.ಜೇವೂರ್

Friday, July 2, 2010

ರಾ..ಗಿಣಿ ಏನು ನಿನ್ನ ಹೋಳಿ...


ರಾಗಿಣಿ...ವೀರಮದಕರಿಯ ಕುವರಿ. ನಾಯಕಿಯಾದ ಮೊದಲ ಚಿತ್ರ, ಹೀಗನ್ನುತ್ತದೆ ಚಿತ್ರಪ್ರೇಮಿಗಳ ಚಿತ್ರಾನುಭವ.ಆದ್ರೆ, ಈ ನಟಿಯ ಮೊದಲ ಸಿನೆಮಾ ವೀರಮದಕರಿ ಅಲ್ಲವೇ ಅಲ್ಲ. ಶಂಕರಲಿಂಗ್ ಸುಗ್ನಳ್ಳಿ ನಿದೇರ್ಶನ `ಹೋಳಿ'ನೇ ರಾಗಿಣಿಯನ್ನು ತೆರೆಗೆ ತಂದ ಮೊದಲು ಸಿನೆಮಾ. ಈ ಮೊದಲು ಕ್ಯಾಟ್ ವಾಕ್ ಮಾಡಿದ ಬೆಡಗಿ ಈಕೆ. ಇದಕ್ಕೂ ಮುನ್ನ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಮಹಿಳೆಯರ ಕಣ್ಣು ಅರಳಿಸಿದ್ದು ಈ ಹುಡುಗಿಯ ಜರ್ನಿಯ ಹಿಸ್ಟರಿ...

ಈಗ ಕ್ಯಾಟ್ ವಾಕ್ ನಿಂದ ರಾಗಿಣಿ ದೂರವೇ ಉಳಿದಿದ್ದಾರೆ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಇದ್ದೇ ಇದೆ. ವೀರಮದಕರಿ ಈ ನಟಿಗೆ ರಾಗವು ತಂದು ಕೊಡ್ತತು. ಲಯವನ್ನೂ ಹೇಳಿಕೊಡ್ತುವೆ. ಅದಕ್ಕೇನೆ ಕನ್ನಡದಲ್ಲಿ ಈ ಪಂಜಾಬಿ ಹುಡುಗಿಗೆ ಸದ್ಯ ಎಲ್ಲಿಲ್ಲದ ಆಫರ್. ಇದೇ ಕ್ರೇಜ್ ನಲ್ಲಿಯೇ ಇತ್ತೀಚಿಗೆ ಶಂಕರ್ ಐಪಿಎಸ್ ನಲ್ಲಿ ಕುಣಿದು ಕುಪ್ಪಳಿ ಕಣ್ಮನ ಸೆಳೆದಾಗಿದೆ. ಗಂಡೆದೆ ಅಂತ ಚಿರಂಜೀವಿ ಸರ್ಜಾ ಜೊತೆಗೆ ಮೈಕುಣಿಸಿ ಇನ್ನೇನು ರಿಲೀಜ್ ಗೂ ಸಜ್ಜಾಗಿದ್ದಾರೆ.


ಆದ್ರೆ, ರಾಗಿಣಿಯ ಮೊದಲ ಚಿತ್ರ ಹೋಳಿ ಈಗ ತೆರೆಕಂಡಿದೆ. ವೀರಮದಕರಿ ಸೆಟ್ಟೇರುವ ಮೊದಲ ಹೋಳಿ ಮುಹೂರ್ತ ಮುಗಿಸಿಕೊಂಡಿತ್ತು. ವೆಂಕಟೇಶ್ ಅನ್ನೊ ಪ್ರೊಡ್ಯೂಸರ್ ಮಗನ್ನೇ ಹಾಕಿಕೊಂಡು ಮಿಸ್ಟರ್ ಶಂಕರಲಿಂಗ್ ಸುಗ್ನಳ್ಳಿ ಹೋಳಿಗೆ ರಂಗು ಬೆರಸಿದ್ದರು. ಕಾಮಣ್ಣ - ರತಿದೇವಿ ಕಥೆಗೆ ಒಂದಿಷ್ಟು ಗ್ರಾಫಿಕ್ಸ್ ಟಚ್ ನೀಡಿದ್ದಾರೆ.ಉತ್ತರ ಕರ್ನಾಟಕದ ಸೊಗಡನ್ನ ಬೆರಸಿ ದೇವದಾಸಿ ಪದ್ಧತಿಯ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

ಚಿತ್ರವನ್ನ ಆಗ ತರಬೇಕು.ಈಗ ಬಿಡುಗಡೆ ಮಾಡಬೇಕು.ಇಂತಹ ಲೆಕ್ಕಾಚಾರದಲ್ಲಿಯೆ ನಿದೇರ್ಶಕರು ರಿಲೀಜ್ ದಿನವನ್ನ ಮುಂದಕ್ಕೆ ತಳ್ಳಿದರು. ಕ್ರಿಕೆಟ್ ಮ್ಯಾಚ್ ನ ನೆಪವನ್ನೂ ಒಡ್ಡಿ ಹೋಳಿಯನ್ನ ರಿಲೀಜ್ ಮಾಡಿರಲಿಲ್ಲ. ಅದೇನು ತಿಳಿಯಿತೋ ಏನೋ. ಹೋಳಿಯನ್ನ ರಿಲೀಜ್ ಮಾಡಿದ್ದಾರೆ. ದುರಂತ ಅಂದರೆ, ಇದು ರಾಗಿಣಿಯ ಮೊದಲ ಸಿನೆಮಾ ಅಂದರೆ ಸದ್ಯ ನಂಬೋರೇಯಿಲ್ಲ. ಕಾರಣ. ಗ್ಲಾಮರ್ ಜಗತ್ತಿನ ಹುಡುಗಿ ಇಂತಹ ಚಿತ್ರ ಮಾಡಲು ಸಾಧ್ಯವೇ ಅನ್ನೊ ಒಂದು ಪುಟ್ಟ ಅನುಮಾನ ಬಂದು ಹೋಗುತ್ತದೆ. ಹಾಗೇನೆ ವೀರಮದಕರಿನೇ ರಾಗಿಣಿ ಮೊದಲ ಸಿನೆಮಾ ಅನ್ನೊ ಛಾಪು ಮೂಡಿಯಾಗಿದೆ.

ಇನ್ನೊಂದು ಸಂಗತಿಯೆಂದ್ರೆ, ಇಷ್ಷು ವರ್ಷವಾದರೂ ಸಹ ರಾಗಿಣಿಗೆ ಮೊದಲ ಚಿತ್ರ ದಮೋಹ ಹೋಗಿಲ್ಲ. ತನ್ನ ಮೊದಲ ಸಿನಮಾ ಗುರುವಿದಂತೆ ಅಂತಲೆ, ಅಭಿನಯ ಕಲಿತ ಕಥೆ ಹೇಳ್ತಾರೆ. ಹಾವ-ಭಾವಗಳ ಏರಿಳಿತ ತಿಳಿದೆ ಅಂತ ಅನುಭವ ಬಿಚ್ಚಿಡ್ತಾರೆ. ಇದು ಹೌದು ಅಂತ ನಂಬಲೇಬೇಕು.ಸುಮಾರು ಚಿತ್ರಗಳನ್ನ ಕೊಟ್ಟ ಶಂಕರಲಿಂಗ ಸುಗ್ನಳ್ಳಿ ಜಾನಪದ ಕಥೆಗಳಿಗೆ ಸಿನಿಮಾ ರೂಪಕೊಟ್ಟವರು. `ಕಡ್ಲಿಮಟ್ಟಿ ಮಾಸ್ತರ' ಚಿತ್ರ ಮಾಡಿ ಭೇಷ್ ಅನಿಸಿಕೊಂಡವರು.

ಆದ್ರೆ, ಹೋಳಿ ಗೆ ಮೊದಲ ದಿನ ಹೇಳಿಕೊಳ್ಳುವಂತ ರೆಸ್ಪಾನ್ಸ್ ಬಂದಿಲ್ಲ. ಒಂದೇ ದಿನ ಕನ್ನಡದ 6 ಚಿತ್ರಳು ತೆರೆಗೆ ಬಂದಿವೆ. ಇವುಗಳಲ್ಲಿ ಕೆಲವನ್ನ ಬಿಟ್ರೆ, ಎಲ್ಲವೂ ಬೇಗ ಡಬ್ಬ ಸೇರುವ ಚಿತ್ರಗಳೆ.ಹಾಗಾಗಿ ರಾಗಿಣಿ ಸಿನೆಮಾ ಏನ್ ಮಾಡ್ತದೋ...ಏನೋ...

-ರೇವನ್ ಪಿ.ಜೇವೂರ್

Wednesday, June 30, 2010

ಶ್ರುತಿ ಅಳೋದು ಬಿಟ್ಟಿದ್ದಾರೆ...


ಕನ್ನಡದ ತಾರೆ ಶ್ರುತಿ ಈಗ ಅಳೊದನ್ನ ಬಿಟ್ಟಿದ್ದಾರೆ. ಅಂದ್ರೆ, ಇದು ಆಫ್ ಸ್ಕ್ರಿನ್ ಕಥೆಯಲ್ಲ. ಆನ್ ಸ್ಕ್ರೀನ್ ಪುರಾಣ. ಕನ್ನಡ ಸಿನಿಪ್ರಿಯರಿಗೆ ಶ್ರುತಿ ಕಣ್ಣಿರ ಧಾರೆಯಿಂದಲೆ ಹೆಚ್ಚು ಚಿರಪರಿಚಿತ. ಹೆಣ್ಣುಮಕ್ಕಳ ಹೃದಯ ಕದ್ದು...ಗೆದ್ದ ನಟಿಯಿಕೆ. ಆದ್ರೆ, ನಿಜಜೀವನದಲ್ಲೂ ಕಣ್ಣಿರ ಕಥೆಗಳು ಸೃಷ್ಟಿಯಾಗಿದ್ದು ಗೊತ್ತೆಯಿದೆ. ಆದ್ರೂ, ಸದ್ಯಕ್ಕೆ ಶ್ರುತಿ ಅಳುವುದನ್ನ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಇದರರ್ಥ ಶ್ರುತಿ ಚಿತ್ರ ನೋಡಿದ ಪ್ರೇಕ್ಷಕರಿಗೆ ಇನ್ಮುಂದೆ ಕಣ್ಣುಗಳು ತೇವಗೊಳ್ಳುವುದಿಲ್ಲ.ಕಣ್ಣೀರಧಾರೆ ಹರೆಯೋದೇಯಿಲ್ಲ..

ಇಂತಹ ಒಂದು ಸ್ಟ್ರಾಂಗ್ ಡಿಸಿಜೆನ್ ತೆಗೆದುಕೊಂಡಂತಿದೆ. `ನಮ್ಮ ಕಲ್ಯಾಣಿ' ಅನ್ನೊ ಚಿತ್ರದಲ್ಲಿ ಶ್ರುತಿ ಅಳೋದೇಯಿಲ್ಲ. ಚಿತ್ರವಿಡಿ ಈಕೆಯ ಅಭಿನಯ ಇತರರು ಅಳುವಂತೆ ಮಾಡ್ತವೆ. ಹೊರತು ಥೀಯಟರ್ ನಲ್ಲಿ ಕುಳಿತ ಯಾವುದೇ ಒಬ್ಬ ಮಹಿಳಾ ಪ್ರೇಕ್ಷಕಿಯ ಕಣ್ಣು ಒದ್ದೆಯಾಗುವುದಿಲ್ಲ. ಜೊತೆಗೆ ತಂದ ಕರ್ಚಿಫೂ ಸೇಫ್ ಅಂಡ್ ಸೇಫ್...

ನಾಗಮ್ಮ ಅನ್ನೋ ಕ್ಯಾರೆಕ್ಟರ್ ನಲ್ಲಿ ಶ್ರುತಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ಪುಟ್ಟಣ್ಣ ಶೂಟಿಂಗ್ ಮನೆ'ಯಲ್ಲಿ ಚಿತ್ರದ ಶೂಟಿಂಗ್ ನಡೀತಾಯಿತ್ತು. ಕ್ಲೈಮ್ಯಾಕ್ಸ್ ಸೀನ್ ನ ಚಿತ್ರೀಕರಣದಲ್ಲಿ ಇಡೀ ಟೀಮ್ ಬ್ಯುಜಿಯಾಗಿತ್ತು. ಕೋರ್ಟ್ ಸೀನ್ ಈ ದೃಶ್ಯದಲ್ಲಿ ಶ್ರುತಿ ನಿಭಾಯಿಸಿದ ನಾಗಮ್ಮ ಕ್ಯಾರೆಕ್ಟರ್ ಎಂತದ್ದು ಅನ್ನೋ ಸಂಗತಿನೂ ಗೊತ್ತಾಯಿತು. ಅಂದ್ರೆ, ಶ್ರುತಿಯ ಈ ಪಾತ್ರ ಕಟೋರ ಹೃದಯದ...ಸೋಮಾರಿ ಅಮ್ಮನ ಲೇಪನ ಇರೋ ಮಹಾನ್ ಬಡವಿ ಪಾತ್ರವಿದು. ಮಗಳನ್ನ ಮಾರೀಯಾದ್ರೂ ಹೊಟ್ಟೆ ತುಂಬಿಸಿಕೊಳ್ಳುವ ಜಾಯಮಾನದ ನಾಗಮ್ಮ ಈಕೆ...

ತೆರೆ ಮೇಲಿನ ನಾಗಮ್ಮ ಹೀಗೆನೋ ಇದ್ದಾಳೆ. ಹಾಗಾಗಿ ಇಲ್ಲಿ ಕಣ್ನೀರು ಸುರಿಸೋ ಪ್ರಮೇಯವೇ ಇಲ್ಲ. ಆದ್ರೂ, ಎಂದಿನಂತೆ ಶ್ರುತಿ ಈ ಚಿತ್ರದಲ್ಲಿ ಒಂದಷ್ಟು ಕಣ್ಣು ತೇವಗೊಳಿಸಿಕೊಳ್ತಾರಂತೆ.ಹೀಗೆ ಅತ್ತಾಗಲೇ ಚಿತ್ರ ಶುಭಂ...


ಚಿತ್ರದ ಶೂಟಿಂಗ್ ನಲ್ಲಿ ಶ್ರುತಿ ನಕ್ಕಿದ್ದೆ ಜಾಸ್ತಿ..ನಗಿಸುದು ಕೂಡ ಸಿಕ್ಕಾಪಟ್ಟೆ. ಕೋರ್ಟ್ ದೃಶ್ಯ ಶೂಟ್ ಮಾಡುವಾಗ ಅಲ್ಲಿ ಸಿಕ್ಕಾಪಟ್ಟೆ ಲೈಟ್ಸ್ ಗಳಿದ್ದವು. ಇದರಿಂದ ವಕೀಲ್ ಪಾತ್ರ ನಿರ್ವಹಿಸಿದ್ದ ಇಬ್ಬರೂ ಕಲಾವಿದರು ಆಗ ಬೆರವಿನಿಂದ ತತ್ತರಿಸಿ ಹೋಗಿದ್ದರು. ಇದನ್ನ ನೋಡಿದ ಶ್ರುತಿ ಸ್ಪಾಟ್ ನಲ್ಲಿ ನಗೆ ಚಟಾಕೆ ಹಾರಿಸಿದರು. ಕಟ್ಕಟೆಯಲ್ಲಿ ನಿಂತ ನಾನು ಅಪರಾಧಿ. ಆದ್ರೆ, ಪ್ರಶ್ನೆ ಕೇಳುವ ವಕೀಲರೇ ಬೆವರುತ್ತಿದ್ದಾರಲ್ಲ ಅಂತ ಹೇಳಿ ಗರಂ ಆಗಿದ್ದ ಶೂಟಿಂಗ್ ತಂಡವನ್ನ ಒಂಚೂರು ಕೂಲ್ ಮಾಡಿದ್ರು...

ತೆರೆ ಮೇಲೆ ಅತ್ತರೂ ತೆರೆಯ ಹಿಂದೆ ಕಲಾವಿದರು ನಗು..ನಗುತ್ತಲೇ ಕೆಲಸ ನಿರ್ವಹಿಸುತ್ತಾರೆ. ಅದು ಅಳುವುದಿರಲಿ...ಬಿದ್ದು...ಬಿದ್ದು ನಗಿಸೋದಿರಲಿ. ಎಲ್ಲವನ್ನೂ ಒಂದೇ ಸಮನೇ ತೆಗೆದುಕೊಳ್ಳುತ್ತಾರೆ...ತಮ್ಮ ಮನರಂಜನಾ ಕೆಲಸವನ್ನ ಚಾಚು ತಪ್ಪದೇ ನಿರ್ವಹಿಸುತ್ತಿದಾರೆ...ಇದುವೇ ಕಲಾವಿದರ ಬದುಕಾ..ಗೊತ್ತಿಲ್ಲ..ತೆರೆ ಮೇಲೆ ಇವರ ನೈಜ ಬುದಕು ಕಾಣೊದಿಲ್ಲ ಅಲ್ಲವೇ...

-ರೇವನ್ ಪಿ.ಜೇವೂರ್

Sunday, June 27, 2010

ತಾರೆಯರ ಒಲವೇ ಸಾಕ್ಷಾತ್ಕಾರ....


ನಮ್ಮ ಹಳೆ ನಟಿಯರು ಅದೆಷ್ಟು ಚೆಂದ ಅಂತೀರಾ. ಈಗಿನ ನಾಯಕಿಯರನ್ನ ಅವರಿಗೆ ಹೋಲಿಸಲೂ ಸಾಧ್ಯವೇಯಿಲ್ಲ. ಅಷ್ಟು ಚೆಂದ ಅವರ ಸೌಂದರ್ಯ. ಅವರ ನಡೆ.ನುಡಿ..ಹಾವ-ಭಾವ. ಕಣ್ಣರಳಿಸುವ ಚೆಲುವು. ಈಗಲೂ ಒಂದು ಅದ್ಭತು ಕಲ್ಪನೆನೇ ಬಿಡಿ. ಇಂತಹ ಕಲಾವಿದರಲ್ಲಿ ನಮ್ಮ ಕನ್ನಡತಿಯರು ಅನೇಕರು. ಬಿ.ಸರೋಜಾ ದೇವಿಯಂತಹ ಚೆಲುವಾಂತ ಚೆಲುವೆಯನ್ನ ಅನೇಕರು ಮೆಚ್ಚಿದ್ದಾರೆ. ಕನ್ನಡದ ನೆಲದಲ್ಲಿ ಹುಟ್ಟಿದ ಜಮುನಾ ಕೂಡ ಅಂದ-ಚೆಂದಕ್ಕೆ ಒಂದು ಸಾಕ್ಷಾತ್ಕಾರ. ಹರಿಣಿಯಂತ ನಟಿಯೂ ಸಹ ಇದೇ ಸಾಲಿಗೆ ಸೇರುವ ಮತ್ತೊಂದು ಸುಂದರ ಶಿಲ್ಪ. ಕನ್ನಡತಿಯಲ್ಲದ ಅಗಿನ ಡಾ.ಅಂಜಿಲೀದೇವಿ ಸಹ ಈ ಸಾಲಿನ ಮತ್ತೊಂದು ಸುಂದರ ಸ್ಪರ್ಶ..

ಈ ಅಂದದ ಗೊಂಬೆಗಳಿಗೆ ಈಗ ವಯಸ್ಸಾಗಿದೆ. ಆ ಕಾಲದ ಚಿತ್ರ ರಸಿಕರ ಮನದಲ್ಲಿ ಹಾಗೇ ಉಳಿದಿರುವ ಈ ಕಲಾಮಣಿಗಳ ಮೊಮ್ಮಕ್ಕಳು ಬೆಳದು ನಿಂತಿದ್ದಾರೆ.ಇಷ್ಟಂದ್ಮೇಲೆ ಅದೆಷ್ಟು ವಸಂತಗಳು ಕಳೆದು ಹೋಗಿವೆ ಅಂತಹ ಊಹಿಸಿಕೊಳ್ಳಿ. ಆದ್ರೂ, ಒಂದು ಸತ್ಯ ರೀ..ಕಲಾವಿದರಿಗೆ ವಯಸ್ಸೇ ಆಗೋದಿಲ್ಲ. ಪದ್ಮಭೂಷಣ ಡಾ.ಬಿ.ಸರೋಜಾ ದೇವಿಯವರನ್ನ ನೋಡಿ ಅದೇ ಚೆಲುವು ಕಂಗೊಳಿಸುತ್ತದೆ.ಅದೇ ಕಲಾಸಕ್ತಿ ಉಕ್ಕುತ್ತದೆ...
ಹರಿಣಿಯವರನ್ನ ನೋಡಿದಾಗಲೂ ಇದೇ ಭಾವ ಮೂಡುತ್ತದೆ. ಅದೇ ಪುರಾಣ ಚೆಲುವು..ಅದೇ ಪುರಾತನ ಸಭ್ಯತೆ ಎದ್ದು ಕಾಣುತ್ತದೆ. ಜಮುನಾ ಅವರು ಸ್ವಲ್ಪ ಬದಲಾಗಿದ್ದಾರೆ. ಸಾಕ್ಷಾತ್ಕಾರದ ಜಮುನಾ ಇವರೇ ನಾ ಅಂತಾ ಒಂಚೂರು ಅನುಮಾನ ಬರುತ್ತದೆ. ಆದ್ರೆ, ಅದೇ ಜಮುನಾ ಮಾತಿಗಳಿದರೆ ಮುಗಿಯಿತು...

ಹಳೆ ದಿನಗಳು ಹಚ್ಚ ಹಸಿರಾಗುತ್ತವೆ. ಅಷ್ಟೊಂದು ಸುಂದರವಾಗಿಯೇ ವಾಕ್ಯಗಳ ಜೋಡಣೆ ಅವರ ಮಾತಲ್ಲಿ ಇರುತ್ತದೆ. ಇದೇನೋ ಸರಿ, ಇವರೆಲ್ಲ ನಿಮಗೆಲ್ಲಿ ಸಿಕ್ಕಿದರು ಅನ್ನೋ ಪ್ರಶ್ನೆ ನಿಮಗೆ ಈಗಾಗಲೇ ಮೂಡಿರಬಹುದು. ಹೌದು....! ಬಿ.ಸರೋಜಾ ದೇವಿ ಯವರು ಈ ಮೂವರು ತಾರೆಯರನ್ನ ಒಟ್ಟಿಗೆ ಸೇರಿಸುವ ಕೆಲಸ ಮಾಡಿದ್ದರು.ತಮ್ಮದೇ ಹೆಸರಲ್ಲಿ ನೀಡುವ ಪದ್ಮಭೂಷಣ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಮಭದಲ್ಲಿ ಇವರೆಲ್ಲ ಒಂದೇ ವೇದಿಕೆಯಲ್ಲಿ ಮಿನುಗುತ್ತಿದ್ದರು...
ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಈ ಹಳೆ ತಾರೆಯರ ಧನ್ಯ ಸಂಗಮ ಕಪ್ಪು-ಬಿಳುಪು ಚಿತ್ರದಷ್ಟೇ ಸುಂದರವಾಗಿತ್ತು.ಇಂತಹ ಒಂದು ವೇದಿಕೆಯನ್ನ ಈ ನಟಿಯರು ಚೆನ್ನಾಗಿಯೇ ಬಳಸಿಕೊಂಡರು. ತಮ್ಮ ಆ ದಿನಗಳ ಮಧುರ...ಮಧುರ ಆ ಮಂಜುಳಗಾನ ದಂತಹ ಸವಿ ಸವಿ ನೆನಪಿನ ಬುತ್ತಿಯನ್ನ ಇಲ್ಲಿ ಬಿಚ್ಚಿಟ್ಟರು.ಬಿ.ಸರೋಜಾ ದೇವಿಯಂತು ತಮ್ಮ ಈ ನೆಚ್ಚಿನ ನಟಿಯರಿಂದ ಏನೆಲ್ಲ ಕಲೆಯನ್ನ ಕಲಿತೆಯಂತ ಹೇಳಿಕೊಂಡ್ರು. ಮದ್ರಾಸ್ ನ ಆ ದಿನಗಳಲ್ಲಿ ಒಂದೇ ಕಡೇ ಹಲವು ಚಿತ್ರಗಳು ಶೂಟಿಂಗ್ ಆಗ್ತಿದ್ದವು.ಇಂತಹ ದಿನಗಳಲ್ಲಿ ಸರೋಜಾ ದೇವಿಯವರು ಡಾ.ಅಂಜಿಲಿದೇವಿಯರರಿಂದ ಸಾಕಷ್ಟು ಅಭಿನಯವನ್ನ ಕಲಿತಿದ್ದಾರೆ. ಹಾಗಂತ ಅಂಜಿಲಿದೇವಿ ಸರೋಜಾ ಅವರ ಗುರುಗಳಲ್ಲ. ಸ್ಟುಡಿಯೋದಲ್ಲಿ ಚಿತ್ರೀರಕಣದ ವೇಳೆ ಅಲ್ಲಿಗೆ ಹೋಗಿ ನಟನೆಯ ತಿಳಿದುಕೊಂಡಿದ್ದಾರೆ.

ಅಂಜಿಲಿಯಮ್ಮನ ಥರವೇ ಹರಿಣಿ..ಜಮುನಾ ಅವರ ಕಲಾರಾಧನೆ ಮನೋಜ್ಞ ಅಭಿನಯ ಸರೋಜಾದೇವಿಯರಿಗೆ ಸ್ಪೂರ್ತಿಯಾಗಿದೆ. ಇದೇ ಒಂದು ಒಲವಿನಿಂದಲೋ ಏನೋ. ಸರೋಜಾ ದೇವಿಯವರು ತಾವು ದುಡಿದ ದುಡ್ಡಿನಲ್ಲಿಯೇ ತಮ್ಮ ಹೆಸರಿನ ರಾಷ್ಟ್ರ ಪ್ರಶಸ್ತಿಯನ್ನ ನೀಡಿದ್ದಾರೆ.ತಲಾ ಒಂದೊಂದು ಲಕ್ಷ ನಗದು ಹಣವನ್ನೂ ನೀಡಿ ಈ ಮೂವರು ತಾರೆಯರನ್ನ ಗೌರವಿಸಿದ್ದಾರೆ..

ಇವರ ಕಾರ್ಯ ಇದೇ ರೀತಿನೇ ಮುಂದುವರೆಯಲಿದೆ. ಭಾರತೀಯ ವಿದ್ಯಾಭವನ ಸರೋಜಾ ದೇವಿ ಇಲ್ಲದೇ ಇದ್ದರೂ ಸಹ ಮಹಿಳಾ ಕಲಾವಿದೆಯರನ್ನ ಹುಡುಕಿಕೊಂಡು ಸೂಕ್ತ ವ್ಯಕ್ತಿಗಳಿಗೆ ಪದ್ಮಭೂಷಣ ಸರೋಜಾ ದೇವಿ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲಿದೆ. ಈ ಒಂದು ಹೊಸ ಹೆಜ್ಜೆ ಸರೋಜಾ ದೇವಿಯವರ ಚಿತ್ರಪಯಣದಲ್ಲಿಯ ಕಲಾರಾಧನೆಯ ಹೊಸ ಸಾಕ್ಷಾತ್ಕಾರದ ಪ್ರತೀಕದಂತಿದೆ....

-ರೇವನ್ ಪಿ.ಜೇವೂರ್

Wednesday, June 23, 2010

ದರ್ಬಾರ್ ಇದು ಕಾಮಿಡಿ ದರ್ಬಾರ್...



ಕನ್ನಡ ಕಾಮಿಡಿಯನ್ ಯಾರು..ಇಂತಹ ಪ್ರಶ್ನೆಗಳಿಗೆ ಈಗ ಹಲವು ಉತ್ತರಗಳು ಸಿಗುತ್ತವೆ. ಆಗ ಕೇವಲ ಕೆಲವೇ ಕೆಲವು. ನರಸಿಂಹರಾಜು,ದಿನೇಶ್,ಮುಸ್ರಿಕೃಷ್ಣಮೂರ್ತಿ, ಆದರೆ, ಇವರ ಕಾಲ ಇತಿಹಾಸ ಪುಟ ಸೇರಿದ ನಂತರ ಅನೇಕರು ಬಂದರು. ಈಗಲೂ ಬರುತ್ತಿದ್ದಾರೆ.ಚಿತ್ರದ ನಾಯಕರೂ ಹಾಸ್ಯ ಮಾಡುವುದನ್ನ ಕಲೆತಿದ್ದಾರೆ. ರಮೇಶ್ ಅರವಿಂದ್ ಅಂತಹ ನಟರು ಕಾಮಿಡಿ ಟೈಮಿಂಗ್ ಟ್ರೈ ಮಾಡುವ ನಾಯಕ ಅಂದ್ರೆ, ತಪ್ಪಾಗೋದಿಲ್ಲ. ಸಾಧು ಕೋಕಿಲ ರಂತಹ ನಟರಿಗೆ ಲ್ಯಾಂಗ್ಜೇಜೆ ಬೇಡ. ಸ್ಕ್ರೀನ್ ಮೇಲೆ ಬಂದರೆ ಸಾಕು. ನಗೆ ತಾನೇ ಚಿಮ್ಮುತ್ತದೆ. ರಂಗಾಯಣ ರಘು ಎಲ್ಲ ಥರದ ಕ್ಯಾರೆಕ್ಟರ್ ಹ್ಯಾಂಡಲ್ ಮಾಡಿ ಕಾಮಿಡಿ ಮಾಡಬಲ್ಲ ಚತುರ ಕಲಾಕಾರ್...

ಇವರಲ್ಲಿ ಈ ಮೂವರು ಒಟ್ಟಿಗೆ ಸೇರಿ ಒಂದೇ ಸ್ಕ್ರೀನ್ ಮೇಲೆ ಬಂದರೇ ಹೇಗೆ. ಇಂತಹದ್ದೇ ಒಂದು ಕೆಲಸ ಕನ್ನಡದಲ್ಲಿ ನಡೆದಿದೆ.`ಹೆಂಡ್ತಿರ್ ದರ್ಬಾರ್' ಚಿತ್ರದಲ್ಲಿ ಸಾಧು ಕೋಕಿಲ್ ಮತ್ತು ರಂಗಾಯಣ ರಘು ನೆರೆ ಹೊರೆಯವರಾಗಿದ್ದಾರೆ. ಇವರ ಮಧ್ಯೆ ನಾಯಕ ರಮೇಶ್ ಅರವಿಂದ್ ಅವರ ಕಾಮಿಡಿ ಟಚ್ ಬೇರೆ.
ಇಷ್ಟಂದ್ರೆ ಹೇಳಬೇಕೆ.ಕೌಟುಂಬಿಕ ಸಮಸ್ಯೆಗಳ ಜೊತೆ..ಜೊತೆಗೆ ಖ್ಯಾತ್ ನಿರ್ದೇಶಕ ವಿ.ಶೇಖರ್ ಹಾಸ್ಯಲೇಪತಿ ಚಿತ್ರ ಮಾಡಿದ್ದಾರೆ.

ಆದ್ರೆ, ನಿಮಗೆ ಈಗಾಗಲೆ ಅನಿಸಿರಬಹುದು. ಕನ್ನಡದಲ್ಲಿ ವಿ.ಶೇಖರ್ ಅನ್ನೊ ನಿರ್ದೇಶಕರೇ ಇಲ್ಲವಲ್ಲ.ಯಾರಿದು ಅಂತ ನಿಮ್ಮಲ್ಲಿ ಪ್ರಶ್ನೆ ಹುಟ್ಟಿಕೊಂಡಿರಬಹುದು. ನಿಜ, ಇವರು ಕನ್ನಡದವರಲ್ಲ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರು. ಸರಿ ಸುಮಾರು 18 ಚಿತ್ರಗಳನ್ನ ಮಾಡಿದ್ದಾರೆ.ತಮಿಳನಲ್ಲಿ ಇವರ ಈ 18 ಸಿನೆಮಾಗಳಲ್ಲಿ ಬಹುತೇಕ ಚಿತ್ರಗಳು ಹಿಟ್ ಆಗಿವೆ. ಅದೇ ಚಿತ್ರಗಳಲ್ಲಿ ಕೆಲವು ಕನ್ನಡಕ್ಕೂ ಬಂದಿವೆ. ಮುದ್ದಿನ ಮಾವ,ಯಾರಿಗೆ ಸಾಲುತ್ತೇ ಸಂಬಳಗಳಂತಹ ಕನ್ನಡದ ಕೌಟುಂಬಿಕ ಚಿತ್ರಗಳೆಲ್ಲ ಇವರ ಅನುಭವದಿಂದಲೇ ಹೊರಹೊಮ್ಮಿ ಕನ್ನಡಕ್ಕೆ ಬಂದಿವೆ.

ಕನ್ನಡದ ಹೆಂಡ್ತಿರ್ ದರ್ಬಾರ್ ಕೂಡ ತಮಿಳು ಭಾಷೆಯಲ್ಲಿ ಸಿದ್ಧವಾಗಿತ್ತು. ತಮ್ಮ ಚಿತ್ರಗಳ ಬಿಗ್ ಫ್ಯಾನ್ ರಾಮಚಂದ್ರನ್ ಒತ್ತಾಯದ ಮೇರೆಗೆ ಖುದ್ ವಿ.ಶೇಖರ್ ಕನ್ನಡಕ್ಕೆ ಬಂದು `ಹೆಂಡ್ತಿರ ದರ್ಬಾರ್ 'ಮಾಡಿಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು,ರಮೇಶ್ ಅರವಿಂದ್ ಅವರುಗಳ ಕಡೆಯಿಂದ ತಮ್ಮ ಕಲ್ಪನೆಯಲ್ಲಿ ಹೇಗಿದೆಯೋ..ಹಾಗೇನೆ ದರ್ಬಾರ್ ಸಿದ್ಧಗೊಳಸಿದ್ದಾರೆ.

ಬರುವ ಜುಲೈ 2 ರಂದು ಚಿತ್ರ ತೆರೆಗೂ ಬರಲಿದೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅಂತ ಈಗಲೇ ಹೇಳೊದು ಕಷ್ಟ. ಚಿತ್ರ ಬಂದ ಮೇಲೆ ಇದರ ಬಗ್ಗೆ ಒಂದು ವಿಮರ್ಶೆ ಮಾಡಬಹುದು. ಆದ್ರೆ, ಚಿತ್ರೀಕಣದ ಸಂದರ್ಭದಲ್ಲಿಯ ಕೆಲವು ಸನ್ನಿವೇಶಗಳನ್ನ ನಾಯಕ ರಮೇಶ್ ಅರವಿಂದ್ ಈಗ ಹಂಚಿಕೊಂಡಿದ್ದಾರೆ.ನಿರ್ದೇಶಕ ವಿ.ಶೇಖರ್ ರಮೇಶ್ ಅವರಿಗೆ ಹೆಂಡ್ತಿ ಥರವೇ ಕಾಡಿದ್ದಾರೆ. ಚಿತ್ರದ ವೇಳೆ ತಮಗೆ ಹೇಗೆ ಬೇಕೊ. ಹಾಗೆ ಸೀನ್ಸ್ ಬರದೇ ಹೋದ್ರೆ ಹೆಂಡ್ತೀರ ಥರ ಹಠ ಮಾಡ್ತಿದ್ದರಂತೆ.ಹಾಗೇನಾದ್ರೂ ಅದು ಅಸಾಧ್ಯವೆನಿಸಿದಾಗ ಹೆಂಡ್ತಿ ಮುದ್ದು ಮಾಡೋ ಹಾಗೆ ಮುದ್ದು ಮಾಡಿ..ಐಸ್ ಇಟ್ಟು ಕೆಲಸ ತೆಗೆತಿದ್ದರಂತೆ..

ಹೊಸ ಹುಡುಗಿ ಅಂಬಿಕಾ ಎಕ್ಸ್ ಪಿಯರೆನ್ಸ್ ಹೀಗೆಲ್ಲ ಇಲ್ಲ ಬಿಡಿ. ಹೆಚ್ಚು ಸಾಧು ಅವರೊಟ್ಟಿಗೇನೆ ಈ ರಂಗಭೂಮಿ ಕಲಾವಿದೆಯ ಸೀನ್ ಗಳಿವೆ,ಸಂಭಾಷಣೆಗಳಿವೆ. ಹಾಗಾಗಿ, ಈ ನಟಿಗೆ ಸಾಕಷ್ಟು ಹಾಸ್ಯಭರಿತ ಸನ್ನಿವೇಷಗಳು ಎದುರಾಗಿವೆ.ತೆರೆಯ ಹಿಂದಿನ ಶೂಟಿಂಗ್ ಅನುಭವದಲ್ಲಿ ಒಂದು ಸನ್ನಿವೇಷವನ್ನ ಹಂಚಿಕೊಂಡ್ರು. ಸಾಧು ಅವರಿಗೆ ಅಂಬಿಕಾ ಹೊಡೆಯುವ ಸೀನ್ ಅದು. ಡೈರೆಕ್ಟರ್ ಟೇಕ್ ಹೇಳೊದೇ ತಡ. ಅಂಬಿಕಾ ಹೊಡೆದದ್ದೇ ಹೊಡದದ್ದು. ಇದನ್ನ ನೋಡಿದವರೆಲ್ಲ ಸಖತ್ ಎಂಜಾಯ್ ಮಾಡಿದ್ರಂತೆ. ಸೀನ್ ಮುಗಿಯೋದೇ ತಡ. ನಿಜವಾಗಲೂ ಸೀನ್ ಸಖತ್ ಆಗಿತ್ತು ಅಂತ ಹೊಗಳಿದರಂತೆ..

ಆದ್ರೆ, ರಂಗಾಯಣ ರಘು ಆಗಲಿ, ಸಾಧು ಕೋಕಿಲ ಆಗಲಿ.ದರ್ಬಾರ್ ನ ದರ್ಬಾರ್ ಗಿರಿ ಹಂಚಿಕೊಳ್ಳು ಬಂದಿರಲಿಲ್ಲ. ಇದು ಸಿಗದೇ ಇದ್ದರೇ ಏನಾಯ್ತು.ಇವರ ಹಾಸ್ಯವನ್ನ ತೆರೆ ಮೇಲೆ ನೋಡಿಯೇ ಎಂಜಾಯ್ ಮಾಡೋಣ ಅಲ್ಲವೇ...

ರೇವನ್ ಪಿ.ಜೇವೂರ್

Tuesday, June 22, 2010

ಕಾಮಿಡಿ ಓದಿ ಮಜಾ ಮಾಡಿ...



ಮಜಾ ಮಾಡಿ...ಹೌದು...ಇಲ್ಲೊಂದು ಬ್ಲಾಗ್ ಇದೇ ರೀ..ತುಂಬಾ ಚೆನ್ನಾಗಿದೆ. ಯಾರದು..ಏನೂ..ಇದಂತು ಗೊತ್ತಿಲ್ಲ. ಬ್ಲಾಗ್ ನಲ್ಲೂ ಈ ವಿವರ ನನಗೆ ದೊರೆತ್ತಿಲ್ಲ. ಅದ್ರೆ, ಇಲ್ಲಿಯ ಬರಹಗಳು ರಾಜಕೀಯ ಆಗು-ಹೋಗುಗಳ ಮೇಲೆ ಇದು ಬೆಳಕು ಚೆಲ್ಲುತ್ತದೆ. ಪ್ರಚಲಿತ ವಿಷಯಗಳ ಮೇಲು ಕ್ಷಕಿರಣವಿದೆ. ಹಾಗಂತ ಇದು ಗಂಭೀರ ಬ್ಲಾಗ್ ಅಲ್ಲ. ಇಲ್ಲಿ ಹಾಸ್ಯಕ್ಕೆ ತುಂಬಾನೇ ಜಾಗವಿದೆ. ಜಾಗವೆಂದ್ರೆ ಇಡೀ ಬ್ಲಾಗ್ ನ ಬರಹವೆಲ್ಲ ಹಾಸ್ಯಮಯ....ಆನಂದಮಯ...

ಬ್ಲಾಗ್ ನ ಟೈಟಲ್ ನಲ್ಲಿಯೇ 'ಮಜವಿದೆ' ಇದರ ಮುಂದೆ ವಾಣಿ ಬೇರೆ. ಈ ಎರಡೂ ಪದಗಳ ಮಧ್ಯೆ ಅಗಸನ ಕತ್ತೆಯ ಚಿತ್ರ. ಕತ್ತೆ ಚಿತ್ರದ ಬ್ಲಾಗ್ ನಲ್ಲಿ ಸಾಕಷ್ಟು ಬರಹಗಳಿವೆ. ಸುಮಾರು 2005 ರಿಂದಲೇ ಇದು ಅಪ್ ಡೇಟ್ ಆಗಿದೆ. ಅದೆಷ್ಟು ಹ್ಯೂಮರಸ್ ಸಾಹಿತ್ಯವಿಲ್ಲಿದ ಅಂದ್ರೆ,ಹಾಸ್ಯಪ್ರೇಮಿಗಳಿಗೆ ಇದೊಂದು ಸುಂದರ ತಾಣವೇ ಬಿಡಿ.

ಇದನ್ನ ಸದಾ ಓದುತ್ತಿದ್ದ ನನ್ನ್ ಗೆಳೆಯ ಈ ಬ್ಲಾಗ್ ಬಗ್ಗೆ ನನಗೆ ಹೇಳಿದ.`ಮಜಾವಾಣಿ' ಯಂತ ಬ್ಲಾಗಿದೆ. ಅಗ ಇದು ದಿನವೂ ಇದು ಅಪಡೇಟ್ ಆಗ್ತಿತ್ತು. ಆದ್ರೆ, ಅದೇಕೋ ಇದಕ್ಕೆ ಬರೆಯುತ್ತಿದ್ದ ವ್ಯಕ್ತಿ ಬರೆಯುದನ್ನೇ ನಿಲ್ಲಿಸಿದ್ದಾರೆ.ಹಾಗೆ ಇದರಲ್ಲಿಯ ಕೊನೆಯ ಲೇಖನ ಆಗಷ್ಟ್ 9 2008 ಅಂತ ಇತಿಹಾಸ ಪುಟದ ಐತಿಹಾಸಿಕ ಎಂಡ್ ಹೇಳುತ್ತದೆ. ಆದ್ರೂ,ಇದರಲ್ಲಿಯ ಬರಹಗಳು ಓಲ್ಡ್ ಈಜ್ ಗೋಲ್ಡ್ ಅನ್ನೋ ಥರವೇ ಈಗಲೂ ಹಾಸ್ಯದ ಹೊನಲು ಹರಿಸುತ್ತವೆ.ಇಂತವುಗಳಲ್ಲಿ ನನ್ ಸ್ನೇಹಿತ ಓದಿದ ಕೆಲವು ಹ್ಯೂಮರಸ್ ಸಾಲುಗಳು ನಿಮಗಾಗಿ...

ಮಜಾವಾಣಿ ವರದಿಗಾರ ಮತ್ತು ಶ್ರೀ..ಶ್ರೀ ರವಿಶಂಕರ್ ನಡುವಿನ ಮಾತು-ಕಥೆ ಸಂದರ್ಭ..

ಮಜಾವಾಣಿ ವರದಿಗಾರ: ಶ್ರೀ ರವಿಶಂಕರ್ ಬಳಿ ಬಂದು. ನೀವು ಸಿತಾರ್ ನುಡಿಸುತ್ತಿದ್ದವರಲ್ಲವೇ...?

ಶ್ರೀ ರವಿಶಂಕರ್; ಇಲ್ಲಾ..ಇಲ್ಲಾ...ನಾನ್ ಸಿತಾರ್ ರವಿಶಂಕರ್ ಅಲ್ಲ. ಆರ್ಟ್ ಆಫ್ ಲಿವಿಂಗ್ ರವಿಶಂಕರ್.

ಮಜಾವಾಣಿ ವರದಿಗಾರ ಮತ್ತೊಂದು ಪ್ರಶ್ನೆ.

ಆರ್ಟ್ ಆಫ್ ಲಿವಿಂಗ್ ಅಂದ್ರೆ, ಬದುಕುವವರ ಕಲೇನಾ...

ಶ್ರೀ ರವಿಶಂಕರ್: ಇಲ್ಲಾ...ಇಲ್ಲಾ. ನಾನು ಬದುಕುವು ಹೇಗೆಂದು ಹೇಳಿಕೊಡ್ತಿನಿ...


ಮಜಾವಾಣಿ ಮತ್ತೊಂದು ಪ್ರಶ್ನೆ: ಸತ್ತವರಿಗೆ ಬದುಕುವ ಕಲೆ ಹೇಳಿಕೊಡಬಹುದುಲ್ಲವೆ...?

ಶ್ರಿ ರವಿಶಂಕರ್; ನಾನು ಬದುಕಿದವರಿಗೆ ಬದುಕುವ ಕಲೆ ಹೇಳಿ ಕೊಡ್ತಿನಿ...


ಹಾಸ್ಯಭರಿತ ಬರಹಗಳು ಇಲ್ಲಿ ಇನ್ನು ಅನೇಕ.ವರದಿ ರೂಪದಲ್ಲಿಯೇ ಇರುವ ಈ ಎಲ್ಲ ಹ್ಯೂಮರಸ್ ಸಾಲುಗಳು ಸಂಬಂಧಪಟ್ಟವರಿಗೆ ಚಾಟಿ ಪ್ರಯೋಗಿಸಿದಂತಿವೆ.ತಿದ್ದಿಕೊಳ್ಳಿ ನನ್ನ `ಬುದ್ದು' ಮಕ್ಕಳೆ ಅನ್ನೋ ಮಾತು ಇಲ್ಲಿ ಚುಚ್ಚಿ ಹೇಳುತ್ತವೆ.ಇಂತಹ ಉತ್ತಮ ಬ್ಲಾಗ್ ಗೆ ಆ ಬರಹಗಾರ ಕಳೆದ 2 ವರ್ಷದ ಹಿಂದೇನೆ ವಿದಾಯ ಹೇಳಿದ್ದಾರೆ. `ಮಜಾವಾಣಿ.ನೆಟ್' ಅನ್ನೊ ಮತ್ತೊಂದು ಹೊಸ ವಿಳಾಸವನ್ನ ಕೊಟ್ಟು ಹೋಗಿದ್ದಾರೆ.ಇಲ್ಲಿವರೆಗೂ ನಾನ್ ಹೇಳಿದ ವಿಷಯಗಳ ಬ್ಲಾಗ್ ನ ವಿಳಾಸ ಮಜಾವಾಣಿ ಡಾಟ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್. ಇಲ್ಲಿಗೆ ಹೋದ್ರೆ ಸಾಕು. ಹಳೆ ಉಪ್ಪಿನಕಾಯಿ ಥರದ ಟೇಸ್ಟಿ ಹಾಸ್ಯ ಬರಹಗಳಿವೆ.ಓದಿ ಎಂಜಾಯ್ ಮಾಡಿ. ನಾನಂತು ದಿನವೂ ಒಂದೊಂದಾಗಿ ಓದುತ್ತಿದ್ದೇನೆ...


ರೇವನ್ ಪಿ.ಜೇವೂರ್

Monday, June 21, 2010

ನಾನು ನನ್ನ ಕನಸು...


ನಾನು ನನ್ನ ಕನಸು ಚೆನ್ನಾಗಿದೆ. ಕನ್ನಡ ಚಿತ್ರರಂಗದ ಸದ್ಯದ ದಿನಗಳಲ್ಲಿ ಇದೊಂದು ಹೃದಯ ಸ್ಪರ್ಶಿ ಚಿತ್ರ. ತಾಯಿ-ಮಗನ ಚಿತ್ರಗಳು ಈ ಹಿಂದೆ ಬಂದು ಹೋಗಿವೆ. ಆದರೆ, ಇಲ್ಲಿ ತಂದೆ-ಮಗಳ ನಡುವಿನ ಪ್ರೀತಿನೇಯಲ್ಲ. ಇಲ್ಲಿ ಬರುವ ಕಥೆಯಲ್ಲಿ ಹಲವು ಪಾತ್ರಗಳು ಬಂದು ಹೋಗುತ್ತವೆ. ಆದ್ರೂ, ಇಲ್ಲಿ ತಂದೆಯ ಪ್ರೀತಿನೇ ಬಹುಮುಖ್ಯವಾದ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಮಗನಿಗೆ ತಾಯಿಯ ಕಡೆಗೆ ಒಲವು ಜಾಸ್ತಿ. ತಂದೆಗೆ ಹೆಣ್ಣುಮಗಳ ಮೇಲೆ ಅತೀವವಾದ ಪ್ರೀತಿ. ಇದನ್ನೇ ಪ್ರಮುಖ ಎಳೆಯನ್ನಾಗಿಟ್ಟುಕೊಂಡು ನಟ-ನಿರ್ಮಾಪಕ ಪ್ರಕಾಶ್ ರೈ ಈ ಚಿತ್ರವನ್ನ ಕನ್ನಡಿಗರಿಗೆ ಕೊಟ್ಟಿದ್ದಾರೆ...

ಆದ್ರೆ, ಈ ಮೊದಲು ಇದೇ ಕಥೆನೇ `ಅಭಿಯುಂ ನಾನುಂ'ಎಂಬ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ತೆರೆ ಕಂಡಿದೆ.ಪ್ರಕಾಶ್ ರೈ ಇಲ್ಲೂ ಅದೇ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಆದರೆ, ಕನ್ನಡದ ವಿಷಯಕ್ಕೆ ಬಂದಾಗ ಸ್ವತ: ಪ್ರಕಾಶ್ ರೈ ನಿರ್ದೇಶನ ಮಾಡಿದ್ದಾರೆ.ಸಂಭಾಷಣೆಯನ್ನೂ ತಾವೇ ಬರೆದಿದ್ದಾರೆ.

ಇಷ್ಟೊಂದು ಅಂಶದ ಚಿತ್ರದಲ್ಲಿ `ಕನಸು' ಪ್ರಕಾಶ್ ರೈ ಅವರ ಒಬ್ಬಳೇ ಮಗಳು. ಇವಳು ಹುಟ್ಟಿದಾಗ ಅಪ್ಪ ಉತ್ತಪ್ಪನಿಗೆ ಎಲ್ಲಿಲ್ಲದ ಸಡಗರ...ಸಂಭ್ರಮ. ತಾಯಿಗಿಂತಲೂ ಹೆಚ್ಚಿನ ಪ್ರೀತಿ ತೋರುವ ಅಪ್ಪ..ಮುದ್ದಿನ ಮಗಳು ಏನೇ ಕೇಳಲಿ ಇಲ್ಲವೇ ಇಲ್ಲ ಅನ್ನುವ ತಂದೆ.
ದಿನಗಳು ಉರುಳಿದಂತೆ..ಕ್ಷಣಗಳು ಮಧುರವಾದಂತೆ ಈ ಅಪ್ಪನ ಪ್ರೀತಿ ಕಡಿಮೆ ಆಗೋದೆಯಿಲ್ಲ. ಆದ್ರೂ, ಅತೀಯಾದ್ರೆ ಎಲ್ಲವೂ ಕಷ್ಟ ಅನ್ನೋ ಮಾತಿದೆಯಲ್ಲ. ಇದು ಇಲ್ಲೂ ನಿಜವಾಗುತ್ತದೆ. ಪ್ರೀತಿಯ ಮಗಳು ಬೆಳದಂತೆಲ್ಲ ಒಂದೊಂದೆ ಶಾಕ್ ಕೊಡ್ತಾಳೆ...

ಇಂತಹ ಅನಿರೀಕ್ಷಿತ ಬದಲಾವಣೆಗಳು ಮುಂದೆ ಅಪ್ಪನಿಗೆ ಕಷ್ಟವಾಗ್ತವೆ. ಮಗಳು ದೂರವಾದರೆ, ಎಷ್ಟು ಕಷ್ಟ.ಪ್ರೀತಿಯ ಅಪ್ಪನಿಗೆ ಇನ್ನಿಲ್ಲದ ಆಘಾತಗಳು. ಇವುಗಳನ್ನ ಪ್ರಕಾಶ್ ರೈ ತುಂಬಾನೇ ಚೆನ್ನಾಗಿ ತೋರಿದ್ದಾರೆ.ನಟ ಅಚ್ಚುತ್ ರಾವ್ ನಿಭಾಯಿಸಿದ ಬ್ರಿಜೇಷ್ ಪಟೇಲ್ ಕ್ಯಾರೆಕ್ಟರ್ ಇಲ್ಲಿ ಆಗಾಗ ನಗೆಯ ಹೊನಲು ಹರಿಸುತ್ತದೆ.ಸಿಹಿಕಹಿ ಚಂದ್ರು ಅವರ ಪಾತ್ರವೂ ಇದೇ ಕೆಲಸವನ್ನ ಮಾಡ್ತದೆ. ಇದಕ್ಕೆ ಸಮ್ ಎಕ್ಸಾಂಪಲ್ ಕೆಳಗಿವೆ ನೋಡಿ...

ನಟ ರಮೇಶ್- ಪ್ರಕಾಶ್ ನಡುವಿನ ಸಂಭಾಷಣೆ ವೇಳೆ..

ಸಿಹಿಕಹಿ ಚಂದ್ರು: ಉತ್ತಪ್ಪ ನಿಮ್ಮ ಸ್ನೇಹಿತರಾ..?

ಪ್ರಕಾಶ್ ರೈ: ಇಲ್ಲಾ..ನನ್ನ ಕೊಲೆ ಮಾಡೋದಕ್ಕೆ ಬಂದಿದ್ದಾರೆ. ರೇಟ್ ಮಾತಾಡ್ತಾಯಿದ್ದಿನಿ...

ಇಂತಹ ಹಲವು ಸನ್ನಿವೇಷಗಳಿವೆ. ಚಿತ್ರದಲ್ಲಿಯ ಈ ದೃಶ್ಯಗಳು ತುಂಬಾನೇ ಖುಷಿಕೊಡ್ತವೆ. ಅಪ್ಪ-ಮಗಳ ಮಮತೆಯ ನಡುವೇ ಒಂಚೂರು ಉಪ್ಪಿನ ಕಾಯಿ ಥರ ಟೇಸ್ಟಿ..ಟೇಸ್ಟಿ. ಚಿತ್ರದಲ್ಲಿಯ ಹಾಡುಗಳು ಕೂಡ ಇದೇ ಕೆಲಸವನ್ನ ಮಾಡ್ತವೆ. ಹಂಸಲೇಖ ಅವರ ರುಚಿಕಟ್ಟಾದ ಸಾಹಿತ್ಯ, ತಣ್ಣನೆಯ ಮಾಧುರ್ಯತೆಯ ಅನುಭವ ನೀಡುವ ಸಂಗೀತ ಎದೆ ತಟ್ಟುತ್ತವೆ. ಅಪ್ಪಂದಿರಲ್ಲಿ ಅಡಗಿದ ಪ್ರೀತಿಯನ್ನ ಹೊರಗೆಡುವುಂತೆ ಮಾಡ್ತವೆ..

ಆದರೆ, ಇಷ್ಟೆಲ್ಲ ಇರುವ ಚಿತ್ರಕ್ಕೆ ಮೊದಲ ದಿನ ಉತ್ತಮ ರೆಸ್ಪಾನ್ಸ್ ಬಂತು. ಈಗಲೂ ಅದೇ ಅಭಿಪ್ರಾಯವಿದೆ. ಆದ್ರೂ, ಥೀಯಟರ್ ಗೆ ಬರುವ ಜನ ಕಡಿಮೇನೆ ಅನಿಸುತ್ತದೆ. ಒಂದು ಸಂಡೆ ನಾನು ನನ್ನ ಹುಡುಗಿ ಚಿತ್ರ ನೋಡಲು ಹೋಗಿದ್ದೇವು. ಬೆಂಗಳೂರಿನ `ಭೂಮಿಕಾ' ಥೀಯಟರ್ ನಲ್ಲಿ ಈ ಚಿತ್ರ ನೋಡಿ ತುಂಬಾನೇ ಖುಷಿಪಟ್ಟೆವು.ಎಲ್ಲ ಅಪ್ಪಂದಿರುಗಳಿಗೆ ಹೇಳಿ ಮಾಡಿಸಿದಂತಹ ಚಿತ್ರವಿದು.

- ರೇವನ್ ಪಿ.ಜೇವೂರ್